Ukraine President: ರಷ್ಯಾಗೆ ತೆರಳಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಿರಾಕರಣೆ ಸಾಧ್ಯತೆ, ಕಾರಣ ಇಲ್ಲಿದೆ
ರಷ್ಯಾ ಇದೀಗ ಯುದ್ಧ ನಿಲ್ಲಿಸಲು ಮನಸ್ಸು ಮಾಡಿದ್ದು, ತನ್ನ ಶತ್ರು ಉಕ್ರೇನ್ ಜೊತೆಗೆ ಮಾತುಕತೆ ಮೂಲಕ ಎಲ್ಲಾ ಬಗೆಹರಿಸಲು ಮುಂದಾಗಿದೆ. ಅದರಲ್ಲೂ ಕಳೆದ 4 ವರ್ಷಗಳಿಂದ ಬಡಿದಾಡುತ್ತಿರುವ ಇದೇ ರಷ್ಯಾ ಮತ್ತು ಉಕ್ರೇನ್ ಈಗಲಾದರೂ ನೆಮ್ಮದಿಯಾಗಿ ಇರಬೇಕು ಅಂತಾ ನಿರ್ಧಾರ ಮಾಡಿರುವ ರೀತಿ ಕಾಣುತ್ತಿದೆ. ಹೀಗಾಗಿಯೇ ನೇರವಾಗಿ ಉಕ್ರೇನ್ ಅಧ್ಯಕ್ಷರನ್ನೇ ಮಾಸ್ಕೋಗೆ ಕರೆಸಿ, ಮಾತುಕತೆಯ ಮೂಲಕ ಎಲ್ಲ ಬಗೆಹರಿಸಲು ರಷ್ಯಾ ನಿರ್ಧಾರ ಮಾಡಿತ್ತು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಕಾರಣಕ್ಕೆ ವಿಶೇಷ ಆಹ್ವಾನ ಕೂಡ ಪಡೆದಿದ್ದರು. ಆದರೆ ಇದೀಗ ಬೇರೆಯದ್ದೇ ಆಟ ಶುರುವಾಗಿದ್ದು, ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾಗೆ ಹೋಗುವುದೇ ಅನುಮಾನವಾಗಿದೆ.
ಉಕ್ರೇನ್ ಮತ್ತು ರಷ್ಯಾ ಆಜನ್ಮ ವೈರಿಗಳ ರೀತಿ ಕಿತ್ತಾಡುತ್ತಿದ್ದರೂ, 3 ದಶಕಗಳ ಹಿಂದೆ ಇದೇ ಉಕ್ರೇನ್ ರಷ್ಯಾ ಭಾಗವಾಗಿತ್ತು. ಆದರೆ ಎಲ್ಲಾ ಈಗ ಹಾಳಾಗಿ ಹೋಗಿದ್ದು, ಎರಡೂ ದೇಶಗಳು ಬಡಿದಾಡುತ್ತಿವೆ. ಹೀಗಿದ್ದಾಗ ಜಗತ್ತಿನ ಶಾಂತಿಗೆ ಭಂಗ ಬಂದಿದ್ದು, ಹೇಗಾದರೂ ಮಾಡಿ ಈ ಇಬ್ಬರ ನಡುವೆ ಮಾತುಕತೆ ಮಾಡಿಸಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಟ್ರಂಪ್ ಅವರ ಆಸೆಯಾಗಿತ್ತು. ಆದರೆ ಎಲ್ಲಾ ಆಸೆಗಳು ಕೈಕೊಟ್ಟ ಸಮಯದಲ್ಲಿ, ನೇರವಾಗಿ ರಷ್ಯಾ ಬಂದು ಉಕ್ರೇನ್ ಜೊತೆಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಲು ನಿರ್ಧರಿಸಿತ್ತು. ಆದರೆ ದಿಢೀರ್ ಅಲ್ಲೋಲ ಕಲ್ಲೋಲ ಶುರುವಾಗಿದ್ದು, ಉಕ್ರೇನ್ ಅಧ್ಯಕ್ಷ ರಷ್ಯಾಗೆ ಹೋಗುವುದೇ ಅನುಮಾನವಾಗಿದೆ. ಇದಕ್ಕೆ ಬಲವಾದ ಕಾರಣ ಕೂಡ ಇದೆ.

ಭದ್ರತೆ ಕಾರಣಕ್ಕೆ ಝೆಲೆನ್ಸ್ಕಿ ಹೋಗೋದು ಡೌಟ್?
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಇದೀಗ ಕಾಡುತ್ತಿರುವ ಪ್ರಮುಖ ಭಯ ಏನೆಂದರೆ, ರಷ್ಯಾ ರಾಜಧಾನಿ ಮಾಸ್ಕೋಗೆ ಹೋದರೆ ಎಲ್ಲಿ ತಮ್ಮ ಜೀವಕ್ಕೆ ಅಪಾಯ ಎದುರಾಗುತ್ತೋ ಎಂಬುದು. ಯಾಕೆ ಅಂದ್ರೆ ಈ ಹಿಂದೆ ಕೂಡ ಹಲವು ಘಟನೆಗಳಲ್ಲಿ ಇದೇ ರೀತಿಯಾಗಿ ರಷ್ಯಾ ನೆಲದಲ್ಲಿ ಹೊರ ದೇಶದ ರಾಜಕೀಯ ನಾಯಕರ ಮೇಲೆ ದಾಳಿಗಳು ಆಗಿದ್ದು ಉಂಟು. ಅದರಲ್ಲೂ ಆಹಾರ ಪದಾರ್ಥದಲ್ಲಿ ವಿಷ ಬೆರೆತ & ಬೇರೆ ದೇಶದ ರಾಜಕೀಯ ನಾಯಕರು ಆಸ್ಪತ್ರೆ ಸೇರಿದ್ದ ಘಟನೆಗಳು ಭಯ ಹುಟ್ಟಿಸಿದ್ದವು. ಅದನ್ನೆಲ್ಲಾ ಅಳೆದು & ತೂಗಿ ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾಗೆ ಭೇಟಿ ಕೊಡುವುದೇ ಅನುಮಾನ ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೆ ಮತ್ತೊಂದು ಕಡೆ ಯುರೋಪ್ ದೇಶಗಳು ಝೆಲೆನ್ಸ್ಕಿಗೆ ಈ ವಿಚಾರದಲ್ಲಿ ಹೋಗದೇ ಇರುವುದೇ ಒಳ್ಳೆಯದು ಎಂಬ ಸಲಹೆ ನೀಡುತ್ತಿವೆ ಎನ್ನಲಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications