Get Updates
Get notified of breaking news, exclusive insights, and must-see stories!

Basavaraj Rayareddy profile: ಸೋಲಿಲ್ಲದ ಸರದಾರ ಬಸವರಾಜ ರಾಯರೆಡ್ಡಿ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್‌ ನಾಯಕ ಬಸವರಾಜ ರಾಯರೆಡ್ಡಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್‌ ನಾಯಕ ಬಸವರಾಜ ರಾಯರೆಡ್ಡಿ. ಮಾಜಿ ಸಚಿವರೂ ಆಗಿದ್ದ ಅವರು ಲೋಕಸಭೆಯ ಸದಸ್ಯರೂ ಆಗಿ ಸಂಸತ್ತು ಪ್ರವೇಶಿಸಿದ್ದವರು. ಸಿದ್ದರಾಮಯ್ಯ ಬೆಂಬಲಿಗರಲ್ಲಿ ಅವರೂ ಒಬ್ಬರು. ಕಳೆದ ಐದು ಬಾರಿಯಿಂದಲೂ ಸತತವಾಗಿ ವಿಧಾನಸಭೆಗೆ ಅವರು ಆಯ್ಕೆಯಾಗುತ್ತಾ ಬಂದಿದ್ದಾರೆ.

ಸಪ್ಟೆಂಬರ್ 6, 1956 ರಂದು ಜನಿಸಿದ ಬಸವರಾಜ ರಾಯರೆಡ್ಡಿ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಇದಕ್ಕೂ ಮೊದಲು ಅವರು ಜೆಡಿಎಸ್‌ನಲ್ಲಿ ಇದ್ದರು. ಯಲಬುರ್ಗಾ ಶಾಸಕರಾಗಿರುವ ಇವರ ತಂದೆ ಬಸಲಿಂಗಪ್ಪ. ಬಿಎ ಎಎಲ್‌ಎಲ್‌ಬಿ ಪದವೀಧರರಾಗಿರುವ ರಾಯರೆಡ್ಡಿಯವರು ಧಾರವಾಡ ವಿಶ್ವೇಶ್ವರಯ್ಯ ಲಾ ಕಾಲೇಜಿನಲ್ಲಿ ಕಾನೂನು ಅಧ್ಯಯನ ಪೂರ್ಣಗೊಳಿಸಿದ್ದಾರೆ.

Basavaraj Rayareddy Profile

ರಾಯರೆಡ್ಡಿ ಅವರು ಕರ್ನಾಟಕ ವಿಧಾನಸಭೆಯ ಐದು ಅವಧಿಯ ಸದಸ್ಯರಾಗಿದ್ದಾರೆ ಮತ್ತು 11 ನೇ ಲೋಕಸಭೆಯ ಒಂದು ಅವಧಿಯ ಸದಸ್ಯರಾಗಿದ್ದಾರೆ. ಜೂನ್ 2016 ರಲ್ಲಿ ರಾಯರೆಡ್ಡಿ ಅವರು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಕ್ಯಾಬಿನೆಟ್ ಮಂತ್ರಿಯಾಗಿ ಸೇರ್ಪಡೆಗೊಂಡರು ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದರು.

ರಾಯರೆಡ್ಡಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನವರು ಮತ್ತು ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2000 ರ ಆರಂಭದಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ್ದರು. ರಾಯರೆಡ್ಡಿ ಅವರು 1985 ರಲ್ಲಿ ಜನತಾ ದಳ ಟಿಕೆಟ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಭಾಶ್ಚಂದ್ರ ಬಸವಲಿಂಗನಗೌಡ ಪಾಟೀಲ್ ವಿರುದ್ಧ ಸುಮಾರು 5000 ಮತಗಳಿಂದ ಗೆದ್ದು ಕರ್ನಾಟಕ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು.

