ಅಬ್ಬಬ್ಬಾ.. ಕರ್ನಾಟಕಕ್ಕೆ ಬರಲು 'ಇಷ್ಟೊಂದು' ಜನ ನೋಂದಣಿ ಮಾಡಿಸಿದ್ದಾರಾ?
ಕರ್ನಾಟಕ, ಮೇ 9: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಏಕಾಏಕಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ ಪರಿಣಾಮ ಸಾವಿರಾರು ಕನ್ನಡಿಗರು ಹೊರ ರಾಜ್ಯಗಳಲ್ಲಿ ಸಿಲುಕುವಂತಾಯಿತು.
ಕೆಲಸವೂ ಸೇರಿದಂತೆ ಇನ್ನಿತರ ಕಾರಣಗಳಿಗೆ ಹೊರ ರಾಜ್ಯಗಳಿಗೆ ತೆರಳಿದ್ದ ಕನ್ನಡಿಗರು ಲಾಕ್ ಡೌನ್ ನಿಂದಾಗಿ ಸಂಕಷ್ಟದಿಂದ ಒದ್ದಾಡುತ್ತಿದ್ದಾರೆ. ಇದೀಗ ಲಾಕ್ ಡೌನ್ ನಿಯಮಗಳು ಕೊಂಚ ಸಡಿಲಗೊಂಡಿದ್ದು, ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಪ್ರಕ್ರಿಯೆ ಆರಂಭಗೊಂಡಿದೆ.
ಹೀಗಾಗಿ, ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರು ಕೂಡ ಕರ್ನಾಟಕಕ್ಕೆ ಬರಲು ಆಯಾ ಜಿಲ್ಲೆಗಳ ಡಿ.ಸಿ ಮತ್ತು ರಾಜ್ಯದ ನೊಡಲ್ ಅಧಿಕಾರಿಗಳ ಬಳಿ ನೋಂದಾಯಿಸಿಕೊಂಡಿದ್ದಾರೆ. ಹಾಗೆ, ನೋಂದಣಿ ಮಾಡಿಸಿರುವವರು ಎಷ್ಟು ಮಂದಿ ಗೊತ್ತೇ.?

ಕರ್ನಾಟಕಕ್ಕೆ ಬರಲು ಎಷ್ಟು ಮಂದಿ ನೋಂದಾಯಿಸಿಕೊಂಡಿದ್ದಾರೆ ಗೊತ್ತೇ?
ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳಿದವರು, ಪ್ರವಾಸಿಗರು ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ವಿವಿಧ ರಾಜ್ಯಗಳಿಗೆ ತೆರಳಿದ್ದ ಕನ್ನಡಿಗರು ಇದೀಗ ಕರ್ನಾಟಕಕ್ಕೆ ವಾಪಸ್ ಆಗಲು ನೋಂದಣಿ ಮಾಡಿಸಿದ್ದಾರೆ. ಅಂದ್ಹಾಗೆ, ರಾಜ್ಯಕ್ಕೆ ಬರಲು ಎಷ್ಟು ಜನ ನೋಂದಾಯಿಸಿದ್ದಾರೆ ಗೊತ್ತಾ.? ಬರೋಬ್ಬರಿ 56,622 ಜನ!

ಎಷ್ಟು ಜನರಿಗೆ ಅನುಮತಿ ಸಿಕ್ಕಿದೆ ಗೊತ್ತೇ.?
ನೋಂದಣಿ ಮಾಡಿಸಿಕೊಂಡ 56,622 ಜನರ ಪೈಕಿ 4,068 ಜನರಿಗೆ ಮಾತ್ರ ರಾಜ್ಯಕ್ಕೆ ಬರಲು ಅನುಮತಿ ನೀಡಲಾಗಿದೆ. ಡಿ.ಸಿ/ನೊಡಲ್ ಅಧಿಕಾರಿಗಳ ಅನುಮತಿಗಾಗಿ ಇನ್ನೂ 52,075 ಅರ್ಜಿಗಳು ಕಾಯುತ್ತಿವೆ.

ಅನುಮತಿಗಾಗಿ ಜನ ಕಾಯುತ್ತಿದ್ದಾರೆ
ಡಿ.ಸಿಗಳ ಬಳಿ 45,326 ಅರ್ಜಿಗಳು ಅನುಮತಿಗಾಗಿ ಬಾಕಿ ಇವೆ. ನೊಡಲ್ ಅಧಿಕಾರಿಗಳ ಬಳಿ 6,749 ಅರ್ಜಿಗಳು ಪರ್ಮಿಷನ್ ಗೆ ಕಾಯುತ್ತಿವೆ. ಇವುಗಳ ಪೈಕಿ ಅದೆಷ್ಟು ಅರ್ಜಿಗಳು ಸ್ವೀಕೃತವಾಗುತ್ತವೋ.? ಎಂಬುದೇ ಸದ್ಯದ ಪ್ರಶ್ನೆ.

ಬೆಂಗಳೂರಿಗೆ ಬರುವವರ ಸಂಖ್ಯೆಯೇ ಅಧಿಕ
ನೋಂದಣಿ ಮಾಡಿಸಿಕೊಂಡಿರುವ ಒಟ್ಟು 56,622 ಜನರಲ್ಲಿ ಬೆಂಗಳೂರಿಗೆ ಬರುವವರ ಸಂಖ್ಯೆಯೇ ಅಧಿಕವಾಗಿದೆ ಎಂಬುದು ಗಮನಿಸಬೇಕಾದ ವಿಚಾರ. ಅಂದ್ಹಾಗೆ, ಬೆಂಗಳೂರಿಗೆ ಬರಲು ಅರ್ಜಿ ಹಾಕಿರುವವರ ಸಂಖ್ಯೆ ಎಷ್ಟು ಗೊತ್ತೇ.? ಬರೋಬ್ಬರಿ 25,737 ಜನ.!
-
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ












Click it and Unblock the Notifications