Get Updates
Get notified of breaking news, exclusive insights, and must-see stories!

Channapatna By Election: ಚನ್ನಪಟ್ಟಣದಲ್ಲಿ ಬೆಟ್ಟಿಂಗ್‌ ಜಾಲ ಜೋರು; ಕಾಂಗ್ರೆಸ್‌ ಗೆಲುವು ಖಚಿತ ಎಂದ ಡಿ ಕೆ ಸುರೇಶ್‌

ಬೆಂಗಳೂರು, ನವೆಂಬರ್‌ 15: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದು, ಚನ್ನಪಟ್ಟಣದಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಬೆಟ್ಟಿಂಗ್‌ ದಂದೆ ಜೋರಾಗಿದೆ.

ಈ ಕುರಿತು ಮಾಜಿ ಸಂಸದರಾದ ಡಿ ಕೆ ಸುರೇಶ್‌ ಮಾತನಾಡಿ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಕಾರ್ಯಕರ್ತರು ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ತೊಂದರೆ ಅನುಭವಿಸದಿರಲಿ ಎಂಬ ಉದ್ದೇಶದಿಂದ ಯೋಗೇಶ್ವರ್ ಹೇಳಿಕೆ ನೀಡಿರಬಹುದು ಎಂದು ತಿಳಿಸಿದರು.

Congress candidate s victory is certain in Channapatna Says DK Suresh

ಚನ್ನಪಟ್ಟಣ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಫಲಿತಾಂಶಕ್ಕೂ ಮುನ್ನವೇ ಸೋಲುವ ಬಗ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿ, ಒಬ್ಬೊಬ್ಬರ ಭಾವನೆ ಒಂದೊಂದು ರೀತಿ ಇದೆ. ಅವರು ಹಾಗೂ ನಮಗೆ ಗೆಲ್ಲುವ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಅನಗತ್ಯವಾಗಿ ಬೆಟ್ಟಿಂಗ್ ಕಟ್ಟಿಕೊಂಡು ತೊಂದರೆ ಮಾಡಿಕೊಳ್ಳುತ್ತಾರೋ, ತಮ್ಮಿಂದ ಅವರ ಮನೆಗಳಲ್ಲಿ ಆರ್ಥಿಕ ಸಂಕಷ್ಟವಾಗುತ್ತದೆಯೋ ಎಂದು ಆ ರೀತಿ ಹೇಳಿರಬಹುದು ಎಂದರು.

ಒಕ್ಕಲಿಗ ಸಮುದಾಯ ದೇವೇಗೌಡರ ಕುಟುಂಬದ ಮೇಲೆ ಹೆಚ್ಚಿನ ಒಲವು ಇಟ್ಟಿದ್ದಾರೆ ಎಂಬ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ದೇವೇಗೌಡರು ದೇಶದ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಹಾಗೂ ದಕ್ಷಿಣ ಭಾರತದಿಂದ ಅತ್ಯುನ್ನತ ಸ್ಥಾನಕ್ಕೆ ಏರಿದ ನಾಯಕ. ಹೀಗಾಗಿ ಸಮಾಜದವರು ಅವರ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ನನಗೂ ಅವರ ಮೇಲೆ ಗೌರವವಿದೆ. ರಾಜಕಾರಣ ವಿಚಾರ ಬಂದಾಗ ನಾನು ಹೋರಾಟ ಮಾಡುತ್ತೇನೆ. ಅದರ ಹೊರತಾಗಿ ವೈಯಕ್ತಿಕವಾಗಿ ನನಗೆ ಅವರ ಮೇಲೆ ಗೌರವವಿದೆ ಎಂದು ತಿಳಿಸಿದರು.

ಅವರ ಹೇಳಿಕೆ ಹೊಸತೇನಲ್ಲ. ಆದರೆ ಅವರ ಹೇಳಿಕೆ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ಪಡೆಯಲಾಗಿದೆ. ಜನರ ಮೇಲೆ ಪರಿಣಾಮ ಬೀರಬೇಕು ಎಂಬ ಉದ್ದೇಶದಿಂದ ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡಿದ್ದು ಸರಿಯೇ? ಜಮೀರ್ ಅಹ್ಮದ್ ತಮ್ಮ ಸ್ನೇಹಿತರ ಬಗ್ಗೆ ಹೊಸದಾಗಿ ಹೇಳಿದ್ದರೆ ಇಷ್ಟು ಪ್ರಚಾರ ಮಾಡಬಹುದಾಗಿತ್ತು. ಆದರೆ ಈ ಹಿಂದೆಯೂ ಇಂತಹ ಹೇಳಿಕೆ ನೀಡಿದ್ದರೂ ಆಗ ಹೆಚ್ಚು ಪ್ರಚಾರ ಪಡೆಯದೇ ಚುನಾವಣೆ ಸಮಯದಲ್ಲಿ ಮಾಧ್ಯಮಗಳು ಇಷ್ಟು ದೊಟ್ಟ ಮಟ್ಟದಲ್ಲಿ ಯಾಕೆ ತೋರಿಸಿದವು? ನಮ್ಮ ಪಕ್ಷದ ಮೇಲೆ ಅವರಿಗೆ ಅಷ್ಟೊಂದು ಕೋಪ ಏಕೆ ಎಂಬುದು ಅರ್ಥವಾಗುತ್ತಿಲ್ಲ.

ನಿಮ್ಮ ಸಚಿವರು ಮಾತು ಆಡುವಾಗ ಏನು ಮಾತನಾಡುತ್ತಿದ್ದೇನೆ ಎಂದು ಅರಿಯಬೇಕಲ್ಲವೇ ಎಂದು ಕೇಳಿದಾಗ, "ಅವರು ಇಂದು ಮಾತನಾಡಿರುವುದಲ್ಲ. ಈ ಹಿಂದೆ ಮಾತನಾಡಿದಾಗಲೇ ಇಷ್ಟು ದೊಡ್ಡ ಪ್ರಚಾರ ಮಾಡಿದ್ದರೆ ಅದನ್ನು ಮೊಟಕುಗೊಳಿಸುವಂತೆ ಮಾಡಬಹುದಿತ್ತು. ನಿಷ್ಪಕ್ಷಪಾತ ಪಾತ್ರ ವಹಿಸುವ ಮಾಧ್ಯಮದವರು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರ ಮಾಡಿದ್ದು, ನಮ್ಮ ಮೇಲಿನ ಕೋಪವೇ ಇದು" ಎಂಬುದು ನನ್ನ ಅಭಿಪ್ರಾಯ.

ಅವರ ಮಾತಿಗೆ ಹೈಕಮಾಂಡ್ ಕಡಿವಾಣ ಹಾಕಬಹುದಲ್ಲವೇ ಎಂದು ಕೇಳಿದಾಗ, "ಇಬ್ಬರು ವ್ಯಕ್ತಿಗಳ ನಡುವೆ ವೈಯಕ್ತಿಕವಾದ ಹೇಳಿಕೆಗಳು ಪಕ್ಷಕ್ಕೆ ಸಂಬಂಧಿಸುವುದಿಲ್ಲ. ಕೇವಲ ಚುನಾವಣಾ ದೃಷ್ಟಿ ಇಟ್ಟುಕೊಂಡು ಚರ್ಚೆ ಮಾಡಲಾಗಿದೆ ಎಂಬುದು ನಮ್ಮ ಅಭಿಪ್ರಾಯ. ಚುನಾವಣೆ ಮುಗಿದ ಮೇಲೂ ಅದನ್ನು ಚರ್ಚೆ ಮಾಡಿ ಎಂದು ಹೇಳಿದರು.

ಪ್ರತಿಪಕ್ಷಗಳಿಗೆ ಇದು ಅಸ್ತ್ರವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿ, ಇದು ಮಾಧ್ಯಮಗಳ ಸೃಷ್ಟಿ. ಪ್ರತಿಪಕ್ಷಗಳು ಅನೇಕ ಸಂದರ್ಭದಲ್ಲಿ ಅನೇಕ ಹೇಳಿಕೆ ನೀಡುತ್ತವೆ. ಡಿ.ಕೆ. ಶಿವಕುಮಾರ್ ಅವರನ್ನು ಕಳ್ಳ, ಲೂಟಿಕೋರ, 100 ರೂಪಾಯಿಗೆ ಕೂಲಿಗೆ ಇದ್ದ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದಾಗ, ಅವರು ಎಲ್ಲಿ ಕದ್ದಿದ್ದಾರೆ ಎಂದು ಮಾಧ್ಯಮಗಳು ಏಕೆ ಪ್ರಶ್ನೆ ಮಾಡಲಿಲ್ಲ. ನಿಮ್ಮ ಮೌಲ್ಯಗಳು ಕೂಡ ಈ ಸಂದರ್ಭದಲ್ಲಿ ಪ್ರಶ್ನೆಗೆ ಒಳಪಟ್ಟಿವೆ ಎಂದು ತಿಳಿಸಿದರು.

ವಿರೋಧ ಪಕ್ಷಗಳು ಇದನ್ನು ಬಳಸಿಕೊಳ್ಳಲಿಲ್ಲವೇ ಎಂದು ಕೇಳಿದಾಗ, "ರಾಜಕೀಯದಲ್ಲಿ ನಮ್ಮನ್ನು ಅವರು ಟೀಕಿಸುವುದು, ಅವರನ್ನು ನಾವು ಟೀಕಿಸುವುದು ಸರ್ವೇ ಸಾಮಾನ್ಯ. ಈ ಚುನಾವಣೆ ವೈಯಕ್ತಿಕ ಹೇಳಿಕೆ ಹೊರತಾಗಿ ಅಭಿವೃದ್ಧಿ ವಿಚಾರ, ರಾಜಕೀಯ ದೃಷ್ಟಿಕೋನ, ಜನರ ಕಷ್ಟ ಸುಖದ ಬಗ್ಗೆ ಚರ್ಚೆ ಮಾಡಲಿಲ್ಲ. ಕೇವಲ ವೈಯಕ್ತಿಕ ಟೀಕೆಗಳ ಮೇಲೆ ರಾಜಕೀಯ ಮಾಡಿದರು. ಮೋದಿ, ಕುಮಾರಸ್ವಾಮಿ, ದೇವೇಗೌಡರ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಬಾಯಿಗೆ ಬಂದಂತೆ ಬೈದಿದ್ದು ಬಿಟ್ಟರೆ ಬೇರೆ ಏನೂ ಅವರು ಚರ್ಚೆ ಮಾಡಲಿಲ್ಲ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+