ಯಡಿಯೂರಪ್ಪನವರು ಆರ್ ಎಸ್ಎಸ್ ಕೈಗೊಂಬೆ: ಬಿ.ಆರ್. ಪಾಟೀಲ್
Recommended Video
ಗುಲ್ಬರ್ಗಾ ಮೇ 08: ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದಾಗ ಪ್ರಗತಿಪರರು ಮೂವತ್ತು ಜನ ಅವರ ಮನೆಯಲ್ಲಿದ್ದೆವು. ಅಂದು ಆಳಂದ ಮತ್ತು ಕಲಬುರಗಿಯಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪನವರು ನಾನು ಬಿಜೆಪಿ ಸೇರುವುದಿಲ್ಲ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದರು.
ಆದರೆ ಇಂದು ಅದೇ ಬಿಜೆಪಿ ಪಕ್ಷಕ್ಕೆ ತನ್ನ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಆಳಂದ ಶಾಸಕರಾದ ಬಿ.ಆರ್. ಪಾಟೀಲ್ ಟೀಕಿಸಿದರು. ಇಂದು ಮಂಗಳವಾರ ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಪರಿಚಯ: ಪ್ರಿಯಾಂಕ್ ಖರ್ಗೆಗೆ ಮತ್ತೆ ಒಲಿಯುವುದೇ ಚಿತ್ತಾಪುರ?
ಯಡಿಯೂರಪ್ಪನವರು ಕೆಜಿಪಿ ಸೇರಿದ್ದ ಮುಖಂಡರನ್ನು ಮೂಲೆ ಗುಂಪು ಮಾಡಿದ್ದಾರೆ. ಆಳಂದ ಮತ್ತು ಅಫಜಲಪೂರದಲ್ಲಿ ಲಿಕ್ಕರ್ ಮಾಫಿಯಾದವರಿಗೆ ಟಿಕೇಟ್ ಕೊಟ್ಟಿದ್ದಾರೆ. ಇದೇನಾ ಬಿಜೆಪಿ ಸಂಸ್ಕೃತಿ. ಯಡಿಯೂರಪ್ಪನವರಿಗೆ ಬುದ್ಧಿ ಭ್ರಮಣೆಯಾಗಿದೆ.
ಅವರು ಆರ್ಎಸ್ಎಸ್ ಮತ್ತು ಬಿಜೆಪಿ ಕೈಗೊಂಬೆಯಾಗಿದ್ದಾರೆ. ಇವರಿಗೆ ಹೊರಗೆ ಸಿದ್ದರಾಮಯ್ಯನವರ ಗುದ್ದು, ಒಳಗೆ ಆರ್ಎಸ್ಎಸ್ ನವರ ಗುದ್ದು ಹೆಚ್ಚಾಗಿದೆ. ಯಡಿಯೂರಪ್ಪನವರು ಆಳಂದದಲ್ಲಿ ನನ್ನ ವಿರುದ್ದ ಅವರ ಅಪ್ಪ ಮತ್ತೆ ಮಸಣದಿಂದ ಎದ್ದು ಬಂದರು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಕಿಡಿಕಾರಿದರು.