ಕೆಲವೊಂದು ಮನೆಯಲ್ಲಿ ಆನೆ ದಂತದಿಂದ ಮಾಡಿರುವ ಕುರ್ಚಿ ಮತ್ತು ಟೇಬಲ್ ಸೀಜ್ ಮಾಡಬೇಕು: ಬಿಕೆ ಹರಿಪ್ರಸಾದ್
ಚಿತ್ರದುರ್ಗ, ಅಕ್ಟೋಬರ್ 27: ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಬೆನ್ನಲ್ಲೇ ಕೆಲವೊಂದು ಮನೆಯಲ್ಲಿ ಆನೆ ದಂತದಿಂದ ಕುರ್ಚಿ ಮತ್ತು ಟೇಬಲ್ ಮಾಡಿಸಿದ್ದಾರೆ. ಅವುಗಳನ್ನು ಸಹ ಸೀಜ್ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ತಿಳಿಸಿದರು.
ಈ ಕುರಿತು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಯಾಷನ್ ಗಾಗಿ ಹುಲಿ ಉಗುರು, ಕೂದಲು ಕಟ್ಟಿಕೊಳ್ಳೋದು ತಪ್ಪು ಎಂದು ಕಾನೂನು ರಕ್ಷಣೆ ಮಾಡೋರು ಕಾನೂನು ಮೀರಿ ವೈಭವೀಕರಿಸಿದರೆ ಕ್ರಮ ಆಗುತ್ತದೆ. ಅದು ಯಾರೇ ಎಷ್ಟೇ ದೊಡ್ಡವರು ಇದ್ದರು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಹುಲಿ ಸಂರಕ್ಷಣೆ ಮಾಡಿ ಅಂತ ಪ್ರಪಂಚದಲ್ಲಿ ಓಡಾಡ್ತಾ ಇದ್ದಾರೆ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತೀವಿ, ನೀವು ಉಗುರು ಧರಿಸಿ ಹುಲಿ ಸಿಂಹಗಳಿಗೆ ಅಣುಕಿಸುವ ಕೆಲಸ ಮಾಡ್ತಾ ಇದ್ದೀರಾ ಎಂದು ಹೇಳಿದ್ದಾರೆ. ಯಾರೂ ವನ್ಯ ಪ್ರಾಣಿಗಳ ಕೂದಲು, ಹಲ್ಲು, ಉಗುರು, ದಂತ ಎಲ್ಲಾ ಹಾಕ್ತೀರಾ ಅವರ ವಿರುದ್ಧ ಕ್ರಮ ಆಗುತ್ತೆದೆ ಎಂದರು.
ಮಸೀದಿಗಳಲ್ಲಿ ನವಿಲು ಗರಿ ಉಪಯೋಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿ ಅವರು ಸಹ ನವಿಲು ಸಾಕಿದ್ದರು. ನವಿಲು ಗರಿ ಹಾಕೊಂಡು ಕೆಲವೊಂದು ಕಾಣಿಸಿಕೊಂಡಿದ್ದಾರೆ. ಗರಿಗು, ಪ್ರಾಣ ತೆಗೆಯೋಕು ವ್ಯತ್ಯಾಸವಿದೆ. ನವಿಲು ಗರಿ ಹಾಕಿಕೊಂಡಿದ್ದಾರೆ ಎಂದು ಮೋದಿ ಅವರನ್ನು ಅರೆಸ್ಟ್ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಲನ್ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿ, ನಾನು ಸಿಎಂ ಸ್ಪೋಕ್ ಪರ್ಸನ್ ಅಲ್ಲ, ನಾನು ಹೆಚ್ಡಿಕೆ ಸಪೋಟರ್ ಸಹ ಅಲ್ಲ ಎಂದ ಅವರು, ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರ್ಪಡೆ ವಿಚಾರವಾಗಿ ಮಾತನಾಡಿ, ರಾಜಕೀಯವಾಗಿ ಆಡಳಿತಾತ್ಮಕವಾಗಿ ಅನುಕೂಲ ನೋಡಿ ಜಿಲ್ಲೆ ಮಾಡಲಿದ್ದಾರೆ. ಬೆಂಗಳೂರು ನಗರ ಸಿಕ್ಕಾಪಟ್ಟೆ ಬೆಳೆಯುತ್ತಿದೆ. ಕೇವಲ ರಾಮನಗರಕ್ಕೆ ಮಾತ್ರ ಸೀಮಿತ ಆಗಿಲ್ಲ, ಜಿಲ್ಲೆ ಸೇರ್ಪಡೆ ಮಾಡೋದು ದೊಡ್ಡ ವಿಚಾರವೇ ಅಲ್ಲ ಎಂದು ಹೇಳಿದರು.
ರಾಜಕೀಯವಾಗಿ, ಆಡಳಿತಾತ್ಮಕವಾಗಿ ಹೇಗೆ ಅನುಕೂಲ ಆಗುತ್ತೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಹಣ ತಿನ್ನೋಕೆ ಆಗುತ್ತಾ, ಹಣವನ್ನು ಇಸ್ಕೊಬಹುದು ಅಷ್ಟೇ, ರಾಜಕಾರಣದಲ್ಲಿ ಇರುವವರು ಭ್ರಷ್ಟಾಚಾರದ ಬಗ್ಗೆ ಕಡಿಮೆ ಮಾತಾಡಬೇಕು. ಆ ಬಗ್ಗೆ ಮಾತಾಡುವ ನೈತಿಕತೆ ನಮಗೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಮತ್ತೊಂದು ಕಡೆ ಬಿಜೆಪಿ ಆಪರೇಶನ್ ಕಮಲ ಮಾಡ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಹರಿಪ್ರಸಾದ್, ಜನ ಆಪರೇಶನ್ ಕಮಲ ಮಾಡಿ ಮನೆಗೆ ಕಳಿಸಿದ್ದಾರೆ. ಈಗ ಪಾರ್ಲಿಮೆಂಟ್ ನಲ್ಲಿ ಸಹ ಮನೆಗೆ ಕಳಿಸುತ್ತಾರೆ ಎಂದು ಹೇಳಿದರು. ಸತೀಶ್ ಜಾರಕಿಹೊಳಿ ಟೀಂ ವಿಚಾರವಾಗಿ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಚಿಂತನೆ ಏನಾಗಿದೆ ಅಂದ್ರೆ, ದುಬೈ ರೀತಿ ಅಭಿವೃದ್ದಿ ಹೇಗೆ ಮಾಡಬಹುದು ಅನ್ನೋದನ್ನು ತೋರಿಸಲು ದುಬೈಗೆ ಹೋಗಬಹುದು ಅಷ್ಟೇ, ಶಾಸಕರನ್ನು ದುಬೈಗೆ ಕರೆದುಕೊಂಡು ಹೋದ್ರೆ ಆಶ್ಚರ್ಯ ಏನಿಲ್ಲ, ಅದನ್ನು ಯಾರೂ ತಪ್ಪು ಅರ್ಥ ತಿಳಿದುಕೊಳ್ಳಬಾರದು. ಅವರು ಬೆಳಗಾವಿ ಜಿಲ್ಲೆಯವರನ್ನು ಕರೆದುಕೊಂಡು ಹೋಗಿದ್ದಾರೆ.
ಬೆಳಗಾವಿ ಜಿಲ್ಲೆ ಉಸ್ತುವಾರಿ ಇದ್ದಾರೆ ಅಲ್ಲಿನ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಅಭಿವೃದ್ದಿ ಮಾಡ್ಬೇಕು ಅನ್ನೋದರ ಬಗ್ಗೆ ತೋರಿಸಲು ದುಬೈಗೆ ಹೋಗಬಹುದು. ಮೈಸೂರು ದಸರಾಗೆ ಎಲ್ರೂ ಹೋಗ್ತಾರೆ. ನನಗೂ ಆಹ್ವಾನ ಬಂದಿತ್ತು, ಎಲ್ಲದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ, 135 ಶಾಸಕರು ಗೆದ್ದಿದ್ದಾರೆ ಅಲ್ವಾ ಎಲ್ಲರಿಗೂ ಅವರ ಶಕ್ತಿ ಇರುತ್ತೆ. ಅವರಿಗೆ ಸಿಎಂ, ಸಚಿವರಾಗುವ ಶಕ್ತಿ ಇರುತ್ತೆ ಎಂದರು.












Click it and Unblock the Notifications