ವಿಡಿಯೋ: ಬಾಂಬ್ ಸ್ಫೋಟದ ಭಯ ಹೋಗಲಾಡಿಸಲು ಮಗುವಿಗೆ ನಗುವಿನ ಪಾಠ!
ದಾಮಸ್ಕಸ್, ಫೆಬ್ರವರಿ.18: ಸಿರಿಯಾ.. ಬೆಳಗಾದರೆ ಬಾಂಬ್ ದಾಳಿ, ಸೇನೆ ಮತ್ತು ಉಗ್ರರ ನಡುವಿನ ಕಾದಾಟಕ್ಕೆ ಕೈಗನ್ನಡಿ ಎನ್ನುವಂತೆ ಇರುವ ಒಂದು ದೇಶ. ಈ ದೇಶದಲ್ಲಿ ಉಗ್ರರ ದಾಳಿಗೆ ಕಡಿವಾಣವೇ ಇಲ್ಲ. ಯಾವಾಗ ಎಲ್ಲಿ ಏನಾಗುತ್ತದೆ ಎಂಬುದೇ ತಿಳಿಯುವುದಿಲ್ಲ.
ಪ್ರತಿಕ್ಷಣವೂ ಭಯದಲ್ಲೇ ಜನರು ಜೀವನ ಸಾಗಿಸುವಂತಾ ಪರಿಸ್ಥಿತಿ ಸಿರಿಯಾದಲ್ಲಿದೆ. ಇದರ ಮಧ್ಯೆ ನಾಲ್ಕು ವರ್ಷದ ಪುಟ್ಟ ಮಗಳನ್ನು ಈ ಬಾಂಬ್ ಸ್ಫೋಟದ ಸದ್ದಿನಿಂದ ರಕ್ಷಿಸುವುದಕ್ಕೆ ತಂದೆ ಪಟ್ಟ ಹರಸಾಹಸ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಿರಿಯಾದ ಸ್ಟ್ರಿಫ್ ಟೊರ್ನ್ ಪ್ರದೇಶದಲ್ಲಿರುವ ಅಬ್ದುಲ್ಲಾ-ಅಲ್-ಮೊಹಮ್ಮದ್ ಹಾಗೂ ಅವರ ನಾಲ್ಕು ವರ್ಷದ ಮಗಳು ಸೆಲ್ವಾ ನಗುನಗುತ್ತಿರುವ ವಿಡಿಯೋ ಇದೀಗ ಸಾಕಷ್ಟು ಸದ್ದು ಮಾಡಿದೆ. ಇದಕ್ಕೆ ಕಾರಣವೂ ಇದೆ.

ಮಗುವಿನ ಭಯ ಹೋಗಲಾಡಿಸಲು ನಗುವಿನ ಪಾಠ:
ಮನೆಯ ಸುತ್ತಮುತ್ತಲಿನಲ್ಲೇ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯ ಸದ್ದು ಮೊಳಗುತ್ತಿರುತ್ತದೆ. ಇದರಿಂದ ಮಗು ಭಯ ಪಡದಂತೆ ಅಬ್ದುಲ್ಲಾ-ಅಲ್-ಮೊಹಮ್ಮದ್ ವಿಭಿನ್ನ ರೀತಿಯ ಪಾಠ ಮಾಡಿದ್ದಾರೆ. ಬಾಂಬ್ ಸದ್ದು ಕೇಳಿದಾಕ್ಷಣ ನಗುವುದೇ ಒಂದು ಬಗೆಯ ಆಟ ಎಂದು ಮಗುವಿಗೆ ಸ್ವತಃ ತಂದೆಯೇ ಪಾಠ ಮಾಡಿದ್ದಾನೆ.
VÍDEO INSTAGRAM | Abdullah Mohammad ha convertit els sons de la guerra amb què conviuen diàriament la ciutat de Sarmada, a Síria, en un joc per a la seua filla Salwa.
— À Punt NTC (@apuntnoticies) February 18, 2020
📹 @alganmehmett
Més vídeos: https://t.co/oxMtw5Dlc5 pic.twitter.com/JmTLXS7i1L
ಇದರಿಂದ ಪ್ರತಿಬಾರಿ ಗುಂಡಿನ ಮೊರತೆ, ಬಾಂಬ್ ಸ್ಫೋಟದ ಸದ್ದು ಕೇಳುತ್ತಿದ್ದಂತೆ ಮಗುವು ನಗುವುದನ್ನು ಕಲಿತುಕೊಂಡಿದೆ. ಇದರಿಂದ ಮಗುವಿನಲ್ಲಿ ಭಯವನ್ನು ಹೋಗಲಾಡಿಸಬಹುದು ಎಂದು ತಂದೆ ಅಬ್ದುಲ್ಲಾ ಈ ಪ್ಲಾನ್ ಮಾಡಿದ್ದಾರೆ. ಇದೀಗ ತಂದೆ ಮತ್ತು ಮಗು ಸ್ಫೋಟದ ಬೆನ್ನಲ್ಲೇ ನಗುತ್ತಿರುವ ವಿಡಿಯೋವನ್ನು ಪತ್ರಕರ್ತ ಮೆಲ್ಮತ್ ಅಲ್ಗನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications