ಸಿಎಂ ಹನುಮ ಜಯಂತಿ ಶುಭಾಶಯ: ಲೇವಡಿ ಮಾಡಿದ ಟ್ವಿಟ್ಟಿಗರು
ಸಿಎಂ ಹನುಮಜ್ಜಯಂತಿ ಶುಭಾಶಯ: ಲೇವಡಿ ಮಾಡಿದ ಟ್ವಿಟ್ಟಿಗರು
Recommended Video

ಅಂಜನೀಪುತ್ರ ಹನುಮ ಜಯಂತಿಯ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಸಮಸ್ತ ಜನತೆ ಶುಭ ಕೋರಿದ್ದಾರೆ. ಟ್ವಿಟ್ಟರ್ ಮೂಲಕ ಶುಭ ಕೋರಿದ ಮುಖ್ಯಮಂತ್ರಿಗಳನ್ನು ಟ್ವಿಟ್ಟಿಗರು ಲೇವಡಿ ಮಾಡಿದ್ದಾರೆ.
ಹನುಮಜ್ಜಯಂತಿಯ ದಿನವಾದ ಶನಿವಾರ (ಮಾ 31) ಸಿಎಂ ಸಿದ್ದರಾಮಯ್ಯ, 'ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ' ಎಂದು @siddaramaiah ಅಕೌಂಟಿನಿಂದ ಟ್ವೀಟ್ ಮಾಡಿದ್ದರು.
ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಹನುಮ ಭಕ್ತರನ್ನು ಬಂಧಿಸುವ ನೀವು, ಹನುಮ ಜಯಂತಿಗೆ ಶುಭ ಕೋರುವುದು ತರವಲ್ಲ, ನಿಮ್ಮ ಶುಭಾಶಯಗಳು ಯಾರಿಗೆ ಬೇಕಿದೆ, ನಾವು ಯಾವಾಗಲೂ ಸಿದ್ದರಾಮಯ್ಯನವರ ಪರ.. ಹೀಗೆ ಹಲವು ಟ್ವೀಟ್ ಪ್ರತಿಕ್ರಿಯೆಗಳು ಬಂದಿವೆ.
ಹನುಮ ಜಯಂತಿಯ ಪ್ರಯುಕ್ತ ದೇಶದ ಸಮಸ್ತ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜಕೀಯ ಮುಖಂಡರು ಶುಭ ಕೋರಿದ್ದಾರೆ. ಬಿಜೆಪಿಯ ಕರ್ನಾಟಕ ಘಟಕವೂ ಮುಖ್ಯಮಂತ್ರಿಗಳ ಶುಭಾಶಯಕ್ಕೆ ಅಣಕವಾಡಿದೆ.
ಚೈತ್ರ ಮಾಸದಲ್ಲಿ ಬರುವ ಈ ಹನುಮ ಜಯಂತಿಯನ್ನು ಭಾರತದಲ್ಲಿ ವಿಶಿಷ್ಟ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಸಿಎಂ, ಬಿಜೆಪಿ ಟ್ವೀಟ್ ಮತ್ತು ಸಿದ್ದರಾಮಯ್ಯನವರಿಗೆ ಬಂದ ಕೆಲವೊಂದು ಪ್ರತಿಕ್ರಿಯೆಗಳು, ಮುಂದೆ ಓದಿ..

ಸಿಎಂ ಸಿದ್ದರಾಮಯ್ಯ ಹನುಮಜ್ಜಯಂತಿ ಶುಭಾಶಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟ್ವೀಟ್ ಹೀಗಿದೆ, "ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ".

ಬಿಜೆಪಿ ಪ್ರತಿಕ್ರಿಯಿಸಿದ್ದು ಹೀಗೆ
ಮುಖ್ಯಮಂತ್ರಿಗಳ ಟ್ವೀಟಿಗೆ ಬಿಜೆಪಿ ಪ್ರತಿಕ್ರಿಯಿಸಿದ್ದು ಹೀಗೆ, " ಟ್ವಿಟ್ಟರ್ನಲ್ಲಿ ಶುಭಾಶಯ ಕೋರುವುದು ಹಾಗಿರಲಿ ಸರ್. ಗಣೇಶ ಚತುರ್ಥಿ, ಹನುಮ ಜಯಂತಿ, ರಾಮನವಮಿ ಹೀಗೆ ಎಲ್ಲ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದು, ಈಗ ಮಾತ್ರ ಟ್ವಿಟ್ಟರ್ನಲ್ಲಿ ಶುಭಾಶಯ ಕೊರ್ತೀರಲ್ಲ, ಏನು ಅನ್ನಿಸೋದಿಲ್ಲವಾ?".

