ಟಿವಿ ವಾಹಿನಿಗಳ ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧ?
ಬೆಂಗಳೂರು, ಡಿಸೆಂಬರ್ 07 : 'ಎಲ್ಲಾ ಟಿವಿ ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಈ ಕಾರ್ಯಕ್ರಮ ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿವೆ. ಆದ್ದರಿಂದ, ಇಂತಹ ಜ್ಯೋತಿಷ್ಯ ಕಾರ್ಯಕ್ರಮವನ್ನು ನಿರ್ಬಂಧಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ
ಬೆಂಗಳೂರಿನಲ್ಲಿ
ಡಿ.ಜಿ.ಸಾಗರ್
ಅಭಿನಂದನಾ
ಗ್ರಂಥ
ಬಿಡುಗಡೆ
ಸಮಾರಂಭದಲ್ಲಿ
ಮಾತನಾಡಿದ
ಸಿದ್ದರಾಮಯ್ಯ
ಅವರು,
'ಪ್ರತಿದಿನ
ಎಲ್ಲಾ
ಟಿವಿಗಳಲ್ಲಿ
ಜ್ಯೋತಿಷ್ಯ
ಕಾರ್ಯಕ್ರಮಗಳು
ಪ್ರಸಾರವಾಗುತ್ತಿದೆ.
ಈ
ಕಾರ್ಯಕ್ರಮಗಳು
ಮೌಢ್ಯವನ್ನು
ಬಿತ್ತುತ್ತಿವೆ'
ಎಂದರು.
[ಶಾಸ್ತ್ರೋಕ್ತವಾಗಿ
ನಡೆದ
ಶಾಸ್ತ್ರ
ನಂಬದ
ಮುಖ್ಯಮಂತ್ರಿ
ಗೃಹಪ್ರವೇಶ]
'ಸಮಾಜದಲ್ಲಿ ಮೌಢ್ಯ, ಕಂದಾಚಾರಗಳ ಬಗ್ಗೆ ಜಾಗೃತಿ ಅಗತ್ಯ. ನಮ್ಮ ಮನೆಯ ಹೆಣ್ಣು ಮಕ್ಕಳು ಈ ಕಾರ್ಯಕ್ರಮಗಳನ್ನು ನೋಡುತ್ತಾರೆ. ಜನರು ಮೊದಲು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು' ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
'ಜ್ಯೋತಿಷ್ಯ ಕಾರ್ಯಕ್ರಮ ಮೌಢ್ಯವನ್ನು ಬಿತ್ತುತ್ತಿದೆ, ಈ ಕಾರ್ಯಕ್ರಮಗಳಿಗೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ. ಆದ್ದರಿಂದ ಇಂತಹ ಕಾರ್ಯಕ್ರಮಗಳಿಗೆ ನಿಷೇಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದರು.
ಸಂವಿಧಾನದ ಆಶಯ ದಿಕ್ಕರಿಸುವ ಕೆಲಸ ಬೇಡ : 'ಸಂವಿಧಾನವನ್ನು ಮತ್ತು ಅದರ ಆಶಯವನ್ನ ದಿಕ್ಕರಿಸುವ ಕೆಲಸ ಮಾಡಿದರೆ ಕ್ರಾಂತಿಯಾಗಲಿದೆ' ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ ಹೇಳಿದ್ದಾರೆ.
'ಈ ದೇಶವನ್ನು 700 ವರ್ಷ ಮುಸ್ಲಿಂಮರು ಆಳಿದರು. 200 ವರ್ಷ ಕ್ರಿಶ್ಚಿಯನ್ನರು ಆಳಿದರು. ಆದರೆ, ಭಾರತ ಭಾರತವಾಗಿಯೇ ಉಳಿದಿದೆ. ಈಗ ಕೋಮು ಶಕ್ತಿಗಳು ಅದನ್ನು ಒಡೆಯೋ ಕೆಲಸ ಮಾಡ್ತಿವೆ. ಕೋಮುವಾದಿಗಳ ಅಧಿಕಾರ ಬಹಳ ದಿನ ಉಳಿಯುವುದಿಲ್ಲ' ಎಂದು ಸಚಿವರು ತಿಳಿಸಿದರು.