Breaking; ಕೆ. ಚಂದ್ರಶೇಖರ ರಾವ್ ಭೇಟಿಯಾದ ಎಚ್. ಡಿ. ಕುಮಾರಸ್ವಾಮಿ
ಬೆಂಗಳೂರು, ಡಿಸೆಂಬರ್ 09; ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಭೇಟಿ ಮಾಡಿದರು. ಬಿಆರ್ಎಸ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶುಕ್ರವಾರ ಎಚ್. ಡಿ. ಕುಮಾರಸ್ವಾಮಿ ಹೈದರಾಬಾದ್ಗೆ ಭೇಟಿ ನೀಡಿದ್ದರು. ಬಿಆರ್ಎಸ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೆ. ಚಂದ್ರಶೇಖರ ರಾವ್ಗೆ ಶುಭ ಹಾರೈಸಿದರು.
ಬಿಆರ್ಎಸ್ ಜೊತೆ ಮೈತ್ರಿ; ಜೆಡಿಎಸ್ ಲೆಕ್ಕಾಚಾರವೇನು?
ತೆಲಂಗಾಣದ ಟಿಆರ್ಎಸ್ ಪಕ್ಷವುಕೆ. ಚಂದ್ರಶೇಖರ ರಾವ್ ನೇತೃತ್ವದಲ್ಲಿ ಭಾರತ್ ರಾಷ್ಟ್ರ ಸಮಿತಿ ಎಂಬ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷವಾಗಿದೆ. ಚುನಾವಣಾ ಆಯೋಗ ಸಹ ಇದಕ್ಕೆ ಒಪ್ಪಿಗೆ ನೀಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಎಚ್. ಡಿ. ಕುಮಾರಸ್ವಾಮಿ ಸಾಕ್ಷಿಯಾದರು.
ಆಪರೇಷನ್ ಕಮಲ ಆರೋಪ: ವಿಡಿಯೋ ಬಿಡುಗಡೆ ಮಾಡಿದ ತೆಲಂಗಾಣ ಸಿಎಂ
ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಟ್ವೀಟ್ ಮಾಡಿದ್ದು, 'ಭಾರತದ ರಾಜಕಾರಣದಲ್ಲಿ ಬಿಆರ್ಎಸ್ ಆರಂಭ ಮಹೋನ್ನತ ಮೈಲುಗಲ್ಲು. ಶೋಷಿತರ, ದಮನಿತರ, ಕೃಷಿ ಕಾರ್ಮಿಕರ ದನಿಯಾಗಿ ಈ ಪಕ್ಷ ಕೆಲಸ ಮಾಡಲಿದೆ' ಎಂದು ಹೇಳಿದ್ದಾರೆ.
ನಮ್ಮದು ರಾಷ್ಟ್ರೀಯ ಪಕ್ಷ, ಹೆಬ್ಬೆಟ್ಟು ಪಾರ್ಟಿ ಜೆಡಿಎಸ್ ಪಾರ್ಟಿ ಅಲ್ಲ: ಆರ್. ಅಶೋಕ್
'ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪರಿಪೂರ್ಣ ಸಹಕಾರ ನೀಡುವುದಾಗಿ ಘೋಷಣೆ ಮಾಡಿದ ಶ್ರೀ ಕೆಸಿಆರ್ ಅವರಿಗೆ ನಾನು ಆಭಾರಿ' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
'ರಾಷ್ಟ್ರ ರಾಜಕಾರಣದಲ್ಲಿ ನವ ಸಮೀಕರಣಕ್ಕೆ ನಾಂದಿ ಹಾಡಲಿರುವ ಬಿಆರ್ಎಸ್ ಪಕ್ಷಕ್ಕೆ ಅಮೋಘ ಯಶಸ್ಸು ಸಿಗಲಿ. ಶ್ರೀ ಕೆಸಿಆರ್ ಅವರ ಆಶಯಗಳು, ಕನಸುಗಳೆಲ್ಲವೂ ನನಸಾಗಲಿ. ಅವರೊಂದಿಗೆ ನಾವು ಸದಾ ಇರುತ್ತೇವೆ' ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಜೊತೆಗೆ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ ಹಾಗೂ ಪಕ್ಷದ ಕೆಲವು ಮುಖಂಡರು ಪಾಲ್ಗೊಂಡಿದ್ದರು.
ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಬಿಆರ್ಎಸ್ ಪಕ್ಷ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಆರ್ಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ.