'ಅಹಿಂದದಿಂದ ಗೆದ್ದು ಬಂದ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ದ್ರೋಹ'
ಕಲಬುರಗಿ, ಡಿಸೆಂಬರ್ 12: ಅಹಿಂದದಿಂದ ಗೆದ್ದು ಬಂದ ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಮಹಾನ್ ದ್ರೋಹ ಬಗೆದಿದ್ದಾರೆ ಎಂದು ಕೋಲಾರ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರ್ ಪ್ರಕಾಶ್, ಓಟ್ ಬ್ಯಾಂಕ್ ಗಾಗಿ ಅಹಿಂದ ಮರೆತು ಮೇಲ್ವರ್ಗದ ಓಲೈಕೆಯಲ್ಲಿದ್ದಾರೆ. ಅಹಿಂದ ವರ್ಗದ ನಾಯಕರನ್ನು ರಾಜಕೀಯವಾಗಿ ದಮನ ಮಾಡಲು ಸಿಎಂ ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

13 ಜನ ಕುರುಬ ಶಾಸಕರಿದ್ದರೂ ಮಂತ್ರಿ ಮಂಡಲದಲ್ಲಿ ಪ್ರಾಧಾನ್ಯತೆ ನೀಡಿಲ್ಲ. ಕುರುಬ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ಕೊಡುಗೆ ಶೂನ್ಯ ಎಂದು ಕುಟುಕಿದರು. ಕಾಂಗ್ರೆಸ್ ಗೆ ಪರ್ಯಾಯವಾಗಿ ಡಿಸೆಂಬರ್ 27 ರಂದು ಕೂಡಲಸಂಗಮದಲ್ಲಿ 'ನಮ್ಮ ಕಾಂಗ್ರೆಸ್' ನೂತನ ಪಕ್ಷ ಉದಯವಾಗಲಿದೆ ಎಂದು ಹೇಳಿದರು.












Click it and Unblock the Notifications