Basavaraj Rayareddy Profile

1989 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಯರೆಡ್ಡಿ ಜನತಾ ದಳ ಟಿಕೆಟ್‌ನಲ್ಲಿ ನಿಂತು ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸುಭಾಶ್ಚಂದ್ರ ಬಸವಲಿಂಗನಗೌಡ ಪಾಟೀಲ್ ವಿರುದ್ಧ ಸುಮಾರು 2000 ಮತಗಳಿಂದ ಗೆದ್ದರು. 1996 ರಲ್ಲಿ ಅವರು 11 ನೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಜನತಾ ದಳ ಟಿಕೆಟ್‌ನಲ್ಲಿ ಸಂಸದರಾಗಿ ಆಯ್ಕೆಯಾದರು, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅನ್ವರಿ ಬಸವರಾಜ್ ಪಾಟೀಲ್ ಅವರನ್ನು ಸುಮಾರು 70,000 ಮತಗಳಿಂದ ಸೋಲಿಸಿದ್ದರು.

ರಾಯರೆಡ್ಡಿ ಅವರು 2008 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದರು. ಆದರೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಈಶಣ್ಣ ಗುಳಗನ್ನವರ್ ವಿರುದ್ಧ ಸುಮಾರು 29,000 ಮತಗಳಿಂದ ಸೋತರು. 2018ರ ಚುನಾವಣೆಯಲ್ಲಿ ಬಿಜೆಪಿಯ ಆಚಾರ್ ಹಾಲಪ್ಪ ಬಸಪ್ಪ ಅವರನ್ನು 13,000 ಮತಗಳ ಅಂತರದಿಂದ ಸೋಲಿಸಿದ್ದರು.

ಅವರೇ ಹೇಳಿಕೊಂಡ ಪ್ರಕಾರ ಬಸವರಾಜ ರಾಯರೆಡ್ಡಿಯವರು ರೂ 3 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದು ರೂ 29 ಲಕ್ಷದ ನಗದು ಹಣವನ್ನಿರಿಸಿಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ರೂ 15 ಲಕ್ಷ ಡಿಪಾಸಿಟ್ ಇರಿಸಿದ್ದಾರೆ ಎಂಬ ವಿವರ ನೀಡಿದ್ದಾರೆ. ಎಲ್‌ಐಸಿ ಇನ್ಶೂರೆನ್ಸ್‌ ಅನ್ನು ಹೊಂದಿದ್ದು ಅದರ ಮೌಲ್ಯ ರೂ 23 ಲಕ್ಷವಾಗಿದೆ. 30 ಲಕ್ಷದ ರೂ ಚಿನ್ನಾಭರಣಗಳನ್ನು ಹೊಂದಿರುವುದಾಗಿಯೂ ಮಾಹಿತಿ ನೀಡಿದ್ದಾರೆ. ಇದೆಲ್ಲಾ ವಸ್ತುಗಳ ಒಟ್ಟು ಮೌಲ್ಯ ರೂ 75 ಲಕ್ಷ ಎಂಬುದಾಗಿ ರಾಯರೆಡ್ಡಿ ಮಾಹಿತಿ ನೀಡಿದ್ದಾರೆ.

60 ಲಕ್ಷ ರೂ. ಬೆಲೆಯ ಕೃಷಿಭೂಮಿಯನ್ನು ಶಾಸಕರು ಹೊಂದಿದ್ದು, ರೂ 69 ಲಕ್ಷ ಬೆಲೆಯ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ರೂ 30 ಲಕ್ಷದ ವಾಣಿಜ್ಯ ಕಟ್ಟಡಗಳು ಶಾಸಕರ ಹೆಸರಿನಲ್ಲಿದೆ. ರೂ 70 ಲಕ್ಷ ಮೌಲ್ಯದ ನಿವೇಶನಗಳನ್ನು ಹೊಂದಿದ್ದಾರೆ. ಈ ಎಲ್ಲಾ ಆಸ್ತಿಪಾಸ್ತಿಗಳ ಪ್ರಸ್ತುತ ಬೆಲೆ ರೂ 2 ಕೋಟಿ ಎಂಬ ಮಾಹಿತಿ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+