Get Updates
Get notified of breaking news, exclusive insights, and must-see stories!

'ಕ್ರಿಯೆಗೆ ಪ್ರತಿಕ್ರಿಯೆ' ಎಂದಿದ್ದ ಬಸವರಾಜ ಬೊಮ್ಮಾಯಿ, ಮಧ್ಯರಾತ್ರಿ ಮನಸಾಕ್ಷಿ ಬಗ್ಗೆ ಮರುಕ!

ಬೆಂಗಳೂರು, ಜು.28: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ಕೋಮುವಾದಿ ಚಟುವಟಿಕೆಗಳು ಸ್ವಲ್ಪ ಹೆಚ್ಚಾಗಿಯೇ ನಡೆದಿದ್ದವು. ಇದಕ್ಕೆ ಪೂರಕ ಎಂಬಂತೆ ಸರ್ವ ಜನರ ರಕ್ಷಕನಾಗಬೇಕಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಒಂದು ವರ್ಗದ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸತ್ತಲೇ ಬಂದಿದ್ದರು. ಈಗ ಅದೇ ಮುಳುವಾಗುತ್ತಾ ಸಂಭ್ರಮದಲ್ಲಿರಬೇಕಾಗಿದ್ದ ಸರ್ಕಾರದ ವರ್ಷದ ಕಾರ್ಯಕ್ರಮ ಸೂತಕದ ಕಾರ್ಯಕ್ರಮದಂತಾಗಿದೆ.

ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನಿಟ್ಟೂರ ಎಂಬ ಬಿಜೆಪಿ ಯುವ ಕಾರ್ಯಕರ್ತನ ಕೊಲೆ ಬಿಜೆಪಿ ಸರ್ಕಾರದ ವರ್ಷದ ಕಾರ್ಯಕ್ರಮವನ್ನೇ ರದ್ದು ಮಾಡುವಷ್ಟು ಆಕ್ರೋಶ ಹುಟ್ಟುಹಾಕಿದೆ. ಕರಾವಳಿ ಜಿಲ್ಲೆಗಳು ಅಷ್ಟೇ ಅಲ್ಲದೆ ಅನೇಕ ಭಾಗಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಸುಮ್ಮನೆ ಕುಳಿತಿದ್ದರೂ ಸಹ ಸ್ವಪಕ್ಷದವರೇ ಸರ್ಕಾರವನ್ನು ತಪರಾಕಿ ಹಾಕುತ್ತಿದ್ದಾರೆ. ಈ ಮಧ್ಯೆ ಎಲ್ಲ ಜಿಲ್ಲೆಗಳಲ್ಲಿಯೂ ಯುವ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಬಿಸಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವರ್ಷದ ಕಾರ್ಯಕ್ರಮ ರದ್ದು ಮಾಡುವ ನಿರ್ಣಯ ಕೈಗೊಂಡಿದೆ.

ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಮತ್ತು ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಆಗಿರುವದರ ನೆನಪಿಗೆ ದೊಡ್ಡಬಳ್ಳಾಪುರದಲ್ಲಿ 'ಜನೋತ್ಸವ' ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಕಾರ್ಯಕ್ರಮಕ್ಕೆ ಬರಲು ಸಿದ್ಧವಾಗಿದ್ದರು. ಆದರೆ, ಬುಧವಾರ ತಡರಾತ್ರಿ ಮಾಧ್ಯಮಗೋಷ್ಠಿ ನಡೆಸಿರುವ ಬಸವರಾಜ ಬೊಮ್ಮಾಯಿ 'ಜನೋತ್ಸವ' ರದ್ದು ಮಾಡಿರುವುದಾಗಿ ಘೋಷಿಸಿದ್ದಾರೆ. ಜನೋತ್ಸವ ರದ್ದು ಮಾಡಲು ಯಾವುದೇ ಒತ್ತಡ ಇಲ್ಲ. ಆದರೆ, ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.

Basavaraja Bommai once called reaction to action, Now thinks about conscience at midnight!

ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳಿಗಿಂತ ವಿವಾದಗಳ ಬಗ್ಗೆ ಮಾತನಾಡಿದ್ದೇ ಹೆಚ್ಚು. ಆರಂಭದಲ್ಲಿ ಬಿಟ್‌ಕಾಯಿನ್ ಹಗರಣ, ಹಿಜಾಬ್ ವಿವಾದ, ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ, ಪಠ್ಯಪುಸ್ತಕ ಕೇಸರೀಕರಣ, ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ, ಸರ್ಕಾರದ 40 ಪರ್ಸೆಂಟ್ ಕಮಿಷನ್ ವಿರುದ್ಧ ಗುತ್ತಿಗೆದಾರ ಸಂಘದಿಂದ ಪ್ರಧಾನಿಗೆ ದೂರು ಹೀಗೆ ಇಂತಹ ವಿವಾದಗಳೇ ಮೆತ್ತಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮರೀಚಿಕೆ ಮಾಡಿವೆ.

ಬಿಜೆಪಿ ಸರ್ಕಾರದಲ್ಲಿ ಕೋಮು ಚಟುವಟಿಕೆಗಳು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂಬುದು ಎಲ್ಲೆಡೆ ಇರುವ ವಾಸ್ತವ. ಆದರೆ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವು ಪ್ರಕೋಪಕ್ಕೆ ಹೋಗುವುದನ್ನು ಸ್ಪಲ್ಪ ಮಟ್ಟಿಗೆ ತಡೆಯಲಾಗುತ್ತಿತ್ತು ಎಂಬುದೂ ಹೌದು. ಆದರೆ, ಆರ್‌ಎಸ್‌ಎಸ್‌ ಪ್ರಣೀತರಂತೆ ಇರುವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಮತ್ತೊಮ್ಮೆ ಇಂತಹ ಚಟುವಟಿಕೆಗಳು ಗರಿಗೆದರಿಕೊಂಡವು. ಕರಾವಳಿ ಸಹಿತ ಅನೇಕ ಜಿಲ್ಲೆಗಳಲ್ಲಿ ಸಾಲು ಸಾಲು ಕೋಮು ಗಲಭೆಗಳು ಕಾಣಿಸಿಕೊಂಡವು. ಇಂತಹವುಗಳನ್ನು ಮಟ್ಟ ಹಾಕಿ ಸರ್ವರನ್ನೂ ರಕ್ಷಿಸಬೇಕಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನಲ್ಲೊಮ್ಮೆ, "ಕ್ರಿಯೆಗೆ ಪ್ರತಿಕ್ರಿಯೆ ಸಾಮಾನ್ಯ" ಎಂದು ಕೆಲವರ ಬೆಂಬಲಕ್ಕೆ ನಿಂತರು. ಇಂತಹ ಮಾತುಗಳಿಂದಲೇ ನೀರು, ಗೊಬ್ಬರ ಹಾಕಿ ಬೆಳೆಸಿದ ಮರಕ್ಕೆ ಸರ್ಕಾರದ ಒಂದು ವರ್ಷದ ಸಂಭ್ರಮದ ಕಾರ್ಯಕ್ರಮ ನೇಣು ಬಿಗಿಯುವ ಸ್ಥಿತಿ ತಂದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

Basavaraja Bommai once called reaction to action, Now thinks about conscience at midnight!

ಸ್ವಪಕ್ಷದ ವಿರುದ್ಧವೇ ಆಕ್ರೋಶ:

ಬಸವರಾಜ ಬೊಮ್ಮಾಯಿ ಒಂದು ವರ್ಷದಲ್ಲಿ ಏನು ಮಾಡಿದ್ದಾರೆ? ಬರೀ ಹೋಳು ಎಂದು ವಿರೋಧ ಪಕ್ಷಗಳು ಟೀಕೆ ಮಾಡುವುದು ಚುನಾವಣಾ ರಾಜಕಾರಣದಲ್ಲಿ ಸಹಜ. ಆದರೆ, ಸರ್ಕಾರದ ವರ್ಷಾಚರಣೆಯನ್ನು ಸಂಭ್ರಮಿಸಬೇಕಾದ ಬಿಜೆಪಿ ಪಕ್ಷದ ಕಾರ್ಯಕರ್ತರೇ ಸರ್ಕಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇಂದು ಕಾಣುತ್ತಿರುವ ವಾಸ್ತವ.

ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿ ಎಲ್ಲ ಜಿಲ್ಲೆಗಳಲ್ಲಿಯೂ ಸಹ ಬಿಜೆಪಿ ಯುವ ಕಾರ್ಯಕರ್ತರು ಸಾಲು ಸಾಲು ರಾಜೀನಾಮೆಗಳನ್ನು ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಡೆ ರಾಜೀನಾಮೆ ಪತ್ರಗಳೇ ಹರಿದಾಡುತ್ತಿವೆ.

Basavaraja Bommai once called reaction to action, Now thinks about conscience at midnight!

ಮತ್ತೊಂದೆಡೆ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ ಅವರುಗಳ ಕಾರನ್ನು ಬಿಜೆಪಿ ಕಾರ್ಯಕರ್ತರೇ ಹಿಡಿದು ಅಲುಗಾಡಿಸಿದ್ದು ಜನರ ಆಕ್ರೋಶ ಎಷ್ಟು ಮಡುಗಟ್ಟಿದೆ ಎಂಬುದನ್ನು ತೋರಿಸುವಂತಿತ್ತು. ಇನ್ನೆಷ್ಟು ಜನಕ್ಕೆ 'ಓಂ ಶಾಂತಿ' ಹೇಳುತ್ತೀರಿ ಎಂದು ಅವರ ಪಕ್ಷದ ಕಾರ್ಯಕರ್ತರೇ ಸಿಎಂ ಮತ್ತು ಗೃಹ ಸಚಿವರನ್ನು ಪ್ರಶ್ನಿಸಿದ್ದರು.

'ಪ್ರವೀಣ್ ನೆಟ್ಟಾರು ಕುಟುಂಬದ ಆಕ್ರಂದನ ನೋಡಿ ಮನಸ್ಸು ಮರುಗಿದೆ. ಆ ತಾಯಿಯ ಸಂಕಟ ನೋಡಲಾಗಲಿಲ್ಲ. ಇದಕ್ಕಾಗಿ ಸರ್ಕಾರದ ವರ್ಷದ ಕಾರ್ಯಕ್ರಮದಲ್ಲಿ ಸಂಭ್ರಮ ಪಡುವುದು ಬೇಡ ಎಂದು ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯಕ್ರಮ ರದ್ದು ಮಾಡುವ ತೀರ್ಮಾನ ಮಾಡಿದ್ದೇನೆ,' ಎಂದು ಬಸವರಾಜ ಬೊಮ್ಮಾಯಿ ಬುಧವಾರ ತಡರಾತ್ರಿ ಹೇಳಿದ್ದಾರೆ. ಆದರೆ, 'ಕ್ರಿಯೆಗೆ ಪ್ರತಿಕ್ರಿಯೆ ಸಾಮಾನ್ಯ' ಎಂದು ಕೆಲವರನ್ನು ಬೆಂಬಲಿಸುವ ಮಾತನಾಡದೆ ಅಂದೇ ಎಲ್ಲಾ ಕೋಮುಚಟುವಟಿಕೆಗಳ ಎಡೆಮುರಿ ಕಟ್ಟಿದ್ದರೆ ಇಂದು ಮಧ್ಯರಾತ್ರಿ ಎದ್ದು ಆತ್ಮಸಾಕ್ಷಿಯ ಬಗ್ಗೆ ಮಾತನಾಡುವ ಅಗತ್ಯ ಬೀಳುತ್ತಿರಲಿಲ್ಲ ಎಂಬುದು ಕಟುವಾಸ್ತವ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+