ಯೋಧರಿಗೆ ಸಮರ್ಪಣೆಯಾದ ಹೊಸ ವಾಹಿನಿ ಪವರ್ ಟಿವಿ
ಬೆಂಗಳೂರು, ಅಕ್ಟೋಬರ್ 19: ಕನ್ನಡ ಮಾಧ್ಯಮ ಲೋಕಕ್ಕೆ ಮತ್ತೊಂದು ಹೊಸ ಸುದ್ದಿವಾಹಿನಿ ಸೇರ್ಪಡೆಯಾಗಿದೆ. ಸ್ವರಾಜ್, ಸುದ್ದಿ ಟಿವಿ ಮುಚ್ಚಿರುವ ಸಂದರ್ಭದಲ್ಲೇ ಚಂದನ್ ಶರ್ಮ ಸಾರಥ್ಯದಲ್ಲಿ ಪವರ್ ನ್ಯೂಸ್ ಚಾನೆಲ್ ಕನ್ನಡ ನಾಡಿಗೆ ಸಮರ್ಪಣೆಯಾಗಿದೆ.
ನಮ್ಮ ಇಂದಿಗಾಗಿ ತಮ್ಮ ನಾಳೆಯನ್ನು ಬಲಿಕೊಟ್ಟ, ಕೊಡುತ್ತಿರುವ ವೀರ ಯೋಧರಿಗೆ ಚಾನೆಲ್ ಅನ್ನು ಅರ್ಪಣೆ ಮಾಡಿದ್ದಾರೆ. ಮಾಧ್ಯಮ ಲೋಕದಲ್ಲಿ ಯೋಧರಿಗೆ ಸಮರ್ಪಣೆಯಾದ ಮೊಟ್ಟಮೊದಲ ಚಾನಲ್
ಕನ್ನಡದ 'ಅರ್ನಬ್' ಚಂದನ್ ಶರ್ಮ ಬ್ಯಾಕ್ ವಿತ್ 'ಪವರ್'
ಕ್ಯಾಪ್ಟನ್ ನವೀನ್ ನಾಗಪ್ಪ , ಏರ್ ಮಾರ್ಷಲ್ ಮುರಳಿ, ನಿವೃತ್ತ ಕರ್ನಲ್ ಅಚ್ಚಪ್ಪ ಅವರು ಪವರ್ ಟಿವಿಯನ್ನು ಲಾಂಚ್ ಮಾಡಿ ಶುಭಹಾರೈಸಿದರು.
ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ
'ನೋ ನಾನ್ಸೆನ್ಸ್ ಓನ್ಲಿ ನ್ಯೂಸ್ ಸೆನ್ಸ್' ಅನ್ನೋ ಟ್ಯಾಗ್ ಲೈನ್ ನೊಂದಿಗೆ ಸದ್ದು ಮಾಡಲು ಬಂದಿದೆ. ಬೆಂಗಳೂರಿನ ಇನ್ ಫೆಂಟ್ರಿ ರೋಡಲ್ಲಿರೋ 'ಎಂಬೆಸಿ ಪಾಯಿಂಟ್ ' ನ ಮೂರನೇ ಮಹಡಿಯಲ್ಲಿ ಚಾನೆಲ್ ನ ಆಫೀಸ್ ಇದೆ. ನ್ಯೂಸ್ ಚಾನಲ್ ಜೊತೆಗೆ ವೆಬ್ ಪೋರ್ಟಲ್ ಕೂಡ ಲಾಂಚ್ ಆಗಿದೆ. ಫೇಸ್ ಬುಕ್, ಯೂಟ್ಯೂಬ್ ನಲ್ಲೂ ನೀವು 'ಪವರ್ ಟಿವಿ' ನೋಡಬಹುದು.
'ಸುದ್ದಿ ವಾಹಿನಿ ಹಣಕಾಸಿನ ಮುಗ್ಗಟ್ಟಿನಿಂದ ಸ್ಥಗಿತಗೊಂಡಿದೆ'
ಹೊಸ ಚಾನಲ್ ಬಗ್ಗೆ ಚಂದನ್ ಮಾತನಾಡಿ, 'ನಮ್ ಚಾನಲ್ ಯಾವ್ದೇ ಪೊಲಿಟೀಶಿಯನ್ ಗೆ ಸಂಬಂಧ ಪಡಲ್ಲ. ಕ್ರೈಂ ಅನ್ನು ವೈಭವೀಕರಿಸಲ್ಲ. ಕಂಡ್ ಕಂಡವರ ಮನೆ ಬೀದಿ ಜಗಳನಾ ತಂದು ಉಣಬಡಿಸಲ್ಲ. ಸ್ವಸ್ಥ ಸಮಾಜದ ಕಲ್ಪನೆಯೊಂದಿಗೆ ಬರ್ತಿದ್ದೀವಿ. ಜನ ಇಷ್ಟು ದಿನ ಎಂಥಾ ಚಾನಲ್ ಬೇಕು ಅಂತ ನಿರೀಕ್ಷೆ ಮಾಡ್ತಿದ್ರೋ ಅಂಥಾ ಚಾನಲ್ ನಮ್ದಾಗುತ್ತೆ' ಅಂತ ಹೇಳಿದ್ರು.