'ತೇಜಸ್ವಿ ಎಂದೆಂದಿಗೂ' ಪ್ರಬಂಧ ಸ್ಪರ್ಧೆ ಆಯೋಜನೆ
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಸ್ಮರಣೆಗಾಗಿ ಪ್ರಬಂಧ ಸ್ಪರ್ಧೆ ಆಯೋಜನೆ. ಫೇಸ್ ಬುಕ್ ನಲ್ಲಿ ತೇಜಸ್ವಿ ಪುಟ ನಿರ್ಮಾತೃಗಳಿಂದ ಪ್ರಬಂಧ ಆಹ್ವಾನ. ಪ್ರಬಂಧ ಕಳುಹಿಸಲು ಸೆಪ್ಟಂಬರ್ 2 ಕೊನೆಯ ದಿನ.
ಬೆಂಗಳೂರು, ಆಗಸ್ಟ್ 29: ಖ್ಯಾತ ಪರಿಸರ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಈ ಬಾರಿಯ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಿರುವ ತೇಜಸ್ವಿ ಫೇಸ್ ಬುಕ್ ಪುಟದ (fb.com/PCTejaswi) ನಿರ್ಮಾತೃಗಳು, 'ತೇಜಸ್ವಿ ಎಂದೆಂದಿಗೂ' ಎಂಬ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳು ಹಾಗೂ ಮಾತುಗಳು ಆಯಾ ಕಾಲಕ್ಕೆ ತಕ್ಕಂತೆ ಪ್ರಸ್ತುತವಾಗಿರುತ್ತವೆ. ಅದು ಕಾವೇರಿ ಅಥವಾ ಇನ್ಯಾವುದೇ ನದಿ ನೀರಿನ ಹಂಚಿಕೆ ವಿಷಯದ ಬಗ್ಗೆಯಾಗಿರಬಹುದು, ಕನ್ನಡ ಭಾಷೆ, ಕರ್ನಾಟಕ, ಪರಿಸರ ಕಾಳಜಿ ಸೇರಿದಂತೆ ಇನ್ನು ಹತ್ತಾರು ವಿಚಾರಗಳನ್ನು ಅವರ ಪ್ರತಿಯೊಂದು ಪುಸ್ತಕಗಳಿಂದ ಪಡೆದು ಇಂದಿನ ಪರಿಸ್ಥಿತಿಯೊಂದಿಗೆ ತಾಳೆ ಹಾಕಬಹುದು. ಇಷ್ಟೇ ಅಲ್ಲದೆ ಅವರ ಕಾದಂಬರಿಗಳಲ್ಲಿ ಬರುವ ಹಲವಾರು ಪಾತ್ರಗಳು ಮತ್ತು ಸನ್ನಿವೇಶಗಳನ್ನ ಪ್ರಸ್ತುತ ಕಾಲಕ್ಕೆ ಹೋಲಿಕೆ ಮಾಡಬಹುದಾಗಿದೆ.

ತೇಜಸ್ವಿಯವರ ಪ್ರಕಟಿತ ಪುಸ್ತಕಗಳಿಂದ ಇಂಥ ಯಾವುದಾದರೂ ವಿಷಯ ಅಥವಾ ಅಧ್ಯಾಯದ ಮೇಲೆ ಕನಿಷ್ಠ 150 ಪದಗಳಿಂದ ಗರಿಷ್ಠ 300 ಪದಗಳಲ್ಲಿ ಒಂದು ಪ್ರಬಂದ ಬರೆದು ಕಳುಹಿಸುವಂತೆ ಕೋರಲಾಗಿದೆ.
ಒಳ್ಳೆಯ ಬರಹಗಳಿಗೆ ಬಹುಮಾನವಿದೆ. ಪ್ರಬಂಧಗಳನ್ನು ಕಳುಹಿಸುವ ವಿಧಾನ ಮತ್ತು ನಿಯಮಗಳು ಹೀಗಿವೆ:
1. ಪ್ರಬಂದವು ಕನಿಷ್ಠ 150 ಪದಗಳಿಂದ ಗರಿಷ್ಠ 300 ಪದಗಳಲ್ಲಿ ಇರಬೇಕು. ಕನ್ನಡ ಲಿಪಿಯಲ್ಲಿ ಟೈಪ್ ಮಾಡಿ ಕಳುಹಿಸುವ ಬರಹಗಳನ್ನು ಮಾತ್ರ ಪರಿಗಣಿಸಲಾಗುವುದು. ವಿಭಿನ್ನವಾದ ಬರಹಗಳಿಗೆ ಮೊದಲ ಆದ್ಯತೆ.
2. ತೇಜಸ್ವಿಯವರ ಪ್ರಕಟಿತ ಪುಸ್ತಕಗಳಿಂದ ಯಾವುದಾದರೂ ವಿಷಯ ಅಥವಾ ಅಧ್ಯಾಯದ ಮೇಲೆ ಮಾತ್ರ ಪ್ರಬಂಧ ಬರೆದು ಕಳುಹಿಸಲು ಅವಕಾಶವಿದೆ.
3. ಒಬ್ಬರಿಗೆ ಒಂದು ಪ್ರಬಂಧ ಕಳುಹಿಸಲು ಮಾತ್ರ ಅವಕಾಶವಿದೆ.
4. ಪ್ರಬಂಧ ಕಳುಹಿಸುವಾಗ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ತಪ್ಪದೆ ಕಳುಹಿಸಿ. ಜೊತೆಗೆ ಪ್ರಬಂಧ ಬರೆಯಲು ಬಳಸಿಕೊಂಡಿರುವ ತೇಜಸ್ವಿಯವರ ಪುಸ್ತಕದ ಹೆಸರನ್ನು ಸ್ಪಷ್ಟವಾಗಿ ತಿಳಿಸಬೇಕು.
5. ಪ್ರಬಂಧಗಳನ್ನು ನಮಗೆ ಕಳುಹಿಸಲು ಕೊನೆಯ ದಿನಾಂಕ 02-09-2017 (ಶನಿವಾರ)
6. ಪ್ರಬಂಧಗಳನ್ನು [email protected] ಇಲ್ಲಿಗೆ ಇ-ಮೇಲ್ ಮಾಡಬಹುದು ಅಥವಾ 9743159250 / 9980296974 ನಂಬರಿಗೆ ವಾಟ್ಸಪ್ ಮಾಡಬಹುದು.
ಹೆಚ್ಚಿನ ಮಾಹಿತಿಗೆ : 9743159250 / 9980296974 ಸಂಪರ್ಕಿಸಬಹುದು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications