ಅಳೆದು ತೂಗಿ ದಸರೆಗೂ ಮುನ್ನ ನಡೆಯಲಿದೆ ಸಂಪುಟ ವಿಸ್ತರಣೆ
ಬೆಂಗಳೂರು, ಸೆ.29: ಇಂದು ನಾಳೆ ಎಂದು ಅಳೆದು ತೂಗುತ್ತಾ ಮುಂದೂಡುತ್ತಾ ಬಂದಿದ್ದ ಸಂಪುಟ ವಿಸ್ತರಣೆಗೆ ಅಂತೂಕಾಲ ಕೂಡಿ ಬಂದಂತಿದೆ. ಈ ಕುರಿತು ಬಾದಾಮಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಇತ್ತ ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಳಿವು ಕೊಟ್ಟಿದ್ದಾರೆ.
ಹಲವು ಮಹತ್ವದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿಯು ದಸರಾದ ಒಳಗೆ ಅಂದರೆ ಅಕ್ಟೋಬರ್ 10ರೊಳಗೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅ.3ರ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಂಪುಟದಲ್ಲಿ ಖಾಲಿ ಇರುವ ಎಲ್ಲಾ ಆರು ಸ್ಥಾನಗಳನ್ನು ತುಂಬಲಾಗುವುದು ಎಂದು ಹೇಳಿದ್ದಾರೆ.
ಸಂಪುಟಕ್ಕೆ ಮೇಜರ್ ಸರ್ಜರಿ? ಪರಮೇಶ್ವರ್, ಡಿಕೆಶಿ ಖಾತೆ ಬದಲಾವಣೆ?
ಸಂಪುಟ
ಸೇರಲು
ಸಾಕಷ್ಟು
ಜನರು
ಆಕಾಂಕ್ಷಿಗಳಾಗಿದ್ದಾರೆ,
ಕಾಂಗ್ರೆಸ್
ಪಾಲಿನ
ಆರು
ಮತ್ತು
ಜೆಎಡಿಎಸ್
ಪಾಳಿನ
ಒಂದು
ಸಚಿವ
ಸ್ಥಾನ
ಭರ್ತಿಯಾಗಲಿದೆ
ಎಂದು
ಹೇಳಿದ್ದಾರೆ.
ಈ ಮೂಲಕ ಸಚಿವ ಆಕಾಂಕ್ಷಿಗಳ ಪಟ್ಟಿ ದೊಡ್ಡ ದಿದೆ ಎಂದು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಲಿದ್ದು, ಕಾಂಗ್ರೆಸ್ ನಿಂದ 20 ಜನ ಶಾಸಕಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸಭೆಯ 10 ಮಹತ್ವದ ನಿರ್ಣಯಗಳು
ಇನ್ನೊಂದೆಡೆ ದಿನೇಶ ಗುಂಡೂವಾರ್ ಅವರು ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ -ಮಂಡಳಿ ನೇಮಕಾತಿ ಪ್ರಕ್ರಿಯೆ ಎಲ್ಲವೂ ಮೊದಲೇ ತಿಳಿಸಿದಂತೆ ಅ.10 ರಂದು ನಡೆಯಲಿದೆ ಎಂದು ಹೇಳಿದ್ದಾರೆ. ಇದೆಲ್ಲಾ ಮಾತುಗಳನ್ನು ನೋಡಿದರೆ ಸಚಿವ ಸಂಪುಟ ವಿಸ್ತರಣೆಯಾಗುವುದು ಪಕ್ಕಾ ಎಂದೇ ಹೇಳಬಹುದು.