Get Updates
Get notified of breaking news, exclusive insights, and must-see stories!

ಹಿಂದಿ, ಇಂಗ್ಲಿಷ್ ಭಾಷೆಯಿಂದ ರಾಜ್ಯದ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಅಯೋಮಯ; ಜೆಡಿಎಸ್ ಆರೋಪ

'ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುವುದರಿಂದಾಗಿ ಕರ್ನಾಟಕದ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಅಯೋಮಯವಾಗಿದೆ. ಗ್ರಾಮಗಳ ಜನರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ'.

ಬೆಂಗಳೂರು, ಫೆಬ್ರವರಿ. 08: ಕನ್ನಡಿಗರದ್ದೇ ಆದ ವಿಜಯಾ ಬ್ಯಾಂಕ್ ಮುಳುಗಿಸಿದ್ದಾಯ್ತು. ಈಗ ಅಲ್ಲಿನ ಹುದ್ದೆಗಳು ಅನ್ಯ ರಾಜ್ಯದವರ ಪಾಲಾಗುತ್ತಿದೆ ಎಂದು ಜಾತ್ಯಾತೀತ ಜನತಾದಳ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಹಿಂದೆಯು ಕನ್ನಡದಲ್ಲಿಯೇ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಬೇಕು, ರಾಜ್ಯದ ಯುವಕರಿಗೆ ಉದ್ಯೋಗ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ಜೊತೆಗೆ ಬ್ಯಾಂಕ್‌ನಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬಲಸುವ ಕಾರಣ ಜನರಿಗೆ ಬ್ಯಾಂಕಿಂಗ್ ಸೇವೆ ಸರಿಯಾಗಿ ತಲುಪುತ್ತಿಲ್ಲ ಎಂದು ಜೆಡಿಎಸ್ ಆರೋಪಿಸಿದೆ.

"ಬ್ಯಾಂಕಿಂಗ್ ಕ್ಷೇತ್ರದ ಪರೀಕ್ಷೆಗಳು ಕನ್ನಡದಲ್ಲಿ ನಡೆಯದ ಕಾರಣ ಹಾಗೂ ಅನ್ಯ ರಾಜ್ಯಗಳಿಂದ ಆಯ್ಕೆಯಾಗುವ ಸಿಬ್ಬಂದಿಗಳು ಕನ್ನಡ ಕಲಿಯದೇ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುವುದರಿಂದಾಗಿ ಕರ್ನಾಟಕದ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಅಯೋಮಯವಾಗಿದೆ. ಗ್ರಾಮಗಳ ಜನರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ" ಎಂದು ಹೇಳಿದೆ.

Communicate in Local Languages in State Banks; JDS

"ಸೇವಾ ಕ್ಷೇತ್ರದ ಅನುಕೂಲಗಳನ್ನು ಪಡೆಯಲು ಭಾಷೆಯ ಕಾರಣದಿಂದ ಜನರು ವಂಚಿತರಾಗುವ ಪರಿಸ್ಥಿತಿ ಮನಸ್ಸಿಗೆ ನೋವು ತರುತ್ತದೆ.‌ ಸರ್ಕಾರದ ನೀತಿ-ನಿಯಮಾವಳಿಗಳು ಜನರ ಅಶೋತ್ತರಗಳಿಗೆ ದನಿಯಾಗಬೇಕು. ಅದು ಬಿಟ್ಟು, ಸೇವಾ ಕ್ಷೇತ್ರಗಳಿಂದ ಗ್ರಾಮಗಳ ಜನರು ದೂರಾಗುವಂತೆ ಮಾಡಬಾರದು" ಎಂದಿದೆ.

"ಪ್ರಾದೇಶಿಕ ಭಾಷೆ, ಅಧಿಕಾರ, ಬೇಡಿಕೆಗಳನ್ನು ಕತ್ತು ಹಿಸುಕಿ ಸಂತಸಪಡುವ ವಿಕೃತ ನಡೆಯು ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರಕ್ಕಂತೂ ಅಭ್ಯಾಸವಾಗಿ ಹೋಗಿದೆ. ಕನ್ನಡಿಗರದ್ದೇ ಆದ ವಿಜಯಾ ಬ್ಯಾಂಕ್ ಮುಳುಗಿಸಿದ್ದಾಯ್ತು. ಬ್ಯಾಂಕಿಂಗ್ ಪರೀಕ್ಷೆಗಳ ನಿಯಮಗಳಲ್ಲಿ ಬದಲಾವಣೆ ಮಾಡಿದ ಕಾರಣ, ಅಲ್ಲಿನ ಹುದ್ದೆಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ" ಎಂದು ಕಿಡಿಕಾರಿದೆ.

"ಬ್ಯಾಂಕ್ ಗಳು ಸ್ಥಳೀಯ ಭಾಷೆಗಳಲ್ಲೇ ಸಂವಹನ ಮಾಡಬೇಕೆಂದು ಆದೇಶಿಸಿದರೆ ನಡೆಯುವುದಿಲ್ಲ. ಅದು ಕಾರ್ಯಗತ ಆಗಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಇಲ್ಲದಿದ್ದರೆ ನಮ್ಮ ಗ್ರಾಮೀಣ ಭಾಗದ ಜನತೆ ಬ್ಯಾಂಕಿಂಗ್ ನ ಎಲ್ಲ ಸೇವೆಗಳನ್ನು ಪಡೆಯಲು ಹರಸಾಹಸ ಪಡಬೇಕಾಗುತ್ತದೆ" ಎಂದು ವಿವರಿಸಿದೆ.

'ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸಲು ಹಲವು ಬಾರಿ ವಿನಂತಿ ಮಾಡಿಕೊಳ್ಳಲಾಗಿದೆ. ಅವರು ನಮ್ಮ ಬೇಡಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ನಮ್ಮ ರಾಜ್ಯದ ತೆರಿಗೆ, ಅಧಿಕಾರ ಮಾತ್ರ ಅವರಿಗೆ ಬೇಕಿರುವುದು. ಇಂತಹ ಹೀನ ಮನಸ್ಥಿತಿಯವರನ್ನು ಜನತೆ ಅಧಿಕಾರದಿಂದ ಕಿತ್ತೊಗೆಯಲೇಬೇಕಿದೆ' ಎಂದು ಜನರಿಗೆ ಆಗ್ರಹಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+