ಮಾಧ್ಯಮ ಲೋಕದಲ್ಲಿ ತಲ್ಲಣ, ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಸಂಸ್ಥೆಯಿಂದ 300 ಉದ್ಯೋಗ ಕಡಿತ | Washington Post
ಮಾಧ್ಯಮ ಲೋಕದಲ್ಲಿ ಮತ್ತೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ, ಅದರಲ್ಲೂ ಇಡೀ ಜಗತ್ತಿನಲ್ಲೇ ದೊಡ್ಡ ಮಟ್ಟಿಗೆ ಹೆಸರು ಮಾಡಿರುವ ದೈತ್ಯ ಮಾಧ್ಯಮ ಸಂಸ್ಥೆಗಳೇ ಇದೀಗ ಉದ್ಯೋಗ ಕಡಿತ ಮಾಡುತ್ತಿವೆ. ಈ ಪೈಕಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಒಡೆತನದ, ದಿ ವಾಷಿಂಗ್ಟನ್ ಪೋಸ್ಟ್ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿ ಆದೇಶ ಹೊರಡಿಸಿದೆ. ಸುಮಾರು 800 ಪತ್ರಕರ್ತರ ಪೈಕಿ ದಿಢೀರ್ 300ಕ್ಕೂ ಹೆಚ್ಚು ಜನರನ್ನು ನ್ಯೂಸ್ ರೂಂ ಅಂಗಳದಿಂದ ಹೊರಹಾಕಿ ತಲ್ಲಣ ಸೃಷ್ಟಿ ಮಾಡಿದೆ. ಈ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು ಅಮೆರಿಕ ಮಾಧ್ಯಮ ಲೋಕದ ಉದ್ಯೋಗಿಗಳ ಸಂಕಷ್ಟ ಜಗತ್ತಿನ ಎದುರು ತೆರೆದುಕೊಳ್ಳುತ್ತಿದೆ.
ಅಮೆರಿಕದ ಪ್ರಬಲ ಸುದ್ದಿ ಪತ್ರಿಕೆಗಳಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಕೂಡ ಒಂದಾಗಿದ್ದು, ದೊಡ್ಡ ಇತಿಹಾಸ ಕೂಡ ಹೊಂದಿದೆ. ಅಮೆರಿಕದ ಪ್ರಮುಖ ರಾಜಕೀಯ ಏಳುಬೀಳುಗಳ ಜೊತೆಗೆ ಇದೇ ದಿ ವಾಷಿಂಗ್ಟನ್ ಪೋಸ್ಟ್ ಬೆಳೆದು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟ ಕೂಡ ಈ ಸಂಸ್ಥೆಯನ್ನ ಕಾಡುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ಇಲ್ಲ, ಹೀಗಿದ್ದಾಗ ಸಂಸ್ಥೆ ಉದ್ಯೋಗ ಕಡಿತದ ಬಗ್ಗೆ ಬೇರೆಯದ್ದೇ ವಿಚಾರವನ್ನು ಹೇಳುತ್ತಿದೆ. ಆಧುನಿಕ ಓದುಗರಿಗೆ ತೆರೆದುಕೊಳ್ಳಲು ಹೊಸ ಆಯಾಮ ಅಗತ್ಯತೆ ಬಗ್ಗೆ ಪ್ರಸ್ತಾಪಿಸಿ, ಹೊಸತನಕ್ಕಾಗಿ ಈ ನಿರ್ಧಾರ ಎನ್ನುತ್ತಿದೆ. ಅದರಲ್ಲೂ ಎಐ ಅಂದ್ರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಂದ ನಂತರ ಉದ್ಯೋಗ ನಷ್ಟದ ಭೀತಿ ಹೆಚ್ಚಾಗುತ್ತಲೇ ಸಾಗಿದೆ.

ಸಂಸದ ಶಶಿ ತರೂರ್ ಪುತ್ರನಿಗೂ ಶಾಕ್
ದಿ ವಾಷಿಂಗ್ಟನ್ ಪೋಸ್ಟ್ ಇದೀಗ ವಜಾ ಮಾಡಿರುವ ಸುಮಾರು 300 ಉದ್ಯೋಗಿಗಳ ಪೈಕಿ, ಸಂಸದ ಶಶಿ ತರೂರ್ ಪುತ್ರ ಇಶಾನ್ ತರೂರ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ಸಾಮೂಹಿಕ ಉದ್ಯೋಗ ಕಡಿತದ ವೇಳೆ ವಜಾ ಆಗಿರುವ ವಿಚಾರವನ್ನು ಸ್ವತಃ ಇಶಾನ್ ತರೂರ್ ತಿಳಿಸಿದ್ದಾರೆ. ಅಲ್ಲದೆ ಈ ಸಮಯದಲ್ಲಿ ತಮ್ಮ ಸಹೋದ್ಯೋಗಿಗಳ ಸಂಕಷ್ಟ ಹಾಗೂ ಕೆಲಸ ಮಾಡುತ್ತಿದ್ದ ಜಾಗವನ್ನು ಹೀಗೆ ದಿಢೀರ್ ಬಿಟ್ಟು ಹೊರಡುವ ಅನಿವಾರ್ಯತೆ ಕುರಿತು ಕೂಡ ಅವರು ನೋವು ತೋಡಿಕೊಂಡಿದ್ದಾರೆ.
ಬೇಸರ ಹೊರ ಹಾಕಿದ ಇಶಾನ್ ತರೂರ್
ಸಂಸದ ಶಶಿ ತರೂರ್ ಪುತ್ರ ಇಶಾನ್ ತರೂರ್ ತಮ್ಮ ಎಕ್ಸ್ ಪೋಸ್ಟ್ ಮೂಲಕ ಈ ಸುದ್ದಿಯನ್ನು ಇಡೀ ಜಗತ್ತಿಗೆ ತಿಳಿಸಿದ್ದಾರೆ. ನ್ಯೂಸ್ ರೂಂ ಎಂದರೆ ಸುದ್ದಿ ಸಂಸ್ಥೆ ಕಚೇರಿ ಫೋಟೋ ಒಂದನ್ನ ಶೇರ್ ಮಾಡಿಕೊಂಡು, ಒಂದು ಕೆಟ್ಟ ದಿನ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಕುರಿತು, ಸಂಪೂರ್ಣ ವಿವರಣೆ ನೀಡಿರುವ ಅವರು ತಾವು ಹಾಗೂ ತಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರ ವಜಾ ಬಗ್ಗೆ ವಿವರಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications