ವೈದ್ಯರ ಸಾಮೂಹಿಕ ರಾಜೀನಾಮೆ ಎಲ್ಲಿಗೆ ಬಂತು?
ಬೆಂಗಳೂರು, ಅ.27 : ವೈದ್ಯರು ಮತ್ತು ಸರ್ಕಾರದ ನಡುವಿನ ಹಗ್ಗಜಗ್ಗಾಟ ಮುಂದುವರೆದಿದ್ದು 4,500 ಸರ್ಕಾರಿ ವೈದ್ಯರು ರಾಜೀನಾಮೆ ನೀಡದಂತೆ ಮನವೊಲಿಸಲು ನಡೆದ ಸಂಧಾನ ಸಭೆ ಮುರಿದುಬಿದ್ದಿದೆ. ಮಂಗಳವಾರ ಸಿಎಂ ಸಿದ್ದರಾಮಯ್ಯ ವೈದ್ಯರ ಸಭೆ ಕರೆದಿದ್ದಾರೆ. ವೈದ್ಯರು ಇಂದು ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿದು ಕುಳಿತಿದ್ದಾರೆ.
ಜಿಲ್ಲಾ
ಆಸ್ಪತ್ರೆಯನ್ನು
ಆರೋಗ್ಯ
ಇಲಾಖೆಯಲ್ಲೇ
ಉಳಿಸಿಕೊಳ್ಳಬೇಕು,
ಗುತ್ತಿಗೆ
ವೈದ್ಯರ
ಸೇವೆ
ಕಾಯಂಗೊಳಿಸಬೇಕು,
ವೇತನ
ಮತ್ತು
ಪಿಂಚಣಿಗೆ
ಗುತ್ತಿಗೆ
ಸೇವಾವಧಿ
ಪರಿಗಣಿಸಬೇಕು
ಮುಂತಾದ
ಬೇಡಿಕೆಗಳ
ಈಡೇರಿಕೆಗೆ
ಆಗ್ರಹಿಸಿ
ಸರ್ಕಾರಿ
ವೈದ್ಯರು
ಪ್ರತಿಭಟನೆ
ನಡೆಸುತ್ತಿದ್ದು,
ಸಾಮೂಹಿಕ
ರಾಜೀನಾಮೆ
ನೀಡಲು
ಮುಂದಾಗಿದ್ದಾರೆ.
[ವೈದ್ಯರ
ಸಾಮೂಹಿಕ
ರಾಜೀನಾಮೆ]
ಸಿಎಂ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಯು.ಟಿ.ಖಾದರ್ ಇಂದು ವಿಕಾಸಸೌಧದಲ್ಲಿ ಪ್ರತಿಭಟನಾನಿರತ ವೈದ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆದರೆ, ಸಭೆ ರಾಜೀನಾಮೆ ನೀಡದಂತೆ ವೈದ್ಯರ ಮನವೊಲಿಸಲು ವಿಫಲವಾಗಿದ್ದು, ವೈದ್ಯರು ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. [ವೈದ್ಯರ ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರವಲ್ಲ]
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವೈದ್ಯರ ಸಂಘದ ಪದಾಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಲಾಗುವುದು. ವೈದ್ಯರು ಇಟ್ಟಿರುವ ಬೇಡಿಕೆಗಳ ಪೈಕಿ 12 ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಲಾಗಿದೆ. ವೈದ್ಯರು ರಾಜೀನಾಮೆ ಹಠ ಹಿಡಿದರೆ ಸರ್ಕಾರ ಜೀವಂತವಾಗಿದೆ ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರೋಗ್ಯ ಸಚಿವರ ಹೇಳಿಕೆ : ವಿಕಾಸಸೌಧದಲ್ಲಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ವೈದ್ಯರ ಸಂಘದ ಪದಾಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಯಲಿದೆ. ಒಂದು ವೇಳೆ ವೈದ್ಯರು ರಾಜೀನಾಮೆ ಸಲ್ಲಿಸಿದರೆ, ಪರ್ಯಾಯ ವ್ಯವಸ್ಥೆಗೆ ಸರ್ಕಾರ ಸಿದ್ಧವಿದ್ದು, ಈ ಸಂಬಂಧ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಒಂದು ವೇಳೆ ವೈದ್ಯರು ರಾಜೀನಾಮೆ ನೀಡಿದರೂ ಒಂದು ತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಆ ಸಂದರ್ಭದಲ್ಲಿ ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆಯೇ ಅಥವಾ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.