ಅಫ್ಘಾನಿಸ್ತಾನದಲ್ಲಿ ತನ್ನ ವ್ಯಾಪ್ತಿ ವಿಸ್ತರಣೆಗೆ ಚೀನಾದ ಬೆಂಬಲ ಕೋರಿದ ತಾಲಿಬಾನ್
ಕಾಬೂಲ್, ಜು.28: ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಅಖುಂಡ್ ಜುಲೈ 27 ರಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಯನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಅಫ್ಘಾನಿಸ್ತಾನದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಚೀನಾದ ಬೆಂಬಲವನ್ನು ತಾಲಿಬಾನ್ ಕೋರಿದೆ. ಹಾಗೆಯೇ ಯಾವುದೇ ಮೂರನೇ ದೇಶಕ್ಕೆ ಬೆದರಿಕೆಯೊಡ್ಡಲು ತಮ್ಮ ಪ್ರದೇಶವನ್ನು ಭಯೋತ್ಪಾದಕರು ಬಳಸುವುದನ್ನು ತಡೆಯಲಾಗುವುದು ಎಂದು ತಾಲಿಬಾನ್ ಹೇಳಿದೆ. ಉಯಿಘರ್ ಉಗ್ರಗಾಮಿ ಸಂಘಟನೆಗೆ ವಖಾನ್ ಕಾರಿಡಾರ್ ಮೂಲಕ ಅಫ್ಘಾನಿಸ್ತಾನದ ಎಮಿರೇಟ್ನಲ್ಲಿ ಆಶ್ರಯ ಸಿಗಬಹುದೆಂದು ಆತಂಕಗೊಂಡಿದ್ದರಿಂದ ಮುಲ್ಲಾ ಬರಾಡರ್ ಈ ಭರವಸೆ ನೀಡಿದ್ದಾರೆ.
ಮುಲ್ಲಾ ಬರದಾರ್ ಒಂಬತ್ತು ಜನರ ಉನ್ನತ ನಿಯೋಗದ ಮುಖ್ಯಸ್ಥರಾಗಿ ಎರಡು ದಿನಗಳ ಕಾಲ ಚೀನಾಕ್ಕೆ ಪ್ರಯಾಣ ಬೆಳೆಸಿದರು. ಚೀನಾದ ಉಪ ವಿದೇಶಾಂಗ ಸಚಿವರು ಮತ್ತು ಅಫ್ಘಾನಿಸ್ತಾನದ ಚೀನಾದ ವಿಶೇಷ ಪ್ರತಿನಿಧಿ ವಾಂಗ್ ಜೊತೆಗೆ ಪ್ರತ್ಯೇಕ ಸಭೆ ನಡೆಸಿದರು ಎಂದು ತಾಲಿಬಾನ್ ಪ್ರಕಟಣೆಯಲ್ಲಿ ತಿಳಿಸಿದೆ. "ಸಭೆಗಳು ಉಭಯ ದೇಶಗಳಿಗೆ ಸಂಬಂಧಿಸಿದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ವಿಷಯಗಳು, ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಮತ್ತು ಶಾಂತಿ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿದೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ," ಎನ್ನಲಾಗಿದೆ.
ಯಾವುದೇ ಮೂರನೇ ರಾಷ್ಟ್ರದ ವಿರುದ್ಧ ಅಫ್ಘಾನ್ ಭೂಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ ಎಂದು ಬೀಜಿಂಗ್ಗೆ ಭರವಸೆ ನೀಡುದೆ. ಈ ಮೂಲಕ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಮತ್ತು ಅಲ್ ಖೈದಾದಂತಹ ಪ್ಯಾನ್-ಇಸ್ಲಾಮಿಕ್ ಗುಂಪುಗಳು ಅಫ್ಘಾನಿಸ್ತಾನದಲ್ಲಿನ ಪ್ರದೇಶ ಬಳಸಬಹುದು ಎಂಬ ಆತಂಕಗಳನ್ನು ನಿವಾರಿಸಲು ತಾಲಿಬಾನ್ ಪ್ರಯತ್ನಿಸುತ್ತಿದೆ. ಆಮೂಲಾಗ್ರ ಇಸ್ಲಾಂ ಧರ್ಮವನ್ನು ವಿರೋಧಿಸುವ ದೇಶಗಳನ್ನು ಗುರಿಯಾಗಿಸಲು ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಸ್ಥಾಪಿಸುವುದು.

