ಕರ್ನಾಟಕದ 3ನೇ ಬೃಹತ್ ಕೆರೆಯ ಸುತ್ತ ಮುತ್ತ ಬೆಳೆಯಲಿವೆ 2 ಲಕ್ಷ ಗಿಡಗಳು
ಬೆಂಗಳೂರು, ಜುಲೈ 26: ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಇನ್ನಿತರ ಎಲ್ಲ ತರಹದ ಬೇಸಾಯ ವಿಜಯಪುರದಲ್ಲೂ ಆಗಬೇಕಿದೆ. ಈ ಸಂಬಂಧ ಕರ್ನಾಟಕ ರಾಜ್ಯದಲ್ಲೇ 3ನೇ ಅತೀ ದೊಡ್ಡ ಕೆರೆ ಎಂದೇ ಹೆಸರಾಗಿರುವ ಮಮದಾಪುರ ಕೆರೆ (Mamadapur Lake) ವ್ಯಾಪ್ತಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಕೆಲ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಕೆರೆ, ಗಿಡ ಬೆಳೆಸುವ ಕಾರ್ಯಗಳ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕೃಷಿ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಈ ಸಂಬಂಧ ರಾಜ್ಯದ ಮೂರನೇ ಅತೀ ದೊಡ್ಡ ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸದ್ಯಕ್ಕೆ ಸುಮಾರು 56,000 ಗಿಡಗಳು ನೆಡುವ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಹಂತ ಹಂತವಾಗಿ 2ಲಕ್ಷ ಗಿಡಗಳನ್ನು ಬೆಳೆಸುವ ಕಾರ್ಯ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ವಿಜಯಪುರ (ಬಿಜಾಪುರ) ಜಿಲ್ಲೆ ಆಳಿದ್ದ ಅದಿಲ್ ಶಾಹಿ ಅರಸರಿಗೆ ಮಲೆನಾಡಿನ ವೈಭವನ್ನು ತರುವ ಕನಸಿತ್ತು. ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಎಲ್ಲ ಬಗೆಯ ಬೇಸಾಯ ಬಿಜಾಪುರದಲ್ಲೂ ಆಗಬೇಕೆಂದು ಅವರ ಆದಾಗಲೇ ಬಯಸಿದ್ದರು. ಇಂದಿನ ಮಮದಾಪುರ ಕೆರೆಯ ಜಾಗವನ್ನು ಗುರುತಿಸಿ ಅಲ್ಲಿದ್ದ 7 ಹಳ್ಳಿಗಳ ಜನರಿಗೆ ಪುನರ್ವಸತಿ ಕಲ್ಪಿಸಿ ಬೃಹತ್ ಕೆರೆಯನ್ನು ನಿರ್ಮಾಣ ಮಾಡಿದ್ದರು.
ರಾಜ್ಯದಲ್ಲೇ 3ನೇ ಅತಿ ದೊಡ್ಡ ಕೆರೆ ಎಂದೇ ಹೆಸರಾಗಿರುವ #ಮಮದಾಪುರಕೆರೆ ವ್ಯಾಪ್ತಿಯಲ್ಲಿ ಸುಮಾರು 56,000 ಗಿಡಗಳು ಅರಳುತ್ತಿವೆ. ಹಂತ ಹಂತವಾಗಿ 2ಲಕ್ಷ ಗಿಡಗಳನ್ನು ಬೆಳೆಸುವ ಗುರಿನಮ್ಮದು.
— M B Patil (@MBPatil) July 25, 2023
ಬಿಜಾಪುರವನ್ನು ಆಳಿದ ಅದಿಲ್ ಶಾಹಿ ಅರಸರಿಗೆ ಮಲೆನಾಡಿನ ವೈಭವನ್ನು ತರುವ ಕನಸಿತ್ತು. ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಎಲ್ಲ ಬಗೆಯ ಬೇಸಾಯ… pic.twitter.com/HbHf0ZcEEW
ಮಮದಾಪುರ ಕೆರೆಯ ಇತಿಹಾಸ
ಜಿಲ್ಲೆಯನ್ನು ಜಲಸಂಪನ್ನವಾಗಿಸಿ ಹಸಿರು ವಿಜಯಪುರ ಅಂದು ಅವರು ಕಟ್ಟಿದರು. ಕೆರೆ ಅಚ್ಚುಕಟ್ಟು ಪ್ರದೇಶದ ಕೆಳಭಾಗದಲ್ಲಿ ಬಾಸುಮತಿ ಅಕ್ಕಿ ಸಹಿತ ಎಲ್ಲ ಬೆಳೆಗಳನ್ನು ಬೆಳೆಯಲು ಅನುಕೂಲ ಕಲ್ಪಿಸಿ ಸಸ್ಯಶಾಮಲೆಯಿಂದ ಕಂಗೊಳಿಸುವಂತೆ ಮಾಡಿದ್ದು ಇತಿಹಾಸವಾಗಿದೆ.

ಕಾಲಾಂತರದಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿ ಹೋಯಿತು. ಜಾಲಿಗಿಡಗಳು ಬೆಳೆದು ನಿಂತವು. ಜಲಸಂಪನ್ಮೂಲ ಇಲಾಖೆ ಸಚಿವನಾದ ನಂತರ ಈ ಕೆರೆಗೆ ಕಾಯಕಲ್ಪ ನೀಡುವ ಕಾರ್ಯ ಆರಂಭವಾಯಿತು ಎಂದು ಹಿಂದಿನಿಂದ ಕೆರೆ, ಕೃಷಿ ಕುರಿತು ನಡೆದು ಬಂದ ಹಾದಿ ಅವರು ವಿವರಿಸಿದರು.
ಕೃಷ್ಣಾ ನದಿ ನೀರು ಹರಿಸಲಾಗುವುದು
ಅದಿಲ್ ಶಾಹಿ ಅರಸರಕಾಲದ ಗತ ವೈಭವವನ್ನು ಮತ್ತೆ ತರಬೇಕೆಂಬ ಕನಸು ಹೊತ್ತು, ಕೆರೆಯ ಹೂಳು ತೆಗೆಸಿ, ಕೃಷ್ಣಾನದಿ ನೀರಿನಿಂದ ನೀರು ಹರಿಸುವ ಕಾರ್ಯ ಮಾಡಲಾಗಿದೆ. ಕೆರೆ ಸುತ್ತಲಿನ ಸುಮಾರು 1,560 ಎಕರೆ (624 ಹೆಕ್ಟೇರ್) ಪ್ರದೇಶದಲ್ಲಿ ರಾಜ್ಯಕ್ಕೆ ಮಾದರಿ ಎನಿಸುವ ಅರಣ್ಯ ನಿರ್ಮಿಸುವ ಯೋಜನೆ ಅನುಷ್ಠಾನಗೊಳಿಸಿದೆ. ನಮ್ಮೆಲ್ಲ ಜನತೆಯ ಸಹಕಾರದಿಂದಾಗಿ ಇಲ್ಲಿ ಅರಣ್ಯ ಅರಳುತ್ತಿದೆ ಎಂದು ಅವರು ತಿಳಿಸಿದರು.
ಮಮದಾಪುರ ಕೆರೆಯಲ್ಲಿನ ಅರಣ್ಯ ನಿರ್ಮಾಣದಿಂದ ಭವಿಷ್ಯದಲ್ಲಿ ಅಕ್ಕಿ ಬೆಳೆ ಬೆಳೆಯುವುದರ ಜೊತೆಗೆ ಇನ್ನಿತರ ಕೃಷಿ ಚಟುವಟಿಕೆಗಳಿಗೂ, ಜಿಲ್ಲೆಯನ್ನು ಹಸಿರಾಗಿಸಲು ಸಹ ಪೂರಕ ವಾತಾವರಣ ನಿರ್ಮಿಸಿದಂತಾಗುತ್ತದೆ.
ಭರದಿಂದ ಸಾಗಿದ ಗಿಡ ನೆಡುವ ಕಾರ್ಯ
ಸಚಿವರ ಟ್ವೀಟ್ ಪೋಸ್ಟ್ನಲ್ಲಿ ವಿಶಾಲವಾದ ನೀರಿಲ್ಲದ ಕೆರೆಯಲ್ಲಿ ಟ್ಯಾಂಕರ್ಗಳ ಸಹಾಯದಿಂದ ಸಾವಿರಾರು ಗಿಡಗಳನ್ನು ನೆಡುತ್ತಿರುವ ಕೆಲಸ ನಡೆಯುತ್ತಿದೆ. ಹತ್ತಾರು ಕಾರ್ಮಿಕ ಕೆರೆಯ ಜಾಗದಲ್ಲಿ ಮೊದಲ ಹಂತವೆಂಬಂತೆ 56 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ರಸ್ತೆ ಕಾಮಗಾರಿ, ನಗರೀಕರಣ ಹೆಸರಿನಲ್ಲಿ ಹಿಂದಿನಿಂದಲೇ ಸಾವಿರಾರು ಬೆಳೆದು ನಿಂತ ಮರಗಳನ್ನು ಕಡೆದು ಹಾಕಲಾಗಿದೆ. ಇಂತಹ ವಾತಾವರಣದ ಮಧ್ಯೆ ಸಚಿವರ ಈ ಗಿಡ ನೆಡುವ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications