Get Updates
Get notified of breaking news, exclusive insights, and must-see stories!

ಕಾಂಗ್ರೆಸ್ಸಿನ ಮುಂದಿನ ಮುಖ್ಯಮಂತ್ರಿ ರೇಸಿಗೆ ಮತ್ತೊಂದು ಹೆಸರು ಸೇರ್ಪಡೆ!

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಚಾಲ್ತಿಯಲ್ಲಿರಬೇಕಾದರೆ, ಕಾಂಗ್ರೆಸ್ಸಿನಲ್ಲೂ ಈ ವಿಚಾರ ಮುನ್ನಲೆಗೆ ಬಂದು ದೊಡ್ಡ ಸುದ್ದಿಯಾಗುತ್ತಿರುವುದು ಉದ್ದೇಶಪೂರ್ವಕವೋ ಅಥವಾ ಕಾಕತಾಳಿಯವೋ?

ಒಟ್ಟಿನಲ್ಲಿ, ಆಡಳಿತ ಬಿಜೆಪಿಯ ವಿರುದ್ದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಹೋರಾಡಲು ಸಾಕಷ್ಟು ಸರಕುಗಳಿದ್ದರೂ, ಮುಂದಿನ ಚುನಾವಣೆ ಯಾರ ಹೆಸರಿನಲ್ಲಿ ಮುನ್ನಡೆಯಾಗಬೇಕು ಎನ್ನುವುದು ಪಕ್ಷಕ್ಕೆ ಇರಿಸುಮುರಿಸು ತಂದೊಡ್ಡುತ್ತಿದೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹಚ್ಚಿದ ಬೆಂಕಿ, ಪ್ರಮುಖ ನಾಯಕರ ಎಚ್ಚರಿಕೆಯ ನಡುವೆಯೂ ತಣ್ಣಗಾಗುವುದು ಹಾಗಿರಲಿ, ದಿನದಿಂದ ದಿನಕ್ಕೆ ಇದು ಪಕ್ಷದ ಮುಖಂಡರ ನಡುವಿನ ಮನಸ್ತಾಪಕ್ಕೆ ವೇದಿಕೆಯಾಗುತ್ತಿದೆ.

ಭಾವೀ ಸಿಎಂ ಸಿದ್ದರಾಮಯ್ಯ ಎಂದು ಜಮೀರ್ ಅಹ್ಮದ್ ಮೂಲಕ ಹೇಳಿಸಿ, ಆ ಮೂಲಕ, ತಮ್ಮದೇ ಪಕ್ಷದ ಇತರ ಮುಖಂಡರ ನಾಡಿಮಿಡಿತ ಅರಿಯುವ ಕೆಲಸವನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇವೆಲ್ಲದರ ನಡುವೆ, ಸಿಎಂ ಹುದ್ದೆಗೆ ಇನ್ನೋರ್ವ ಉತ್ತರ ಕರ್ನಾಟಕದ ಪ್ರಭಾವೀ ನಾಯಕರ ಹೆಸರು ಸೇರ್ಪಡೆಯಾಗಿದೆ.

 ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು, ಡಾ.ಪರಮೇಶ್ವರ್

ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು, ಡಾ.ಪರಮೇಶ್ವರ್

ಈಗಾಗಲೇ, ದಲಿತ ಸಿಎಂ ಎನ್ನುವ ವಿಚಾರ ಭಾರೀ ಚರ್ಚೆಯಲ್ಲಿದೆ. ಡಾ.ಪರಮೇಶ್ವರ್ ಅವರು "ಸಿಎಂ ರೇಸಿನಲ್ಲಿ ನಾನು ಇಲ್ಲ ಎಂದು ಹೇಳಿದ್ದು ಯಾರು. ಆದರೆ ಅದನ್ನೆಲ್ಲಾ ಚರ್ಚಿಸಲು ಇದು ಸೂಕ್ತ ವೇದಿಕೆಯಲ್ಲ. ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕಿದೆ"ಎಂದು ಪರಮೇಶ್ವರ್ ಹೇಳುವ ಮೂಲಕ, ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದರು.

 ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾಪ

ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾಪ

ಇದಾಗಿ ಎರಡು ದಿನಗಳ ಕೆಳಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಕೂಡಾ ಈ ವಿಚಾರದ ಬಗ್ಗೆ ಸುತ್ತೂರು ಮಠದಲ್ಲಿ ಪ್ರಸ್ತಾವಿಸಿದ್ದರು. "ಮುಖ್ಯಮಂತ್ರಿ ಹುದ್ದೆಗೆ ಅರ್ಹರಾದ ಮುಖಂಡರು ಲಿಂಗಾಯತ ಸಮುದಾಯದಲ್ಲೂ ಇದ್ದಾರೆ"ಎಂದು ಹೇಳಿದ್ದರು. ಕಾಂಗ್ರೆಸ್ಸಿನಲ್ಲಿ ಆ ಸಮುದಾಯದ ಪ್ರಮುಖ ನಾಯಕರಲ್ಲಿ ಎಂ.ಬಿ.ಪಾಟೀಲ್ ಮಂಚೂಣಿಯಲ್ಲಿದ್ದಾರೆ. ಈಗ, ಆ ಪಟ್ಟಿಗೆ ಇನ್ನೋರ್ವ ನಾಯಕರ ಹೆಸರು ಸೇರ್ಪಡೆಯಾಗಿದೆ.

 ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ

ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ

ಈಗ, ಗದಗ ಕ್ಷೇತ್ರದ ಶಾಸಕ, ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೆಸರು ಕೂಡಾ ಈಗ ಕೇಳಿಬರುತ್ತಿದೆ. ಮುಂದಿನ ಮುಖ್ಯಮಂತ್ರಿ ಎಚ್.ಕೆ.ಪಾಟೀಲ್ ಯಾಕಾಗಬಾರದು ಎನ್ನುವ ಚರ್ಚೆ ಸಾಮಾಜಿಕ ತಾಣದಲ್ಲಿ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ಸಿನಿಂದ ಅವರೇ ಸೂಕ್ತ ಅಭ್ಯರ್ಥಿ ಎನ್ನುವ ವಿಚಾರ ಜಾಲತಾಣದಲ್ಲಿ ಹರಿದಾಡುತ್ತಿದೆ.

Recommended Video

    ಧೋನಿಯನ್ನು ನೆನೆದು ಭಾವುಕರಾದ ಭುವನೇಶ್ವರ್ ಕುಮಾರ್ | Oneindia Kannada
     ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ರಾಜೀವ್ ಗಾಂಧಿ ಕೇಳಿದಾಗ

    ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ರಾಜೀವ್ ಗಾಂಧಿ ಕೇಳಿದಾಗ

    ಈ ಹಿಂದೆ ಕೂಡಾ ಕರ್ನಾಟಕ ರಾಜಕೀಯದಲ್ಲಿ ಎಚ್.ಕೆ.ಪಾಟೀಲ್ ಅವರ ತಂದೆಯ ಹೆಸರು ಮಂಚೂಣಿಯಲ್ಲಿತ್ತು. ಆದರೆ, ಬಂಗಾರಪ್ಪನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೇಳಿದಾಗ, ಮರುಕ್ಷಣವೇ ಅವರು ಸಿಎಂ ರೇಸಿನಿಂದ ಹಿಂದಕ್ಕೆ ಸರಿದಿದ್ದರು. ಈ ಬಾರಿ, ಎಚ್.ಕೆ.ಪಾಟೀಲ್ ಅವರಿಗೇ ಸಿಎಂ ಸ್ಥಾನ ನೀಡಬೇಕು ಎನ್ನುವ ಒತ್ತಾಯ ಅವರ ಅಭಿಮಾನಿಗಳಿಂದ ಜೋರಾಗಿ ಕೇಳಿಬರುತ್ತಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+