Breaking: ಡಿ.31ರಂದು ಕರ್ನಾಟಕ ಬಂದ್: ಎಂದಿನಂತೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ
ಬೆಂಗಳೂರು, ಡಿಸೆಂಬರ್ 22: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿರೋಧಿಸಿರುವ ವಿವಿಧ ಕನ್ನಡ ಪರ ಸಂಘಟನೆಗಳು ಡಿ.31ರಂದು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿವೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬುಧವಾರ ಸಭೆ ಸೇರಿ ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಸುಮಾರು 35ಕ್ಕೂ ಅಧಿಕ ಸಂಘಟನೆಗಳಿಂದ ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಹೇಳಿದ್ದಾರೆ.
ಡಿ.31ರಂದು ನಡೆಯುವ ಕರ್ನಾಟಕ ಬಂದ್ ದಿನದಂದು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಸಂಚಾರ ಎಂದಿನಂತೆ ಇರಲಿದೆ ಎಂದು ಎಐಟಿಯುಸಿ ಮುಖಂಡ ಅನಂತ ಸುಬ್ಬರಾವ್ ಹೇಳಿದರು.
ಕನ್ನಡಪರ
ಸಂಘಟನೆಗಳಲ್ಲಿ
ಒಮ್ಮತವಿಲ್ಲ
ಡಿಸೆಂಬರ್
31ರಂದು
ಕನ್ನಡಪರ
ಸಂಘಟನೆಗಳಿಂದ
ಕರ್ನಾಟಕ
ಬಂದ್ಗೆ
ನಿರ್ಧಾರ
ಮಾಡಲು
ಮುಂದಾಗಿದ್ದವು.
ಆದರೆ,
ಈ
ಬಗ್ಗೆ
ಕನ್ನಡಪರ
ಸಂಘಟನೆಗಳಲ್ಲಿ
ಒಮ್ಮತ
ಮೂಡಿರಲಿಲ್ಲ.
ಎಂಇಎಸ್ ಪುಂಡಾಟಿಕೆ ಹಿನ್ನೆಲೆಯಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ನಿರ್ಧಾರ ಮಾಡಲು ಸಭೆ ಸೇರಲು ನಿರ್ಧರಿಸಿದ್ದವು.
ಅದರಂತೆ, ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರ ತನಕ ಎಲ್ಲಾ ಚಟುವಟಿಕೆ ಬಂದ್ ಆಗಲಿದೆ.
ಡಿಸೆಂಬರ್
31ರ
ಕರ್ನಾಟಕ
ಬಂದ್ಗೆ
ಕರವೇ
ಬೆಂಬಲವಿಲ್ಲ
ಡಿಸೆಂಬರ್
31ರ
ಕರ್ನಾಟಕ
ಬಂದ್ಗೆ
ಕರ್ನಾಟಕ
ರಕ್ಷಣಾ
ವೇದಿಕೆ
ಬೆಂಬಲವಿಲ್ಲ
ಎಂದು
ಕರವೇ
ಅಧ್ಯಕ್ಷ
ಟಿ.ಎ.
ನಾರಾಯಣಗೌಡ
ಸ್ಪಷ್ಟನೆ
ನೀಡಿದ್ದಾರೆ.
ಇಂತಹ
ಬಂದ್ಗೆ
ಬೆಂಬಲಿಸಿದರೆ
ಜನರಿಗೆ
ತೊಂದರೆ
ಆಗುತ್ತದೆ.
ಜನ
ಸಾಮಾನ್ಯನಿಗೆ
ನಮ್ಮ
ಹೋರಾಟವೆಂಬ
ಭಾವನೆ
ಬರಬೇಕು.
ಜನಜಾಗೃತಿ
ಸಭೆ
ಮೂಲಕ
ಜನರನ್ನು
ವಿಶ್ವಾಸಕ್ಕೆ
ಪಡೆಯಬೇಕು.
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕಾನೂನಾತ್ಮಕವಾಗಿ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಹೀಗಾಗಿ ಕಾನೂನಾತ್ಮಕವಾಗಿ ನಾವೂ ಸಹ ಒತ್ತಡ ಹಾಕಬೇಕಿದೆ. ರಾಜಭವನದ ಮೇಲೆ ಒತ್ತಡ ಹಾಕಲು ಕರವೇ ಹೋರಾಟ ಮಾಡಲಿದೆ ಎಂದು ಟಿ.ಎ. ನಾರಾಯಣಗೌಡ ಹೇಳಿದ್ದಾರೆ.