'ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ': ಕೆಪಿಸಿಸಿ ಕಚೇರಿಯಲ್ಲಿ ಗುಡುಗಿದ ಡಿಕೆ
ಬೆಂಗಳೂರು, ಅಕ್ಟೋಬರ್ 26: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಂದುಕೊಂಡಂತೆಯೇ ಮಾಜಿ ಸಚಿವ, ಪಕ್ಷದ ನಾಯಕ, ಸುಮಾರು 50 ದಿನಗಳ ಕಾಲ ತಿಹಾರ್ ಜೈಲುವಾಸ ಕಳೆದು ಬಂದ ಡಿ. ಕೆ. ಶಿವಕುಮಾರ್ಗೆ ಭಾರಿ ಸ್ವಾಗತ ಸಿಕ್ಕಿದೆ. ಶನಿವಾರ ಮಧ್ಯಾಹ್ನ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ. ಕೆ. ಶಿವಕುಮಾರ್ಗೆ ಅಭಿಮಾನಿಗಳು, ರಾಜಕೀಯ ಮುಖಂಡರು, ಕನ್ನಡ ಸಂಘಟನೆಗಳ ಪ್ರಮುಖರು ದೊಡ್ಡ ಸಂಖ್ಯೆಯಲ್ಲಿ ನೆರೆದು ಬರಮಾಡಿಕೊಂಡಿದ್ದಾರೆ.
ವಿಮಾನ ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಜನರೆಡೆಗೆ ಕೈಬೀಸುತ್ತ ಬಂದ ಡಿ. ಕೆ. ಶಿವಕುಮಾರ್, ತಾವೇ 'ಮ್ಯಾನ್ ಆಫ್ ದಿ ಡೇ' ಎಂಬುದನ್ನು ಶನಿವಾರ ರಾಜ್ಯದ ಜನತೆಗೆ ಸಂದೇಶ ರವಾನಿಸಿದ್ದಾರೆ.
ದೇವನಹಳ್ಳಿಯಿಂದ ಆರಂಭಗೊಂಡ ಭಾರಿ ಮೆರವಣಿಗೆ ಸುಮಾರು 7 ಕಿ.ಮೀ ದೂರದಲ್ಲರುವ ಸಾದಹಳ್ಳಿ ಗೇಟ್ ತಲುಪಲು ತೆಗೆದುಕೊಂಡ ಸಮಯ 3 ಗಂಟೆಗಳು. ಈ ಸಮಯದಲ್ಲಿ ತೂರಿದ ಹೂವಿನ ಹಾರುಗಳು, ಡಿ. ಕೆ. ಶಿವಕುಮಾರ್ಗೆ ನೀಡಿದ ಬೊಕ್ಕೆಗಳಿಗೆ ಲೆಕ್ಕವೇ ಇರಲಿಲ್ಲ.
ಸಾದಹಳ್ಳಿ ಗೇಟ್ನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಇದು ಅಂತ್ಯ ಅಲ್ಲ, ಅಂತ್ಯ ಅಲ್ಲ... ಆರಂಭ,'' ಎನ್ನುವ ಮೂಲಕ ಜೈಲುವಾಸದ ನಂತರವೂ ತಮ್ಮ ಖದರ್ ಕಡಿಮೆಯಾಗಿಲ್ಲ ಎಂಬುದನ್ನು ಬಿಡಿಸಿಟ್ಟರು.
ಒಟ್ಟಾರೆ, ಬೆಂಗಳೂರಿನ ಬಂದಿಳಿದ ಡಿ. ಕೆ. ಶಿವಕುಮಾರ್, ನಡೆದ ಮೆರವಣಿಗೆ ಹಾಗೂ ನಂತರದ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಟ್ರಾಫಿಕ್ ಸಮಸ್ಯೆಗೆ ಕ್ಷಮೆ ಕೋರಿದ ಡಿಕೆ
'ಹಿಂದೆ ಹೋಗುವ ಪ್ರಶ್ನೆ ಇಲ್ಲ'
ಉಳಿದವರ ಅಫಿಡವಿಟ್: ಏನಿದು?
ಸೋನಿಯಾ ಗಾಂಧಿ ಜೈಲಿಗೆ ಬಂದ ಕತೆ
ಮಾತು ಆರಂಭಿಸಿದ ಡಿಕೆ
The Grit & Valor put up to display by @DKShivakumar to stand & oppose the Modi-Shah duo with everything at stake is historic & remarkable.
— Adarsh Kumar H N (@adarsharaga) October 26, 2019
He is an inspiration to many to put up a fight that matters against fascism!
Glimpses of Crowd gathered to welcome DKS! #DKShivakumar pic.twitter.com/rpTGSKrd9A