ಏಪ್ರಿಲ್ 1ರಿಂದ ಯಾವ್ಯಾವುದರ ಬೆಲೆಯಲ್ಲಿ ಹೆಚ್ಚಳ?
ಜನಸಾಮಾನ್ಯರ ಆದಾಯ ಹೆಚ್ಚಾಗುತ್ತೋ, ಬಿಡುತ್ತೋ.. ಸರಕಾರ ವರ್ಷದಿಂದ ವರ್ಷಕ್ಕೆ ತೆರಿಗೆ ಏರಿಸುವುದನ್ನು ಮಾತ್ರ ಬಿಡುವುದಿಲ್ಲ. ತೆರಿಗೆ ಏರಿಸಿದ ಮೇಲೆ ಆಡಳಿತ ಯಂತ್ರ ಚುರುಕಾಗುತ್ತೋ, ಮೂಲಭೂತ ಸೌಕರ್ಯದಲ್ಲಿ ಬದಲಾವಣೆಯಾಗುತ್ತೋ ಅದೂ ಇಲ್ಲಾ...
2016-17ನೇ ಸಾಲಿನ ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಜನಸಾಮಾನ್ಯರ ಜೇಬಿಗೆ ಸಖತ್ ಕತ್ತರಿ ಬೀಳುವ ಕೆಲವೊಂದು ಘೋಷಣೆಗಳನ್ನು ಮಾಡಿದ್ದರು. ಯಾಕೆ ತೆರಿಗೆ ಏರಿಸುತ್ತಿದ್ದೇವೆ ಎನ್ನುವುದಕ್ಕೆ ಮುಖ್ಯಮಂತ್ರಿಗಳು ಕಾರಣವನ್ನೂ ನೀಡಿದ್ದರು. (ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ)
ಗುರುವಾರ (ಮಾ31) ಮುಕ್ತಾಯಗೊಂಡ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು, ವಿರೋಧ ಪಕ್ಷಗಳ ವಿರೋಧದ ನಡುವೆಯೂ ಬಜೆಟ್ ಗೆ ಸದನದಲ್ಲಿ ಅನುಮೋದನೆ ಪಡೆದುಕೊಂಡಿದ್ದಾರೆ.
ಇಂದಿನಿಂದ ಅರ್ಥಾತ್ ಮೂರ್ಖರ ದಿನವೆಂದೇ ಹೆಸರಾಗಿರುವ ಏಪ್ರಿಲ್ ಒಂದರಂದು ಹೊಸ ತೆರಿಗೆ ಪದ್ದತಿ ಜಾರಿಗೆ ಬರಲಿದೆ. ಹಾಗಾಗಿ, ಕೆಲವೊಂದು ದೈನಂದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದೆ.
ದಿನನಿತ್ಯಕ್ಕೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗುವುದರಿಂದ ಇದರ ಪರಿಣಾಮ ನೇರವಾಗಿ ಜನರಿಗೆ ಬೀಳುವುದು ಒಂದೆಡೆಯಾದರೆ, ಹೊಸ ತೆರಿಗೆಯ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದುಬರಲಿದೆ. (ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ)
ಇಂದಿನಿಂದ ಯಾವುದು ತುಟ್ಟಿಯಾಗಲಿದೆ ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ವಿದ್ಯುತ್ ದರ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಪ್ರಕಟಿಸಿದ ವಿದ್ಯುತ್ ದರ ಏರಿಕೆ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ ಮಾಡಿದ್ದು, ಶೇ 9ರಷ್ಟು ಒಟ್ಟಾರೆ ದರ ಹೆಚ್ಚಳದ ಬಿಸಿ ಇಂದಿನಿಂದ (ಏಪ್ರಿಲ್ 1) ಜನಸಾಮನ್ಯರು ಅನುಭವಿಸದೇ ಬೇರೆ ದಾರಿಯಿಲ್ಲ.

ತೈಲೋತ್ಪನ್ನಗಳ ಬೆಲೆ ಏರಿಕೆ
ಬಜೆಟ್ ನಲ್ಲಿ ತೈಲೋತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಮತ್ತಷ್ಟು ಹೆಚ್ಚಿಸಲಾಗಿತ್ತು. ಪೆಟ್ರೋಲ್ ಮೇಲೆ ಶೇ. 26ರಿಂದ ಶೇ. 30, ಡೀಸೆಲ್ ಮೇಲೆ ಶೇ. 16.65 ರಿಂದ ಶೇ. 19ಕ್ಕೆ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಬೆಲೆ 2.48 ರೂಪಾಯಿ ಮತ್ತು ಡೀಸೆಲ್ ಬೆಲೆ 1.03 ರೂಪಾಯಿ ಏರಿಕೆಯಾಗಿದೆ.

ಅಬಕಾರಿ
ಬಿರುಬೇಸಿಗೆಯಲ್ಲಿ ಕೋಲ್ಡ್ ಬಿಯರ್ ಹೀರಿದರೆ ಅದರ ಮಜಾವೇ ಬೇರೆ ಎನ್ನುವುದು ಮದ್ಯಪ್ರಿಯರ ಒಕ್ಕೂರಿಲಿನ ಅಭಿಪ್ರಾಯ. ಮದ್ಯದ ಮೇಲೆ ಅಬಕಾರಿ ಶುಂಕವನ್ನು 45ರಿಂದ 50 ರೂಪಾಯಿಗೆ, ಬಿಯರ್ ಮೇಲಿನ ಶುಂಕವನ್ನು 5ರಿಂದ 10 ರೂಪಾಯಿಗೆ ಬಜೆಟ್ ನಲ್ಲಿ ಹೆಚ್ಚಿಸಲಾಗಿತ್ತು. ಹೀಗಾಗಿ, ಇಂದಿನಿಂದ ಬಿಯರ್ ಏಳರಿಂದ ಒಂಬತ್ತು ರೂಪಾಯಿಯಷ್ಟು ತುಟ್ಟಿಯಾಗಿದೆ.

ಡಿಟಿಎಚ್, ಖಾಸಗಿ ಬಸ್ಸುಗಳ ತೆರಿಗೆ
ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಖಾಸಗಿ ಬಸ್ಸುಗಳ ಮೇಲಿನ ತೆರಿಗೆಯನ್ನು ಶೇ. 29ರಷ್ಟು ಏರಿಕೆ ಮಾಡಿತ್ತು. ಇದರಿಂದ ಖಾಸಗಿ ಬಸ್ಸುಗಳು ಪಾವತಿಸ ಬೇಕಾಗಿರುವ ಮೊತ್ತ, ಮೂರು ತಿಂಗಳಿಗೊಮ್ಮೆ 2,700ರಿಂದ 3,500ಕ್ಕೆ ಏರಿಕೆಯಾಗಿದೆ. ಇನ್ನು ಡಿಟಿಎಚ್ ಮತ್ತು ಎಂಎಸ್ಒ ಸೇವೆಗಳ ಮೇಲೆ ತೆರಿಗೆ ಶೇ. 4ರಿಂದ ಶೇ. 10ಕ್ಕೆ ಹೆಚ್ಚಳ ಆಗಿರುವುದರಿಂದ ಇದೂ ಕೂಡಾ ದುಬಾರಿಯಾಗಲಿದೆ.

ಮಾರ್ಗಸೂಚಿ ದರ, ಬಿಬಿಎಂಪಿ ತೆರಿಗೆ
ಆಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ (guidance value) ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಒಟ್ಟಾರೆಯಾಗಿ ಶೇ. 10ರಿಂದ ಗರಿಷ್ಠ ಶೇ. 30ರವರೆಗೆ ದರ ಏರಿಕೆ ಆಗಲಿದೆ. ಇದರಿಂದ ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ತೆರಿಗೆ ಶೇ. 20 ರಿಂದ ಶೇ. 25ರಷ್ಟು ಹೆಚ್ಚಳವಾಗಲಿದೆ.

ಪರಿಷ್ಕೃತವಾಗಲಿರುವ ಇತರ ಶುಲ್ಕಗಳು
ಇದಲ್ಲದೇ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಟಿವಿ, ಭೂದಾನ, ಭೂಗುತ್ತಿಗೆ, ಕೃಷಿ ಆಸ್ತಿಗಳ ಮೇಲಿನ ಮಾರ್ಗಸೂಚಿ ದರದಲ್ಲಿ ಏರಿಕೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications