ಮಂಡ್ಯದಲ್ಲಿ ನಿಶ್ಚಲರಾಗಿ ಮಲಗಿರುವ 'ಮಂಡ್ಯದ ಗಂಡು' ಅಂಬರೀಶ್
ಬೆಂಗಳೂರು, ನವೆಂಬರ್ 25: ನಟ, ರಾಜಕಾರಣಿ ಅಂಬರೀಶ್ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಅಂಬರೀಶ್ ಅವರ ಮೃತದೇಹವನ್ನು ಕಂಠೀರವ ಸ್ಟೇಡಿಯಂನಲ್ಲಿ ಅಂತಿಮದರ್ಶನಕ್ಕೆ ಇಡಲಾಗಿದೆ. ಬೆಳಿಗಿನಿಂದಲೇ ಅಂಬರೀಶ್ ಅವರ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಬಳಿ ಧಾವಿಸಿ ಬರುತ್ತಿದ್ದಾರೆ.
ಅಂಬರೀಶ್ ಅವರಿಗೆ ಗೌರವ ಸಲ್ಲಿಸಲು ನಾಡಿನ ರಾಜಕಾರಣಿಗಳು, ನಟ-ನಟಿಯರು ಕಣ್ಗಳಲ್ಲಿ ನೀರು ತುಂಬಿಕೊಂಡು ಕಂಠೀರವ ಸ್ಟೇಡಿಯಂ ಬಳಿಗೆ ಬರುತ್ತಿದ್ದಾರೆ.
ಹೊರ ರಾಜ್ಯಗಳಿಂದಲೂ ಚಿತ್ರರಂಗದ ಗಣ್ಯರು ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಬರುತ್ತಿದ್ದಾರೆ.
grieved to learn of the passing of a colleague Ambareesh .. condolences and 🙏🙏prayers .. https://t.co/D1zwEeA3l8
— Amitabh Bachchan (@SrBachchan) November 25, 2018
ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರ ಸಾವಿನಿಂದ ಅವರ ಅಪಾರ ಅಭಿಮಾನಿಗಳಿಗಾಗಿರುವ ಆಘಾತ, ದು:ಖ, ನೋವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.
— Siddaramaiah (@siddaramaiah) November 24, 2018
ಈ ಸಂದರ್ಭದಲ್ಲಿ ಎಲ್ಲರೂ ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಂಡು ಮೃತ ನಾಯಕನಿಗೆ ಅಂತಿಮ ಗೌರವ ಸಲ್ಲಿಸಬೇಕೆಂದು ನಾನು ಮನವಿಮಾಡಿಕೊಳ್ಳುತ್ತೇನೆ.