13 ಜನರಿಂದ 328 ಮಂದಿಗೆ ಕೊರೊನಾ: ಬೆಚ್ಚಿಬೀಳಿಸುವ 'ಸೂಪರ್ ಸ್ಪ್ರೆಡರ್ಸ್' ಕಹಾನಿ!
ಬೆಂಗಳೂರು, ಮೇ 9: ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 753 ಮಂದಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಪೈಕಿ ಈಗಾಗಲೇ 30 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದರೆ, 376 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 346 ಕೋವಿಡ್-19 ಆಕ್ಟೀವ್ ಕೇಸ್ ಗಳಿವೆ.
Recommended Video
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಿರುವಾಗಲೇ, ಒಂದು ಬೆಚ್ಚಿಬೀಳಿಸುವ ಅಂಶ ಬಟಾ ಬಯಲಾಗಿದೆ.
ಕರ್ನಾಟಕ ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ, ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್ ಗಳಿಗೆ ಕಾರಣವಾಗಿರುವುದು 'ಸೂಪರ್ ಸ್ಪ್ರೆಡರ್ಸ್'.! ಅಂದ್ರೆ, ಕೇವಲ 13 ಮಂದಿಯಿಂದ 328 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.

ಸೂಪರ್ ಸ್ಪ್ರೆಡರ್ ಎಂದರೇನು.?
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗಲು 'ಸೂಪರ್ ಸ್ಪ್ರೆಡರ್ಸ್' ಕಾರಣವಾಗಿದ್ದಾರೆ. ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಮಂದಿಗೆ ಸೋಂಕು ಹರಡುವ ವ್ಯಕ್ತಿಯನ್ನು 'ಸೂಪರ್ ಸ್ಪ್ರೆಡರ್ಸ್' ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ 13 ಪೇಶೆಂಟ್ ಗಳನ್ನು 'ಸೂಪರ್ ಸ್ಪ್ರೆಡರ್ಸ್' ಎಂದು ಗುರುತಿಸಲಾಗಿದೆ.

ಯಾರು ಆ ಹದಿಮೂರು ಮಂದಿ.?
* ಪೇಶೆಂಟ್ ನಂ. 52
* ಪೇಶೆಂಟ್ ನಂ. 221
* ಪೇಶೆಂಟ್ ನಂ. 128
* ಪೇಶೆಂಟ್ ನಂ. 419
* ಪೇಶೆಂಟ್ ನಂ. 205
* ಪೇಶೆಂಟ್ ನಂ. 533
* ಪೇಶೆಂಟ್ ನಂ. 134
* ಪೇಶೆಂಟ್ ನಂ. 556
* ಪೇಶೆಂಟ್ ನಂ. 167
* ಪೇಶೆಂಟ್ ನಂ. 125
* ಪೇಶೆಂಟ್ ನಂ. 607
* ಪೇಶೆಂಟ್ ನಂ. 247
* ಪೇಶೆಂಟ್ ನಂ. 390
- ಇವರುಗಳನ್ನು 'ಸೂಪರ್ ಸ್ಪ್ರೆಡರ್ಸ್' ಎಂದು ಗುರುತಿಸಲಾಗಿದೆ.

ಯಾರಿಂದ ಎಷ್ಟು ಮಂದಿಗೆ ಸೋಂಕು?
* ಪೇಶೆಂಟ್ ನಂ. 52 ರಿಂದ 76 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 221 ರಿಂದ 37 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 128 ರಿಂದ 36 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 419 ರಿಂದ 29 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 205 ರಿಂದ 27 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 533 ರಿಂದ 20 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 134 ರಿಂದ 19 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 556 ರಿಂದ 19 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 167 ರಿಂದ 17 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 125 ರಿಂದ 14 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 607 ರಿಂದ 12 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 247 ರಿಂದ 11 ಜನರಿಗೆ ಸೋಂಕು ತಗುಲಿದೆ.
* ಪೇಶೆಂಟ್ ನಂ. 390 ರಿಂದ 11 ಜನರಿಗೆ ಸೋಂಕು ತಗುಲಿದೆ.

ಯಾರು ಸೂಪರ್ ಸ್ಪ್ರೆಡರ್ ಆಗುತ್ತಾರೆ.?
ದೈನಂದಿನ ಹೆಚ್ಚು ಜನರ ಸಂಪರ್ಕಕ್ಕೆ ಬರುವವರು 'ಸೂಪರ್ ಸ್ಪ್ರೆಡರ್'ಗಳಾಗುವ ಸಾಧ್ಯತೆ ಹೆಚ್ಚು. ತುಂಬು ಕುಟುಂಬದಲ್ಲಿ ಇರುವವರು, ತರಕಾರಿ ಅಥವಾ ಇತರೆ ಅವಶ್ಯ ವಸ್ತುಗಳ ಮಾರಾಟಗಾರರು, ಡೆಲಿವರಿ ಬಾಯ್ಸ್, ಕಚೇರಿಯಲ್ಲಿ ಕೆಲಸ ಮಾಡುವವರು 'ಸೂಪರ್ ಸ್ಪ್ರೆಡರ್' ವರ್ಗಕ್ಕೆ ಸೇರುತ್ತಾರೆ.
-
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು












Click it and Unblock the Notifications