80,000 ಬೆತ್ತಲೆ ವಿಡಿಯೋ ಇಟ್ಟುಕೊಂಡು ₹102 ಕೋಟಿ ಪೀಕಿದ ಖತರ್ನಾಕ್ ಲೇಡಿ!
ಮಹಿಳೆಯೊಬ್ಬರ ಬಳಿ ಬರೋಬ್ಬರಿ 80,000ಕ್ಕೂ ಹೆಚ್ಚು ಅಶ್ಲೀಲ ಹಾಗೂ ಬೆತ್ತಲೆ ವಿಡಿಯೋ, ಫೋಟೋಗಳು ಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪೋಲೀಸರು ವಶಪಡಿಸಿಕೊಂಡ 30 ವರ್ಷದ ಮಹಿಳೆಯ ಮೊಬೈಲ್ ಹಾಗೂ ಡಿವೈಸ್ನಲ್ಲಿ ಬೆತ್ತಲೆ ಫೋಟೋ, ವಿಡಿಯೋಗಳು ಸಿಕ್ಕಿವೆ. ಇವುಗಳನ್ನು ಮುಂದಿಟ್ಟುಕೊಂಡು ಬರೋಬ್ಬರಿ ₹102 ಕೋಟಿ ರೂಪಾಯಿ ಹಣ ವಸೂಲಿ ಮಾಡಿರುವುದು ಕೂಡ ತಿಳಿದುಬಂದಿದೆ. "ಮಿಸ್ ಗಾಲ್ಫ್" ಕಿರೀಟ ಮುಡಿಗೇರಿಸಿಕೊಂಡಿದ್ದ ಮಹಿಳೆಯಿಂದ ಈ ಕೃತ್ಯ ನಡೆದಿದೆ ಎಂದು ವರದಿಯಾಗಿದೆ. ಈಕೆ ಬೌದ್ಧ ಸನ್ಯಾಸಿಗಳನ್ನು ಗುರಿಯಾಗಿಸಿಕೊಂಡು ಬೃಹತ್ ಬ್ಲ್ಯಾಕ್ಮೇಲ್ ದಂಧೆ ನಡೆಸಿರುವ ಆರೋಪ ಕೇಳಿಬಂದಿದೆ.
ಥೈಲ್ಯಾಂಡ್ ಬೌದ್ಧ ಮಠಗಳಲ್ಲಿ ಭಾರಿ ಲೈಂಗಿಕ ಹಗರಣ ಬೆಳಕಿಗೆ ಬಂದಿದ್ದು, ಮಿಸ್ ಗಾಲ್ಫ್ ಎಂದೂ ಕರೆಯಲ್ಪಡುವ ವಿಲಾವನ್ ಎಮ್ಸಾವತ್ ಅವರನ್ನು ಬ್ಯಾಂಕಾಕ್ನ ಹೊರಗಿನ ನೋಂಥಬುರಿಯಲ್ಲಿರುವ ಅವರ ಐಷಾರಾಮಿ ನಿವಾಸದಲ್ಲಿ ಬಂಧಿಸಲಾಗಿದೆ. ಬಂಧಿಸಲಾಯಿತು. ವಿಲಾವನ್ ಥೈಲ್ಯಾಂಡ್ನಾದ್ಯಂತ ಬೌದ್ಧ ಸನ್ಯಾಸಿಗಳನ್ನು ಗುರಿಯಾಗಿಸಿಕೊಂಡು ಬ್ಲ್ಯಾಕ್ಮೇಲ್ ದಂಧೆ ನಡೆಸಿ ನೂರಾರು ಕೋಟಿ ಹಣ ಪೀಕಿದ್ದಾಳೆ ಎಂದು ಹೇಳಲಾಗುತ್ತಿದೆ. ಪೊಲೀಸರು ಹೇಳುವಂತೆ ಈ ಮಹಿಳೆಯು ಸನ್ಯಾಸಿಗಳೊಂದಿಗೆ ಖಾಸಗಿ ಕ್ಷಣ ಕಳೆದು, ವಿಡಿಯೋ, ಫೋಟೋಗಳನ್ನು ರೆಕಾರ್ಡ್ ಮಾಡಿ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಿದ್ದಾಳೆ.
ಮಾಯಾಂಗನೆ ಬಲೆ ಬೀಸಿದ್ದು ಹೇಗೆ?
ಆಕೆಯ ಮೇಲೆ ಸುಲಿಗೆ, ಹಣ ವರ್ಗಾವಣೆ ಮತ್ತು ಕದ್ದ ಆಸ್ತಿಯನ್ನು ಪಡೆದ ಆರೋಪವೂ ಇದೆ. ತನಿಖಾಧಿಕಾರಿಗಳು ಮಹಿಳೆಯನ್ನು ಬಂಧಿಸಿದಾಗ ಆಕೆಯ ಡಿವೈಸ್ಗಳಲ್ಲಿ ಸನ್ಯಾಸಿಗಳೊಂದಿಗೆ ಸಾವಿರಾರು ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಿವೆ. ಇವುಗಳನ್ನು ಮೂರು ವರ್ಷಗಳ ಅವಧಿಯಲ್ಲಿ ಬ್ಲ್ಯಾಕ್ಮೇಲ್ ಮಾಡಲು ಬಳಸಲಾಗಿದೆ ಎಂದು ತಿಳಿದುಬಂದಿದೆ.

ಸನ್ಯಾಸಿಗಳು ಆಕೆಯ ಮೋಹಕ್ಕೆ ಸಿಲುಕಿ ತಮ್ಮ ದುಬಾರಿ ಮರ್ಸಿಡಿಸ್ ಬೆನ್ಜ್ ಕಾರು, ಹೆಚ್ಚಿನ ಹಣ ಮತ್ತು ಡೆಬಿಟ್ ಕಾರ್ಡ್ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆಕೆಯ ಬ್ಯಾಂಕ್ ಖಾತೆಗಳ ತನಿಖೆಯಲ್ಲಿ ಇತರ ಸನ್ಯಾಸಿಗಳು ಕೂಡ ದೊಡ್ಡ ಪ್ರಮಾಣದ ಹಣ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಸನ್ಯಾಸಿಗಳಿಂದ ಖಾಸಗಿ ಉಡುಗೊರೆ, ಐಷಾರಾಮಿ ವಸ್ತುಗಳನ್ನು ಸಹ ಪಡೆದಿದ್ದು, ಹೆಚ್ಚಿನ ಹಣವನ್ನು ಆನ್ಲೈನ್ ಜೂಜಾಟಕ್ಕೆ ಖರ್ಚು ಮಾಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಸನ್ಯಾಸಿಗಳು ನಾಪತ್ತೆ
ಈ ಪ್ರಕರಣದಲ್ಲಿ ಈಗಾಗಲೇ ಮುಖ್ಯ ಮಠಾಧಿಪತಿಗಳೂ ಸೇರಿ ಒಂಬತ್ತು ಹಿರಿಯ ಸನ್ಯಾಸಿಗಳು ವಸ್ತ್ರತ್ಯಾಗ ಮಾಡಿ, ಮಠದಿಂದ ಹೊರಹೋಗಿದ್ದಾರೆ. ಇದರಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಜೂನ್ ತಿಂಗಳಲ್ಲಿ ಬ್ಯಾಂಕಾಕ್ ಮಂದಿರದ ಹಿರಿಯ ಸಂನ್ಯಾಸಿ ಫ್ರಾ ಥೆಪ್ ವಚಿರಪಮೋಕ್ ನಾಪತ್ತೆಯಾಗಿದ್ದು, ಈ ಹಗರಣದ ತನಿಖೆ ಆರಂಭವಾಗಿದೆ. ಕಾಣೆಯಾದ ಸನ್ಯಾಸಿ ಇನ್ನೂ ಪತ್ತೆಯಾಗಿಲ್ಲ.
ಎಮ್ಸಾವತ್ 2024ರಲ್ಲಿ ಸನ್ಯಾಸಿಯೊಂದಿಗೆ ಸಂಬಂಧ ಹೊಂದಿದ್ದರು. ತಮ್ಮ ಮಗುವಿಗೆ ಜನ್ಮ ನೀಡಿದ್ದಾರೆಂದು ಹೇಳಿಕೊಂಡು 1.90 ಕೋಟಿಗಿಂತ ಹೆಚ್ಚು ಹಣಕ್ಕೆ ಬೇಡಿಕೆಯೂ ಇಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣ ಹೊರಬಂದ ಹಿನ್ನೆಲೆ ಥೈಲ್ಯಾಂಡ್ ಸರ್ಕಾರ ಸನ್ಯಾಸಿಗಳ ಮೇಲೆ ಹೊಸ ಕಠಿಣ ಶಿಸ್ತು ನಿಯಮ ತರಲು ಚಿಂತನೆ ನಡೆಸುತ್ತಿದೆ. ಅಲ್ಲಿನ ರಾಜ ನೀಡಿದ್ದ 81 ಸನ್ಯಾಸಿಗಳ ಗೌರವ ಪದವಿಗಳನ್ನು ರದ್ದುಪಡಿಸಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications