'ಎನಗಿಂತ ಕಿರಿಯರಿಲ್ಲ': ಸಿದ್ದರಾಮಯ್ಯನವರಿದ್ದ ವೇದಿಕೆಯಲ್ಲಿ ಜಿಟಿಡಿ ಹೇಳಿಕೆ ಸರಿಯೇ?
ಮೈಸೂರು, ನ 10: ನಗರದ ಹಿನಕಲ್ ಮತ್ತು ಕೇರ್ಗಳ್ಳಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಆಡಿದ ಮಾತಿಗೆ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಾ. ಎಚ್. ಸಿ. ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
"ಅಂಬೇಡ್ಕರ್ ಏನು, ಅವರ ತತ್ವ ಸಿದ್ದಾಂತ ಏನು, ಸಂವಿಧಾನವೇನು ಇದನ್ನೆಲ್ಲಾ ಅರಿತು ಪರಿವರ್ತನೆಯಾಗಬೇಕಿದೆ. ಆದರೆ, ಇನ್ನೂ ಜನರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ವಿದ್ಯಾವಂತರಾಗುತ್ತಿಲ್ಲ. ನಾನು ಮತ್ತು ಮಹದೇವಪ್ಪನವರು ಬಂದು ಈ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು, ಅವರು ಕಾರಣಾಂತರದಿಂದ ಈ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಸಿದ್ದರಾಮಯ್ಯನವರು ನನಗಿಂತ ಕಿರಿಯರಾದ ಮಹದೇವಪ್ಪ ಅವರನ್ನು ಬೆಳಿಸಿ, ಅವಕಾಶ ನೀಡಿದರು"ಎಂದು ಜಿ.ಟಿ.ದೇವೇಗೌಡ ಸಭೆಯಲ್ಲಿ ಹೇಳಿದ್ದರು.
ಈ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಎಚ್.ಸಿ.ಮಹದೇವಪ್ಪ, "ನಿನ್ನೆ ಮೈಸೂರಿನ ಹಿನಕಲ್ ಮತ್ತು ಕೇರ್ಗಳ್ಳಿಯಲ್ಲಿ ಜೆಡಿಎಸ್ ಪಕ್ಷದ ಜಿ.ಟಿ.ದೇವೇಗೌಡ ಅವರು ನನಗಿಂತ ಕಿರಿಯವರಾದ ಎಚ್.ಸಿ ಮಹಾದೇವಪ್ಪ ಅವರನ್ನು ಬೆಳೆಸಿದರು, ಅವಕಾಶ ನೀಡಿದರು ಎಂದು ಹೇಳಿರುವುದು ವಿಚಿತ್ರವಾಗಿದೆ" ಎಂದು ಮಹದೇವಪ್ಪ ಹೇಳಿದ್ದಾರೆ.
ಮಂಗಳವಾರ (ನ 9) ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆಗೆ, ಜಿ.ಟಿ. ದೇವೇಗೌಡ ಕಾಣಿಸಿಕೊಂಡಿದ್ದರು. ಜಿಟಿಡಿ ಅವರು ಜೆಡಿಎಸ್ ತೊರೆಯಲಿದ್ದಾರೆ ಎನ್ನುವ ಸುದ್ದಿಯ ನಡುವೆ ಈ ಕಾರ್ಯಕ್ರಮ ಮಹತ್ವವನ್ನು ಪಡೆದಿತ್ತು. ಡಾ. ಮಹದೇವಪ್ಪ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು, ಆದರೆ ಅವರು ಕಾರಣಾಂತರದಿಂದ ಗೈರಾಗಿದ್ದರು.

ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದ ಜಿಟಿಡಿ
ಮೈಸೂರು ಹಿನಕಲ್ ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೆರವೇರಿಸಿದ್ದರು. ಆ ಸಭೆಯಲ್ಲಿ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದ ಜಿಟಿಡಿ, "ಹಲವು ಕಾರ್ಯಕ್ರಮಗಳ ಒತ್ತಡದ ನಡುವೆಯೂ ಸಿದ್ದರಾಮಯ್ಯನವರು ನಮ್ಮ ಮೇಲಿನ ಪ್ರೀತಿಯಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸಿದ್ದರಾಮಯ್ಯನವರಿಗೆ ದಲಿತರ ಮೇಲೆ ಎಷ್ಟು ಕಾಳಜಿಯಿದೆ ಎನ್ನುವುದನ್ನು ನಾನು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ, ಡಾ. ಮಹದೇವಪ್ಪ ಮುಂತಾದವರನ್ನು ಸಿದ್ದರಾಮಯ್ಯ ಬೆಳೆಸಿ, ಅವಕಾಶ ನೀಡಿದರು"ಎಂದು ಜಿ.ಟಿ. ದೇವೇಗೌಡ ಸಭೆಯಲ್ಲಿ ಹೇಳಿದ್ದರು.

ಸಭೆಯಲ್ಲಿ ಜಿ.ಟಿ.ದೇವೇಗೌಡ ಆಡಿದ ಮಾತಿಗೆ ಡಾ. ಮಹದೇವಪ್ಪ ಬೇಸರ
ಸಭೆಯಲ್ಲಿ ಜಿ.ಟಿ.ದೇವೇಗೌಡ ಆಡಿದ ಮಾತಿಗೆ ಡಾ. ಮಹದೇವಪ್ಪ ಬೇಸರವನ್ನು ವ್ಯಕ್ತ ಪಡಿಸುತ್ತಾ, " ನಾಲ್ಕು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಹಲವು ಪಕ್ಷಗಳು ನನಗೆ ಶಾಸಕನಾಗುವ ಮತ್ತು ಸಚಿವನಾಗುವ ಅವಕಾಶವನ್ನು ನೀಡಿವೆ. ಈ ರೀತಿ ಅವಕಾಶ ಸಿಕ್ಕಾಗಲೆಲ್ಲಾ ನನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ಜನರ ಹಿತಕ್ಕೆ ಅನುಕೂಲವಾಗುವಂತೆಯೇ ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದಾರೆ.

ಜನಪರ ರಾಜಕಾರಣಕ್ಕೆ ಬುನಾದಿ ಹಾಕಿದ್ದು ಈ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು
"ನನ್ನ ಸಹದ್ಯೋಗಿಯೇ ಆಗಿದ್ದ ಜಿ.ಟಿ.ದೇವೇಗೌಡ ಅವರಿಗೂ ಈ ಸಂಗತಿ ಚೆನ್ನಾಗಿ ತಿಳಿದಿದೆ. ನನಗೆ ತಿಳಿದ ಮಟ್ಟಿಗೆ ನನ್ನೊಳಗೆ ಜನಪರವಾದ ತಿಳುವಳಿಕೆಯನ್ನು ಮೂಡಿಸಿ, ಸರ್ಕಾರಗಳ ಮಟ್ಟದಲ್ಲಿ ಆಡಳಿತ ನಡೆಸಲು ಬೇಕಾದಂತಹ ಪೂರಕ ಜ್ಞಾನವನ್ನು ಪಡೆಯಲು ಮತ್ತು ಜನಪರ ರಾಜಕಾರಣಕ್ಕೆ ಬುನಾದಿ ಹಾಕಿದ್ದು ಈ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು. ನನ್ನೊಳಗೆ ಜನಪರವಾಗಿ ಚಿಂತಿಸುವ ಚೈತನ್ಯ ಉಳಿಯುವುದಕ್ಕೆ ದಲಿತ ಸಂಘಟನೆಗಳೇ ಕಾರಣವಾಗಿದ್ದು ಇದಕ್ಕಾಗಿ ನಾನವರಿಗೆ ಸದಾ ಕೃತಜ್ಞನಾಗಿ ಇರುತ್ತೇನೆ" ಎಂದು ಮಹದೇವಪ್ಪ ಹೇಳಿದ್ದಾರೆ.
Recommended Video

ಮಹದೇವಪ್ಪ ಅವರನ್ನು ಬೆಳೆಸುವಲ್ಲಿ ದಲಿತ ಸಂಘಟನೆಗಳ ಪಾತ್ರ ದೊಡ್ಡದಿದೆ
"ಇದನ್ನು ಹೇಳದೆಯೂ ಇರಬಹುದಾಗಿತ್ತು. ಆದರೆ ಜಿ.ಟಿ.ದೇವೇಗೌಡರ ಮಾತಿನೊಳಗೆ ನಿಜವಾಗಿಯೂ ನನ್ನನ್ನು ನಾಯಕನನ್ನಾಗಿಸಲು ಶ್ರಮಿಸಿದ ದಲಿತ ಸಂಘಟನೆಗಳ ಪ್ರಸ್ತಾಪವೇ ಇಲ್ಲದ್ದನ್ನು ಕಂಡು ಬೇಸರವಾಗಿ ಈ ಮಾತುಗಳನ್ನು ಹೇಳಬೇಕಾಯಿತು. ಜಿಟಿಡಿಯವರೇ ಮುಂದಿನ ಬಾರಿ ಹೀಗೆ ಮಾತನಾಡುವಾಗ, ಮಹದೇವಪ್ಪ ಅವರನ್ನು ಬೆಳೆಸುವಲ್ಲಿ ದಲಿತ ಸಂಘಟನೆಗಳ ಪಾತ್ರ ದೊಡ್ಡದಿದೆ ಎಂದರೆ ನಿಮ್ಮ ಬಗ್ಗೆ ನಾನು ನಿಜಕ್ಕೂ ಸಂತೋಷ ಪಡುತ್ತೇನೆ"ಎಂದು ಮಹದೇವಪ್ಪನವರು ಜಿಟಿಡಿಗೆ ತಿರುಗೇಟು ನೀಡಿದ್ದಾರೆ.
-
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್












Click it and Unblock the Notifications