1996-2001ರ ನಡುವೆ ಅಧಿಕಾರದಲ್ಲಿದ್ದ ಮೊದಲ ಅವಧಿಯಲ್ಲಿ, ಅಲ್ ಖೈದಾ, ಹರ್ಕತ್-ಉಲ್-ಅನ್ಸರ್, ಹುಜಿ ಬಾಂಗ್ಲಾದೇಶದಂತಹ ಬಹುಪಾಲು ಪ್ಯಾನ್-ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಿಗೆ ತಾಲಿಬಾನ್ ಆಶ್ರಯ ನೀಡಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದಂತಹ ಗುಂಪುಗಳಿಗೆ ತರಬೇತಿ ಶಿಬಿರಗಳನ್ನು ನಡೆಸಿತ್ತು.
ಅಫ್ಘಾನಿಸ್ತಾನದ ಜನರಿಗೆ ಚೀನಾ ನಿರಂತರ ಸಹಕಾರ ನೀಡಿದ್ದಕ್ಕಾಗಿ ತಾಲಿಬಾನ್ ನಿಯೋಗವು ಧನ್ಯವಾದಗಳನ್ನು ಅರ್ಪಿಸಿದೆ. ವಿಶೇಷವಾಗಿ ಕೊರೊನಾವೈರಸ್ ವಿರುದ್ದದ ಹೋರಾಟದಲ್ಲಿ ಸಹಕಾರ ನೀಡಿದ ಕಾರಣಕ್ಕೆ ತಾಲಿಬಾನ್ ಚೀನಾಕ್ಕೆ ಧನ್ಯವಾದ ತಿಳಿಸಿದೆ.
ಆಗಸ್ಟ್ 31 ರಂದು ಅಫ್ಘಾನಿಸ್ತಾನವನ್ನು ತೊರೆಯುವುದಾಗಿ ಯುಎಸ್ ಈಗಾಗಲೇ ಘೋಷಿಸಿದೆ. "ಯುಎಸ್ ಜೊತೆಗಿನ ಸಂಬಂಧವನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನವು ತಾಲಿಬಾನ್ ಮೇಲೆ ತನ್ನ ಪ್ರಭಾವವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದರೆ, ಸುನ್ನಿ ಇಸ್ಲಾಮಿಸ್ಟ್ ಗುಂಪು ಚೀನಾದೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸಲು ಇಸ್ಲಾಮಾಬಾದ್ ಮೇಲೆ ಮತ್ತೆ ದಾಳಿ ಮಾಡುತ್ತಿದೆ. ಅಫ್ಘಾನಿಸ್ತಾನದೊಂದಿಗೆ ದ್ವಿಪಕ್ಷೀಯ ವ್ಯಾಪಾರದ ಮೇಲೆ ಹಿಡಿತ ಸಾಧಿಸಲು ಮತ್ತು ಆ ದೇಶದಲ್ಲಿ ಕಲ್ಲಿದ್ದಲು, ತಾಮ್ರ ಮತ್ತು ಕಬ್ಬಿಣದ ಅದಿರಿನಂತಹ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಚೀನಿಯರು ತಮ್ಮ ಕಡೆಯಿಂದ ಗಡಿ ಹಾಗೂ ರಸ್ತೆ ಮಾರ್ಗವನ್ನು ಅಫ್ಘಾನಿಸ್ತಾನಕ್ಕೆ ಮತ್ತು ಅದರ ಮಧ್ಯ ಏಷ್ಯಾದಲ್ಲಿ ವಿಸ್ತರಿಸುವತ್ತ ನೋಡುತ್ತಿದ್ದಾರೆ," ಎಂದು ಯುಎಸ್ ಮತ್ತು ಭಾರತದ ರಾಜತಾಂತ್ರಿಕರು ಹೇಳಿದರು.
(ಒನ್ಇಂಡಿಯಾ ಸುದ್ದಿ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications