Get Updates
Get notified of breaking news, exclusive insights, and must-see stories!

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರು

ಜೈಪುರ, ಏಪ್ರಿಲ್.14: ವಿಶ್ವದ ಉದ್ದಗಲಕ್ಕೂ ವ್ಯಾಪಿಸಿದ ಕೊರೊನಾ ವೈರಸ್ ಮಹಾಮಾರಿ ಭಾರತದ ಪಾಲಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾರಕ ಸೋಂಕು ಜನರಲ್ಲಿ ಮಾನವೀಯತೆ ಮತ್ತು ಸಹಾಯ, ಸಹಕಾರ ಮನೋಭಾವವನ್ನು ಹೆಚ್ಚಿಸುತ್ತದೆ. ಈ ಮಾತಿಗೆ ಸಾಕ್ಷಿ ಎನ್ನುವಂತಾ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

Recommended Video

      ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

      ರಾಜಸ್ಥಾನದ ಜೈಪುರ್ ನಲ್ಲಿ ಕ್ಯಾನ್ಸರ್ ನಿಂದ ಪ್ರಾಣ ಬಿಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮನೆಯ ಸುತ್ತಮುತ್ತಲಿದ್ದ ಮುಸ್ಲಿಂ ಬಾಂಧವರು ಮುಂದೆ ನಿಂತು ನೆರವೇರಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.

      ಜೈಪುರ್ ನ ಭಜರಂಗ್ ನಗರ್ ಭಟ್ಟಾ ಬಸ್ತಿ ಪ್ರದೇಶದಲ್ಲಿ ವಾಸವಾಗಿದ್ದ ರಾಜೇಂದ್ರ ಎಂಬುವವರು ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಸೋಮವಾರ ಈ ವ್ಯಕ್ತಿ ಮೃತಪಟ್ಟಿದ್ದು ನೆರೆಹೊರೆಯಲ್ಲಿದ್ದ ಮುಸ್ಲಿಂ ಬಾಂಧವರೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

      Muslim Neighbours Help To Last Rights For Hindu Man During Lockdown In Rajastan

      ಗಂಡು ದಿಕ್ಕಿಲ್ಲದ ಮನೆಗೆ ನೆರೆಹೊರೆಯವರ ಹೆಗಲು:

      ಗಂಡು ಮಕ್ಕಳು ಇಲ್ಲದ ಮೃತ ರಾಜೇಂದ್ರ ನಿವಾಸದ ಸುತ್ತಮುತ್ತಲಿನಲ್ಲೂ ಯಾರೊಬ್ಬ ಹಿಂದೂಗಳೂ ಇರಲಿಲ್ಲ. ಭಾರತ ಲಾಕ್ ಡೌನ್ ನಿಂದ ಸಂಬಂಧಿಕರು ಕೂಡಾ ಜೈಪುರ್ ಗೆ ತೆರಳಲು ಆಗುತ್ತಿರಲಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರೆಹೊರೆಯಲ್ಲಿದ್ದ ಮುಸ್ಲಿಂ ಬಾಂಧವರೇ ಸೇರಿಕೊಂಡು ಹಿಂದೂ ಧರ್ಮದ ಪ್ರಕಾರ ರಾಜೇಂದ್ರ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಬಡ ಕುಟುಂಬಕ್ಕೆ ಹೆಗಲು ಕೊಟ್ಟು ನಿಂತಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+