Get Updates
Get notified of breaking news, exclusive insights, and must-see stories!

BJP Candidates 3rd List: ಬಿಜೆಪಿಯಿಂದ 3ನೇ ಪಟ್ಟಿ ಬಿಡುಗಡೆ, 10 ಮಂದಿಗೆ ಟಿಕೆಟ್, ಯಾರವರು? ತಿಳಿಯಿರಿ

ಬೆಂಗಳೂರು, ಏಪ್ರಿಲ್ 17: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಬಹುನಿರೀಕ್ಷೆಯ ಬಿಜೆಪಿಯಿಂದ ಮೂರನೇ ಪಟ್ಟಿ ಬಿಡುಗಡೆ ಆಗಿದೆ. ಇದರಲ್ಲಿ ಪ್ರಮುಖ ಕ್ಷೇತ್ರಗಳಿಗೆ ಘಟಾನುಘಟಿಗಳಿಗೆ ಟಿಕೆಟ್ ಘೋಷಣೆ ಆಗಿದೆ.

ಇದುವರೆಗೆ ಬಿಜೆಪಿ ಎರಡು ಪಟ್ಟಿ ಬಿಡುಗಡೆ ಆಗಿತ್ತು. ಇದೀಗ ಸೋಮವಾರ ಮೂರನೇ ಪಟ್ಟಿಯಲ್ಲಿ ಒಟ್ಟು 10 ಮಂದಿಗೆ ಟಿಕೆಟ್ ಘೋಷಣೆ ಮಾಡಿದೆ. ಬೆಂಗಳೂರಿನ ಗೋವಿಂದರಾಜನಗರ ಉಮೇಶ್ ಶೆಟ್ಟಿಗೆ ಬಿಜೆಪಿ ಟಿಕೆಟ್ ನೀಡಿದೆ. ಅರವಿಂದ ಲಿಂಬಾವಳಿ ಪತ್ನಿಗೂ ಟಿಕೆಟ್ ಲಭಿಸಿದೆ.

BJP Releases Third List Of Candidates For Karnataka Assembly Election 2023

ಟಿಕೆಟ್ ಸಿಕ್ಕ 10 ಅಭ್ಯರ್ಥಿಗಳ ಪಟ್ಟಿ-ಕ್ಷೇತ್ರ

ಸಂಖ್ಯೆ ಕ್ಷೇತ್ರ ಅಭ್ಯರ್ಥಿ
1 ನಾಗಠಾಣ ಸಂಜಯ ಐಹೊಳೆ
2 ಸೇಡಂ ರಾಜಕುಮಾರ್ ಪಾಟೀಲ್
3 ಕೊಪ್ಪಳ ಮಂಜುಳಾ ಅಮರೇಶ್
4 ರೋಣ ಕಳಕಪ್ಪ ಬಂಡಿ
5 ಗೋವಿಂದರಾಜನಗರ ಉಮೇಶ್ ಶೆಟ್ಟಿ
6 ಹಗರಿಬೊಮ್ಮನಹಳ್ಳಿ ಆರ್.ರಾಮಣ್ಣ
7 ಹುಬ್ಬಳ್ಳಿ ಧಾರವಾಡ ಕೇಂದ್ರ ಮಹೇಶ್ ಟೆಂಗಿನಕಾಯಿ
8 ಮಹಾದೇವಪುರ ಮಂಜುಳಾ ಅರವಿಂದ ಲಿಂಬಾವಳಿ
9 ಕೃಷ್ಣರಾಜ ಶ್ರಿವಸ್ತ

ಕೊನೆಗೂ ಬೆಂಗಳೂರಿನ 3 ಕ್ಷೇತ್ರ ಫೈನಲ್

ವರುಣಾ ಕ್ಷೇತ್ರವನ್ನು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ನೀಡಿದ್ದರಿಂದ ಆ ಕ್ಷೇತ್ರವು ಸೇರಿದಂತೆ ಬೆಂಗಳೂರಿನ ಮೂರು ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಉಳಿದಿತ್ತು. ಆ ಕ್ಷೇತ್ರಗಳಿಗೆ ಬಿಜೆಪಿ ಯಾರಿಗೆ ನೀಡುತ್ತದೆ ಎಂಬ ಕುತೂಹಲ ಇತ್ತು. ಇದೀಗ ಅದಕ್ಕೆಲ್ಲ ತೆರೆ ಬಿದ್ದಿದೆ. ಗೋವಿಂದರಾಜನಗರದ ಟಿಕೆಟ್ ಅನ್ನು ಉಮೇಶ್ ಶೆಟ್ಟಿ ಅವರಿಗೆ ನೀಡಲಾಗಿದೆ.

ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಪ್ರತಿನಿಧಿಸುತ್ತಿದ್ದ ಮಹಾದೇವಪುರ ಕ್ಷೇತ್ರದ ಟಿಕೆಟ್ ಅನ್ನು ಲಿಂಬಾವಳಿ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಘೋಷಿಸಲಾಗಿದೆ. ಇದರಿಂದ ಮಾಜಿ ಸಚಿವರಿಗೆ ಈ ಸಲ ಟಿಕೆಟ್ ಕೈ ತಪ್ಪಿದಂತಾಗಿದೆ.

ಇದರೊಂದಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಈ ಹಿಂದಿನ ಅಭ್ಯರ್ಥಿ ಕಟ್ಟಸುಬ್ರಹ್ಮಣ್ಯ ಬದಲಾಗಿ ಕಟ್ಟ ಜಗದೀಶ್ ಅವರಿಗೆ ನೀಡುವ ಮೂಲಕ ಗೊಂದಲಗಳಿಗೆ ಬಿಜೆಪಿ ತೆರೆ ಎಳೆದಿದೆ.

ಶೆಟ್ಟರ್‌ಗೆ ಸಿಗದ ಟಿಕೆಟ್ ಟೆಂಗಿನಕಾಯಿಗೆ

ಅಲ್ಲದೇ ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಪ್ರತಿನಿಧಿಸುತ್ತಿದ್ದ ಬಿಜೆಪಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈ ತಪ್ಪಿತು. ಇದರಿಂದ ಅವರಿಗಾದ ಅಸಮಧಾನ, ಮನವೊಲಿಕೆ ಯತ್ನ ವಿಫಲ ಇದೆಲ್ಲವು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

BJP Releases Third List Of Candidates For Karnataka Assembly Election 2023

ನಂತರ ಬಿಜೆಪಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್ ಒಂದು ದಿನದ ನಂತರ ಕಾಂಗ್ರೆಸ್‌ ಪಕ್ಷವನ್ನು ಸೋಮವಾರ ಸೇರಿದರು. ಅಲ್ಲದೇ ಬಿಜೆಪಿಯಲ್ಲಿ ತಮಗೆ ಅಗೌರವ ಆಗಿದೆ ಎಂದು ಹೇಳಿ ಹಲವು ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದರು.

ಇದೀಗ ಬಿಜೆಪಿ ಮೂರನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರಕ್ಕೆ ಮಹೇಶ್‌ ಟೆಂಗಿನಕಾಯಿಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಇವರು ಕಾಂಗ್ರೆಸ್‌ನಿಂದ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಜಗದೀಶ್ ಶೆಟ್ಟರ್ ವಿರುದ್ಧ ತೊಡೆ ತಟ್ಟಲಿದ್ದಾರೆ. ಜಗದೀಶ್ ಶೆಟ್ಟರ್ ಸೋಮವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಂದ ಬಿ.ಫಾರ್ಮ್ ಪಡೆದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+