ಟ್ವಿಟ್ಟರ್, ಫೇಸ್ಬುಕ್ಗೆ ಬಂದ್ರು ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಮೇ 21 : ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಾಮಾಜಿಕ ಜಾಲ ತಾಣಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿ ಕುಮಾರಸ್ವಾಮಿ ಅವರು ಅಧಿಕೃತವಾಗಿ ಖಾತೆ ತೆರೆದಿದ್ದಾರೆ.
ಗುರುವಾರ ಟ್ವಿಟ್ಟರ್ ಮತ್ತು ಫೇಸ್ಬುಕ್ ಖಾತೆಗಳನ್ನು ಅಧಿಕೃತವಾಗಿ ತೆರದಿರುವ ಕುಮಾರಸ್ವಾಮಿ ಅವರು ದ್ವಿತೀಯ ಪಿಯುಸಿ ಫಲಿತಾಂಶದ ಗೊಂದಲವನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Dear citizens, You can contact me through this twitter account and facebook page https://t.co/LFBcNFJmWY.
— H D Kumaraswamy (@hdk_jds) May 21, 2015 ಕುಮಾರಸ್ವಾಮಿ ಫೇಸ್ಬುಕ್ ಪುಟ : ಸರ್ಕಾರ ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟವಾಡದೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಫಲಿತಾಂಶದಲ್ಲಿರುವ ಗೊಂದಲವನ್ನು ಬಗೆಹರಿಸಿ ಜವಾಬ್ದಾರಿಯುತ ಮತ್ತು ಪ್ರಜ್ಞಾವಂತ ಸರ್ಕಾರ ಎಂಬುದನ್ನು ಜನತೆಗೆ ತಿಳಿಸಲಿ. [ದೊಡ್ಡಣ್ಣಾವ್ರು ಟ್ವಿಟ್ಟರಿಗೆ ಬಂದರು ದಾರಿ ಬಿಡಿ!]
ಮರುಮೌಲ್ಯಮಾಪನದ ಗುಣಮಟ್ಟದ ಬಗ್ಗೆ ಗೊಂದಲ ಮತ್ತು ಸಂಶಯವಿರುವುದರಿಂದ ಸರ್ಕಾರ ಮರುಮೌಲ್ಯಮಾಪನ ಶುಲ್ಕಕ್ಕೆ ವಿನಾಯಿತಿ ನೀಡಲಿ. ಮಾನ್ಯ ಮುಖ್ಯಮಂತ್ರಿಗಳು, ಕಿಮ್ಮನೆ ರತ್ನಾಕರ್ ರವರು ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿ ಮತ್ತು ಪೋಷಕರ ಸಭೆ ಕರೆದು ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
Siddaramaiah Kimmane Rathnakar ಸರ್ಕಾರ ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟವಾಡದೆ ಕೂಡಲೇ ಮದ್ಯ ಪ್ರವೇಶಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ...
Posted by H D Kumaraswamy on Thursday, May 21, 2015
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ ಮುಂತಾದವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿ ನಾಯಕರ ಸಾಮಾಜಿಕ ಜಾಲ ತಾಣಗಳಲ್ಲಿದ್ದಾರೆ. ಈಗ ಕುಮಾರಸ್ವಾಮಿ ಸಹ ಟ್ವಿಟ್ಟರ್ ಮತ್ತು ಫೇಸ್ಬುಕ್ಗೆ ಬಂದಿದ್ದಾರೆ.












Click it and Unblock the Notifications