ಬರಾಕ್ ಒಬಾಮಾ ಖಾತೆಗೆ ಸಿರಿಯಾ ಹ್ಯಾಕರ್ಸ್ ಲಗ್ಗೆ
ವಾಷಿಂಗ್ಟನ್, ಅ.29: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಅಧಿಕೃತ ಖಾತೆಗಳನ್ನು ಹ್ಯಾಕ್ ಮಾಡಿದ್ದೇವೆ ಎಂದು ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿ(SEA) ಮಂಗಳವಾರ(ಅ.29) ಹೇಳಿಕೊಂಡಿದೆ.
ಸಿರಿಯನ್ ಸರ್ಕಾರವನ್ನು ಬೆಂಬಲಿಸುವ ಈ ಅತಿಕ್ರಮಿಗಳು ಈ ಹಿಂದೆ ದಿ ನ್ಯೂಯಾರ್ಕ್ ಟೈಮ್ಸ್, ಅಗೇನ್ಸ್ ಫ್ರಾನ್ಸ್ ಪ್ರೆಸ್ಸ್ ಹಾಗೂ ಇತರೆ ಮಾಧ್ಯಮ ಸಂಸ್ಥೆಗಳ ಅಧಿಕೃತ ಖಾತೆಗಳಿಗೆ ಕನ್ನ ಹಾಕಿತ್ತು. ಸಿರಿಯ ಸರ್ಕಾರದ ಪರ ಹೇಳಿಕೆಗಳನ್ನು ಕನ್ನ ಹಾಕಿದ ಖಾತೆಗಳ ಮೂಲಕ ಪ್ರಸಾರ ಮಾಡಲು ಆರಂಭಿಸಿತ್ತು. ಆದರೆ, ಬರಾಕ್ ಒಬಾಮ ಅವರ ಫೇಸ್ ಬುಕ್ ಅಥವಾ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿಲ್ಲ ಎಂದು ಶ್ವೇತಭವನದ ಮೂಲಗಳು ಹೇಳಿವೆ.

ಆದರೆ, ಒಬಾಮಾ ಅವರ ಖಾತೆಗೆ ಆತಂಕ ಇದ್ದೇ ಇದೆ. ಒಬಾಮಾ ಅವರ ಯೋಜನೆಗಳನ್ನು ಈಗ ಟ್ವಿಟ್ಟರ್ ಬಂದ್ ಮಾಡಲಿದೆ ಎಂದು ಸಿರಿಯನ್ ಗುಂಪು ಹೇಳಿಕೊಂಡಿದೆ. ಆದರೆ, ಸಿರಿಯನ್ ಗುಂಪು ಈ ರೀತಿ ಪ್ರಕಟಣೆ ನೀಡಿದ ಕೆಲ ನಿಮಿಷಗಳಲ್ಲೇ ಒಬಾಮಾ ಅವರ ಖಾತೆ ಎಂದಿನಂತೆ ಕಾರ್ಯ ನಿರ್ವಹಿಸಲು ಆರಂಭಿಸಿದೆ.
ಸಿರಿಯನ್ ಹ್ಯಾಕರ್ಸ್ ಗುಂಪು ಬರಾಕ್ ಒಬಾಮಾ ಅವರ ಖಾತೆಗೆ ಕನ್ನ ಹಾಕಿದ್ದಾರೆ ಎಂಬ ಸುದ್ದಿಯನ್ನು ಎಎಫ್ ಪಿ ವರದಿ ಮಾಡಿತ್ತು. ಆದರೆ, ಈ ಬಗ್ಗೆ ಶ್ವೇತ ಭವನ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಒಬಾಮಾ ಅವರ ಟ್ವಿಟ್ಟರ್ ಖಾತೆ ನಿರ್ವಹಿಸುವ ವಕ್ತಾರರು 'The @BarackObama Twitter account was not compromised; their link shortener was' ಎಂದು ಸಂದೇಶ ಹೊರಡಿಸಿದರು.
ಆದರೆ, ಒಬಾಮಾ ಅವರ ಫೇಸ್ ಬುಕ್, ಟ್ವಿಟ್ಟರ್ ಖಾತೆ ಅಷ್ಟೇ ಅಲ್ಲ ಅವರ ಜೀಮೇಲ್ ಖಾತೆಗೆ ಹಾಗೂ ಅಧಿಕೃತ ವೆಬ್ ತಾಣದ ಪುಟವೊಂದಕ್ಕೆ ಸಿರಿಯನ್ ಹ್ಯಾಕರ್ಸ್ ಆತಂಕ ಒಡ್ಡಿದ್ದಾರೆ. ಒಬಾಮಾ ಅವರ ಉಗ್ರ ವಿರೋಧಿ ಅಭಿಯಾನಕ್ಕೆ ಸಂಬಂಧಿಸಿದ ಅನೇಕ ಇಮೇಲ್ ಗಳನ್ನು ನಾವು ಸಂಗ್ರಹಿಸಿದ್ದೇವೆ ಎಂದು ಸಿರಿಯನ್ ಗುಂಪು ಹೇಳಿಕೊಂಡಿದೆ. ಈ ಬಗ್ಗೆ ಶ್ವೇತಭವನ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈ ಹಿಂದೆ ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆ ಟ್ವಿಟ್ಟರ್ ಖಾತೆಗೆ ಲಗ್ಗೆ ಇಟ್ಟಿದ್ದ ಸಿರಿಯನ್ ಹ್ಯಾಕರ್ಸ್ 'ಒಬಾಮಾ ಅವರು ಶ್ವೇತಭವನದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ' ಎಂದು ಟ್ವೀಟ್ ಮಾಡಿದ್ದರು. AFP ಫೋಟೊ ಸೇವೆ ಹಾಗೂ ಬಿಬಿಸಿಯ ಸಾಮಾಜಿಕ ಜಾಲ ತಾಣ ಪುಟಗಳು, ಅಲ್ ಜಜೀರಾ ಹಾಗೂ ಫೈನಾನ್ಷಿಯಲ್ ಟೈಮ್ಸ್ ಮತ್ತು ಗಾರ್ಡಿಯನ್ ನ್ಯೂಸ್ ಪೇಪರ್ ಮುಂತಾದ ಸಂಸ್ಥೆಗಳ ಖಾತೆಗೆ ಸಿರಿಯನ್ ಹ್ಯಾಕರ್ಸ್ ಯಶಸ್ವಿಯಾಗಿ ಲಗ್ಗೆ ಇಟ್ಟಿದ್ದರು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications