'ಬಿಕಿನಿ ಕ್ಲೈಂಬರ್' ಚೆಲುವೆಯ ಪ್ರಾಣಕ್ಕೆ ಎರವಾಯಿತು ಸೆಲ್ಫಿ ಹುಚ್ಚು
ತೈಪೆ (ತೈವಾನ್) ಜನವರಿ 22: ಬೆಟ್ಟಗಳ ತುದಿಯೇರಿ ಬಿಕಿನಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿದ್ದ ತೈವಾನ್ನ 'ಬಿಕಿನಿ ಕ್ಲೈಂಬರ್' ಗಿಗಿ ವು ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ.
ಗಿಗಿ ವು ಅವರ ಮೃತದೇಹವನ್ನು ಪತ್ತೆಹಚ್ಚಲು ತೈವಾನಿನ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಯುಶಾನ್ ರಾಷ್ಟ್ರೀಯ ಉದ್ಯಾನದ ಕಂದರದೊಳಗೆ ಬಿದ್ದು ಗಾಯಗೊಂಡಿರುವುದಾಗಿ ಗಿಗಿ ವು ಸ್ಯಾಟಲೈಟ್ ಫೋನ್ ಮೂಲಕ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.
ಅವರನ್ನು ತಲುಪಲು ತೆರಳಿದ ಹೆಲಿಕಾಪ್ಟರ್ಗಳು ಪ್ರತಿಕೂಲ ಹವಾಮಾನದಿಂದಾಗಿ ಮರಳಿದ್ದವು. ಬಳಿಕ ಅಧಿಕಾರಿಗಳು ಜೀವ ಕಳೆದುಕೊಂಡಿದ್ದ ಆಕೆಯ ದೇಹವನ್ನು ಸೋಮವಾರ ಪತ್ತೆಹಚ್ಚಿದ್ದಾರೆ.

ಬೆಟ್ಟವನ್ನೇರಿದ್ದ ಗಿಗಿ, ಸುಮಾರು 20-30 ಮೀಟರ್ (65-100 ಅಡಿ) ಎತ್ತರದಿಂದ ಬಿದ್ದಿರುವುದಾಗಿ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದರು. ದೇಹದ ಕೆಳಭಾಗದ ಸ್ವಾಧೀನ ತಪ್ಪಿಹೋಗಿದೆ. ಆದರೆ, ರಕ್ಷಣೆಗೆ ಬರುವವರೊಂದಿಗೆ ಸಂವಹನ ನಡೆಸಿ ಸಹಕರಿಸಬಲ್ಲೆ ಎಂದು ತಿಳಿಸಿದ್ದರು.
ಚಾರಣದ ಆಸಕ್ತಿ ಹೊಂದಿದ್ದ ಗಿಗಿ ವು, ಚಾರಣದ ದಿರಿಸಿನಲ್ಲಿ ಬೆಟ್ಟ ಏರುತ್ತಿದ್ದರು. ಅದರ ತುತ್ತ ತುದಿ ತಲುಪಿದ ಬಳಿಕ ಬಿಕಿನಿಯಲ್ಲಿ ಚಿತ್ರಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಮನಸೆಳೆಯುವ ಬಿಕಿನಿ ಚಿತ್ರಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಗಿಗಿಯನ್ನು 'ಬಿಕಿನಿ ಕ್ಲೈಂಬರ್' ಎಂದೇ ಕರೆಯಲಾಗುತ್ತಿತ್ತು.
ನಾಲ್ಕು ವರ್ಷಗಳಲ್ಲಿ 100 ಬೆಟ್ಟದ ತುದಿಗಳನ್ನು ಏರಿದ್ದಾಗಿ ಗಿಗಿ ಕಳೆದ ವರ್ಷ ಹೇಳಿಕೊಂಡಿದ್ದರು. '100 ಬೆಟ್ಟಗಳಲ್ಲಿ ಪ್ರತಿ ಬೆಟ್ಟದ ತುದಿಯನ್ನೇರಿದಾಗಲೂ ಬೇರೆ ಬಿಕಿನಿಯಲ್ಲಿ ಇರುತ್ತಿದ್ದೆ. ನನ್ನ ಬಳಿ ಸುಮಾರು 97 ಬಿಕಿನಿಗಳು ಮಾತ್ರ ಇದ್ದು, ಆಕಸ್ಮಿಕವಾಗಿ ಪುನರಾವರ್ತಿಸಿದ್ದೆ' ಎಂದು ತಿಳಿಸಿದ್ದರು.

ಈ ರೀತಿಯ ಬಿಕಿನಿ ಹುಚ್ಚಾಟವೇಕೆ ಎಂದು ಪ್ರಶ್ನಿಸಿದಾಗ 'ಇದು ಸುಂದರವಾಗಿ ಕಾಣಿಸುತ್ತದೆ, ಇಷ್ಟವಾಗದೆ ಏನು' ಎಂದು ಕೇಳಿದ್ದರು.
ಕಳೆದ ವಾರ ಕ್ಯಾಲಿಫೋರ್ನಿಯಾದ ಯೊಸೆಮಿಟ್ ನ್ಯಾಷನಲ್ ಪಾರ್ಕ್ನ ಕೆಳಭಾಗದಲ್ಲಿ ಭಾರತದ ಜೋಡಿಯೊಂದರ ಮೃತದೇಹಗಳು ಪತ್ತೆಯಾಗಿದ್ದವು. ಅವರು ಬಳಸುತ್ತಿದ್ದ ಕ್ಯಾಮೆರಾ ಸಾಧನಗಳು ಬೆಟ್ಟದ ತುದಿಯಲ್ಲಿ ದೊರೆತಿದ್ದವು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications