ಜನರ ತೆರಿಗೆ ಹಣ ದುರ್ಬಳಕೆ ಮಾಡಿದರೆ ಸಿದ್ದರಾಮಯ್ಯ?
ಬೆಂಗಳೂರು, ಜೂನ್ 20 : ಕರ್ನಾಟಕದ ಜನರ ತೆರಿಗೆ ಹಣವನ್ನು ತಮ್ಮ ಸರಕಾರದ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಭಾರತೀಯ ಜನತಾ ಪಕ್ಷ ಕರ್ನಾಟಕ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರಿಗೆ ದೂರು ನೀಡಿದೆ.
ಬಿಬಿಎಂಪಿ ಬಸ್ ಶೆಲ್ಟರ್ ಗಳಲ್ಲಿ, ಬಿಬಿಎಂಪಿಯ ಅನುಮತಿಯನ್ನು ಕೂಡ ಪಡೆಯದೆ ಸಿದ್ದರಾಮಯ್ಯನವರು ಸರಕಾರದ ಸಾಧನೆಯ ಕುರಿತು ಜಾಹೀರಾತು ನೀಡಿ 68.14 ಕೋಟಿ ರುಪಾಯಿಯಷ್ಟು ಸಾರ್ವಜನಿಕರ ಹಣವನ್ನು ಪೋಲು ಮಾಡಿದ್ದಾರೆ ಎಂದು ಬಿಜೆಪಿ ಕಾರ್ಪೊರೇಟರ್ ಎನ್ಆರ್ ರಮೇಶ್ ಅವರು ದೂರು ನೀಡಿದ್ದಾರೆ.

ಕರ್ನಾಟಕ ಮುನಿಸಿಪಲ್ ಕಾಯ್ದೆಯ ಪ್ರಕಾರ, ಬಿಬಿಎಂಪಿ ಅಧೀನದಲ್ಲಿ ಬರುವ ಎಲ್ಲ ಜಾಹೀರಾತುಗಳಿಗೆ ಜಾಹೀರಾತುದಾರರು ಹಣ ನೀಡಬೇಕು. ಈ ಪ್ರಕರಣದಲ್ಲಿ ಜನರನ್ನು ಸುಲಭವಾಗಿ ತಲುಪುವ ಬಿಬಿಎಂಪಿಯ ಬಸ್ ನಿಲ್ದಾಣಗಳನ್ನು ಜಾಹೀರಾತಿಗಾಗಿ ಬಳಸಿಕೊಳ್ಳಲಾಗಿದ್ದರೂ ಸಿದ್ದರಾಮಯ್ಯ ಸರಕಾರ ಬಿಬಿಎಂಪಿಗೆ ಹಣ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ಸಿಗೆ ಎಚ್ ವಿಶ್ವನಾಥ್ ರಾಜೀನಾಮೆ: ಮುಂದಿನ ನಡೆ ನಿಗೂಢ
ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಮತ್ತು ಅವರೇ ಸ್ಥಾಪಿಸಿದ ಭ್ರಷ್ಟಾಚಾರ ನಿಗ್ರಹ ದಳದಲ್ಲಿಯೂ ಒಟ್ಟಾರೆ 56 ದೂರುಗಳನ್ನು ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾವ ಪ್ರಕರಣವನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಈ ತಂತ್ರ ಬಳಸಲಾಗುತ್ತಿದೆ ಎಂದೂ ಆರೋಪವಿದೆ.












Click it and Unblock the Notifications