ಎಸ್ಸೆಂಕೃಷ್ಣ ಎಚ್ಡಿಕೆಗೆ ರಿಲೀಫ್, ಧರಂ ಸಿಂಗ್ ಇನ್ ಟ್ರಬಲ್
ಅರಣ್ಯಭೂಮಿಯನ್ನು ಪರಿವರ್ತಿಸಿ ಅಕ್ರಮ ಗಣಿಗಾರಿಕೆಗೆ ಅನುವು ಮಾಡಿಕೊಟ್ಟ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.
ಬೆಂಗಳೂರು, ನವೆಂಬರ್ 17: ಅರಣ್ಯಭೂಮಿಯನ್ನು ಪರಿವರ್ತಿಸಿ ಅಕ್ರಮ ಗಣಿಗಾರಿಕೆಗೆ ಅನುವು ಮಾಡಿಕೊಟ್ಟ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಆದರೆ, ಮೇಲ್ಮನವಿ ಸಲ್ಲಿಸದ ಮಾಜಿ ಸಿಎಂ ಧರಂ ಸಿಂಗ್ ವಿರುದ್ಧ ತನಿಖೆ ಮುಂದುವರೆಸಲು ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಕುರಿತಂತೆ ಅಗತ್ಯ ದಾಖಲೆಯನ್ನು ಒದಗಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಸುಮಾರು 11,797 ಚದರ ಕಿಲೋ ಮೀಟರ್ ನಷ್ಟು ಅರಣ್ಯ ಭೂಮಿಯನ್ನು ಪರಿವರ್ತಿಸಿ ಗಣಿಗಾರಿಕೆಗೆ ನೀಡಲಾಗಿತ್ತು.
ಎಸ್ಸೆಂ
ಕೃಷ್ಣ
ಹಾಗೂ
ಎಚ್ಡಿ
ಕುಮಾರಸ್ವಾಮಿ
ಅವರ
ವಿರುದ್ಧದ
ಅಕ್ರಮ
ಗಣಿಗಾರಿಕೆ
ಆರೋಪ
ಪ್ರಕರಣದ
ತನಿಖೆಗೆ
ನೀಡಿದ್ದ
ತಡೆಯಾಜ್ಞೆಯನ್ನು
ಸುಪ್ರೀಂಕೋರ್ಟ್
ಮುಂದುವರಿಸಿದೆ.ಆದರೆ
ಮಾಜಿ
ಮುಖ್ಯಮಂತ್ರಿ
ಧರಂ
ಸಿಂಗ್
ಹಾಗೂ
ಇತರೆ
ಅಧಿಕಾರಿಗಳು
ಮೇಲ್ಮನವಿ
ಸಲ್ಲಿಸಿರಲಿಲ್ಲ.
ಮಾಜಿ
ಮುಖ್ಯಮಂತ್ರಿ
ಧರಂ
ಸಿಂಗ್
ಸೇರಿ
ಇತರೆ
ಅಧಿಕಾರಿಗಳ
ವಿರುದ್ಧ
ತನಿಖೆ
ಮುಂದುವರಿಸಲು
ಸುಪ್ರೀಂಕೋರ್ಟ್
ಆದೇಶಿಸಿ
ವಿಚಾರಣೆಯನ್ನು
ಜನವರಿ
2ನೇ
ವಾರಕ್ಕೆ
ಮುಂದೂಡಿದೆ.
ಮಾಜಿ ಸಿಎಂಗಳಾದ ಎಸ್ ಎಂ ಕೃಷ್ಣ , ಹೆಚ್.ಡಿ ಕುಮಾರಸ್ವಾಮಿ, ಧರಂ ಸಿಂಗ್ ಹಾಗೂ ಐಎಎಸ್ ಅಧಿಕಾರಿಗಳಾದ ಅಶ್ವಥ್, ಕೆ.ಶ್ರೀನಿವಾಸ್ ಸೇರಿ 14 ಮಂದಿ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಕುರಿತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ಎಸ್. ಎಂ. ಕೃಷ್ಣ, ಕುಮಾರಸ್ವಾಮಿ ಹಾಗೂ ಐಎಎಸ್ ಅಧಿಕಾರಿಗಳಾದ ಅಶ್ವಥ್, ಕೆ ಶ್ರೀನಿವಾಸ್ ಮೂರ್ತಿ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು.