ಬ್ರಿಟನ್ ಮಾಜಿ ಪ್ರಧಾನಿ ಬೆಂಗಳೂರು ಕ್ಲಬ್ ಗೆ ಬಾಕಿ ಕಟ್ಬೇಕು!
ಲಂಡನ್, ಏ. 1 : ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಬಾಕಿ ಇಟ್ಟುಕೊಳ್ಳೂವುದು ಸರ್ವೇ ಸಾಮಾನ್ಯ. ಸಚಿವರ, ಮಾಜಿ ಸಚಿವರ ಮನೆಯ ವಿದ್ಯುತ್ ಬಿಲ್ ಬಾಕಿ ಇದೆ ಎಂಬ ವರದಿಗಳು ಬಂದಿದ್ದನ್ನು ನೋಡಿದ್ದೇವೆ. ಆದರೆ ಈಗ ಹೇಳ ಹೊರಟಿರುವುದು ಬ್ರಿಟನ್ ಮಾಜಿ ಪ್ರಧಾನಿ ಬಾಕಿ ಇಟ್ಟುಕೊಂಡಿರುವ ಕತೆ.
ಬ್ರಿಟನ್ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಬೆಂಗಳೂರು ಸಿಟಿ ಕ್ಲಬ್ ಗೆ ಬಾಕಿ ಕೊಡಬೇಕಿದೆ, ಅದು ಬರೋಬ್ಬರಿ 13 ರೂಪಾಯಿ! ಬೆಂಗಳೂರು ಸಿಟಿ ಕ್ಲಬ್ ಗೆ ಬಾಕಿ ಹಣ ನೀಡಬೇಕಾದವರ ಪಟ್ಟಿಯಲ್ಲಿ ಚರ್ಚಿಲ್ ಹೆಸರು ಇದೆ ಎಂದು ಬಿಬಿಸಿ ವರದಿಯಲ್ಲಿ ತಿಳಿಸಿದೆ. ಯುದ್ಧದ ಕಾರಣಕ್ಕೆ ಬೇರೆಡೆ ತೆರಳುವ ಮುನ್ನ ಚರ್ಚಿಲ್ ಬೆಂಗಳೂರು ಕ್ಲಬ್ ನಲ್ಲಿ ವಾಸ್ತವ್ಯ ಹೂಡಿದ್ದರು.[ಭಾರತ-ಪಾಕ್ ಮಧ್ಯೆ ಗಡಿ ರೇಖೆ ಎಳೆದವರು ಯಾರು?]

ಕ್ಲಬ್ ಬಿಡುಗಡೆ ಮಾಡಿರುವ 17 ಜನ ಬಾಕಿದಾರ ಪಟ್ಟಿಯಲ್ಲಿ ಚರ್ಚಿಲ್ ಹೆಸರು ಇದೆ. 1899 ರಲ್ಲಿ ಚರ್ಚಿಲ್ ಕ್ಲಬ್ ಗೆ ಭೇಟಿ ನೀಡಿದ್ದ ಬಗ್ಗೆ ದಾಖಲೆಯಿದೆ. 1896 ರಲ್ಲಿ ಚರ್ಚಿಲ್ ಒಬ್ಬ ಸೇನಾಧಿಕಾರಿಯಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮೂರು ವರ್ಚ ಕಾಲ ಬ್ರಿಟಿಷ್ ಸೈನ್ಯದೊಂದಿಗಿದ್ದ ಅವರು ನಂತರ ಇಂಗ್ಲೆಂಡ್ ಗೆ ಹಿಂದಿರುಗಿದ್ದರು.[ನೇತಾಜಿ, ನೆಹರೂ ನಂಬಿಕಸ್ತ ನಂಬಿಯಾರ್ 'ಸ್ಪೈ']
ಬೆಂಗಳೂರು ಸಿಟಿ ಕ್ಲಬ್ ನ್ನು 1868 ರಲ್ಲಿ ಬ್ರಿಟಿಷ್ ಅಧಿಕಾರಿಗಳ ಗುಂಪೊಂದು ಆರಂಭ ಮಾಡಿತ್ತು. ಭಾರತದಲ್ಲೇ ಈಗ ಇದೊಂದು ಪ್ರತಿಷ್ಠಿತ ಕ್ಲಬ್ ಆಗಿ ಬೆಳೆದಿದೆ. ಹಿಂದೆ ಸಹ ಚರ್ಚಿಲ್ ಬೆಂಗಳೂರಿ ಕ್ಲಬ್ ಗೆ ಹಣ ನೀಡಬೇಕು ಎಂದು ವರದಿಯಾಗಿತ್ತು. ಆದರೆ ಕೇವಲ 13 ರೂ. ಬಾಕಿ ಕಟ್ಟಲು ಬ್ರಿಟಿಷ್ ಸರ್ಕಾರ ಬೆಂಗಳೂರು ಕ್ಲಬ್ ನ್ನು ಸಂಪರ್ಕಿಸುವುದೇ?
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications