ಉಪ ಚುನಾವಣೆ : ಸಚಿವರೊಂದಿಗೆ ಸಿದ್ದು ಉಪಹಾರ ಸಭೆ!
ಬೆಂಗಳೂರು, ಜನವರಿ 23 : ಮೂರು ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹಿರಿಯ ಸಚಿವರ ಸಭೆ ನಡೆಸಿದರು. ಬೆಳಗಿನ ಉಪಹಾರದ ಜೊತೆ ನಡೆದ ಸಭೆಯಲ್ಲಿ ಗೆಲುವಿಗಾಗಿ ಕಾರ್ಯತಂತ್ರಗಳನ್ನು ರೂಪಿಸಲಾಯಿತು.
ಶನಿವಾರ
ಬೆಳಗ್ಗೆ
ನಡೆದ
ಸಭೆಯಲ್ಲಿ
ಇಂಧನ
ಸಚಿವ
ಡಿ.ಕೆ.ಶಿವಕುಮಾರ್,
ರಾಮಲಿಂಗಾ
ರೆಡ್ಡಿ,
ರೋಷನ್
ಬೇಗ್,
ಕೃಷ್ಣ
ಭೈರೇಗೌಡ,
ಹಾಗೂ
ದಿನೇಶ್
ಗುಂಡೂರಾವ್
ಪಾಲ್ಗೊಂಡಿದ್ದರು.
ಹೆಬ್ಬಾಳ
ಕ್ಷೇತ್ರದಲ್ಲಿ
ಪಕ್ಷದ
ಅಭ್ಯರ್ಥಿಯನ್ನು
ಗೆಲ್ಲಿಸಲು
ಎಲ್ಲರೂ
ಒಟ್ಟಾಗಿ
ಕೆಲಸ
ಮಾಡಬೇಕು
ಎಂದು
ಸಿದ್ದರಾಮಯ್ಯ
ಸೂಚಿಸಿದರು
ಎಂದು
ತಿಳಿದುಬಂದಿದೆ.
ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರದ ಉಪ ಚುನಾವಣೆ ಫೆ.13ರಂದು ನಡೆಯಲಿದೆ. ಭಾನುವಾರ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ನಗರವನ್ನು ಪ್ರತಿನಿಧಿಸುವ ಸಚಿವರು ಹೆಬ್ಬಾಳ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.
ಚುನಾವಣೆ ಅಧಿಸೂಚನೆ ಪ್ರಕಟಗೊಂಡು ಎರಡು ದಿನಗಳು ಕಳೆದಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮಾತ್ರ ಅಂತಿಮಗೊಂಡಿಲ್ಲ. ಆದ್ದರಿಂದ, ಪಕ್ಷ ಹೈಕಮಾಂಡ್ ನಾಯಕರ ಮೊರೆ ಹೋಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ಬೆಂಗಳೂರಿನಲ್ಲಿ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ದೆಹಲಿಗೆ ತೆರಳಿದ್ದಾರೆ.