ಸಿದ್ದರಾಮಯ್ಯನವರನ್ನು ಅಣಕವಾಡಿದ ಟ್ವಿಟ್ಟಿಗರು
ಹಿಂದುತ್ವ ಅದು ಪ್ರತಿಯೊಬ್ಬ ಭಾರತೀಯನ ಜೀವನ ಶೈಲಿ. ಆದರೆ ದಾಳಿಕೋರರಿಂದ ಹಾಗೂ ಲದ್ದಿ ಜೀವಿಗಳಿಂದ ಆ ಜೀವನ ಶೈಲಿಗೆ ಆತಂಕ ಬಂದೊದಗಿದೆ. ಬಹು ದೈವ ಆರಾಧನೆ ಇದರ ಸಂಸ್ಕೃತಿ. ಆರಾಧನೆಗೆ ತಡೆಯೊಡ್ಡುತ್ತಿರುವುದು ಕಾಂಗ್ರೆಸ್. ನಾಚಿಕೆ ಆಗಬೇಕು ಸರ್ ನಿಮಗೆ, ಓಟಿಗಾಗಿ ಯಾವ ಬಣ್ಣವನ್ನಾದರು ಹಚ್ಚುತೀರಾ. 5 ವರ್ಷಗಳ ನಂತರ ನಮ್ಮ ನೆನಪು ಮಾಡಿಕೊಂಡ ನಿಮಗೆ ಧನ್ಯವಾದಗಳು ಸ್ವಾಮೀ, ಆದರೆ #ಈ_ಭಾರಿ_ಬಿಜೆಪಿ_ಸರಕಾರ

ನಿಮ್ ಡಂಗಾಣಿ ಶುಭಾಷಯಗಳು ನಮ್ಗೆ ಬೇಕಿಲ್ಲಾ
ಸ್ವಾಮಿ ಇವತ್ತು ಊಟಕ್ಕೆ ಏನು?? ಮೀನಾ? ಬೀಫಾ? ಏನಾದರೂ ತಿನ್ಕೊಳ್ಳಿ ಆದರೆ ಎಲ್ಲರ ಮುಂದೆ ತಿಂದು ನಂತರ ದೇವಸ್ಥಾನಕ್ಕೆ ಮಾತ್ರ ಹೋಗ್ಬೇಡಿ. ನಿಮ್ ಡಂಗಾಣಿ ಶುಭಾಷಯಗಳು ನಮ್ಗೆ ಬೇಕಿಲ್ಲಾ ... ಎಲೆಕ್ಷನ್ ಬಂದ ಕೂಡ್ಲೆ ಹಿಂದುಗಳ ನೆನಪಾಗುತ್ತಲ್ವಾ ...

ಹನುಮನ ಧೈರ್ಯದಿಂದಲೇ ಹಿಂದೂ ವಿರೇೂಧಿಗಳನ್ನು ಎದುರಿಸಿರೇೂದು
ಏನ್ ಎಲೆಕ್ಷನ್ ಅಂತ ನಮ್ಮನ್ನು ಓಲೈಕೆ ಮಾಡ್ತಾಯಿದೀರಾ??? ನಿಮ್ kembridge ANAL-ytica ಟ್ರಿಕ್ಸ್.ಗೆ ನಾವ್ ಬಗ್ಗೋಲ್ಲಾ ... ಅಲ್ಲ ಸಾರ್ ಹನುನ ಮಾಲಧಾರಿಗಳನ್ನ ಬಂಧಿಸಿˌಹನುಮ ಜಯಂತಿಗೆ ನಿರ್ಬಂಧ ಹೇರಿˌ ಈಗ ಹನುಮ ಜಯಂತಿಗೆ ಶುಭಾಶಯ ಹೇಳುತ್ತಿರಲ್ಲ ಏನ್ ಸಾರ್ ಇದು Hypocrasy. ಆ ಹನುಮನ ಧೈರ್ಯದಿಂದಲೇ ನಿಮ್ಮಂತಹ ಹಿಂದೂ ವಿರೇೂಧಿಗಳನ್ನು ಎದುರಿಸಿರೇೂದು.......
-
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಪೂರಕ ವಾತಾವರಣ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಸಿಎಂ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications