Sudan Operation Kaveri : ಅಂದೇ ಈ ಬಗ್ಗೆ ಧ್ವನಿ ಎತ್ತಿದ್ದೆ, ಆದರೆ..? ಸಿದ್ದರಾಮಯ್ಯ
ಸುಡಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಅಂತಿಮವಾಗಿ ಸೋಮವಾರ ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತು. 131 ಭಾರತೀಯರ ಮೂರನೇ ಬ್ಯಾಚ್ ಆಪರೇಷನ್ ಕಾವೇರಿ ಅಡಿಯಲ್ಲಿ ಯುದ್ಧ ಪೀಡಿತ ಸುಡಾನ್ ಅನ್ನು ತೊರೆದಿದೆ. ಈ ಘಟನೆ ಸದ್ಯ ರಾಜಕೀಯ ಕೆಸರೆರೆಚಾಟಕ್ಕೆ ಸಾಕ್ಷಿಯಾಗಿದೆ.
ಅಧಿಕಾರವನ್ನು ಪಡೆಯಲು ಎರಡು ಮಿಲಿಟರಿ ಬಣಗಳ ನಡುವಿನ ಹಿಂಸಾಚಾರ ಅಲ್ಲಿರುವ ಭಾರತೀಯರ ಬಗ್ಗೆ ಆತಂಕವನ್ನು ಸೃಷ್ಟಿ ಮಾಡಿದೆ. ಭಾರತ ಸರ್ಕಾರವು ಅಲ್ಲಿನ ಭಾರತೀಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನಗಳಲ್ಲಿದೆ. ಪರಿಸ್ಥಿತಿಯು ತುಂಬಾ ಸೂಕ್ಷ್ಮವಾಗಿದೆ.

ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಸರ್ಕಾರದ ಸಹಾಯಕ್ಕಾಗಿ ದನಿ ಎತ್ತಿದಾಗ ವಿದೇಶಾಂಗ ಸಚಿವರು ನನ್ನ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಅನ್ನನೀರಿಲ್ಲದೆ ನೆರವಿಗಾಗಿ ಕಾದು ಕುಳಿತ ಅಸಹಾಯಕ ಜೀವಗಳ ಪರವಾಗಿ ನಾನು ದನಿ ಎತ್ತಿದಾಗ ದೇಶದ ವಿದೇಶಾಂಗ ಸಚಿವರೇ ಇದು ರಾಜಕೀಯ ಎಂದು ಟೀಕಿಸಿ ನನ್ನನ್ನು ಚಕಿತಗೊಳಿಸಿದ್ದರು.
— Siddaramaiah (@siddaramaiah) April 25, 2023
ಆ ಸಂದರ್ಭದಲ್ಲಿ ದೇಶಾದ್ಯಂತ ಜನ ನನ್ನ ದನಿಗೆ ದನಿಗೂಡಿಸಿ ಕೇಂದ್ರ ಸರ್ಕಾರದ ಕಿವಿ ಹಿಂಡಿ ಅದರ ಕರ್ತವ್ಯವನ್ನು ನೆನಪಿಸಿದ್ದರು.
ಅವರಿಗೆಲ್ಲ ಧನ್ಯವಾದಗಳು.… https://t.co/MOFjoLPO9Q
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಸುಡಾನ್ ಬಿಕ್ಕಟ್ಟು ರಾಜಕೀಯ ಗದ್ದಲವನ್ನು ಸೃಷ್ಟಿ ಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹಲವಾರು ಜೀವಗಳನ್ನು ಅಪಾಯದಲ್ಲಿಟ್ಟುಕೊಂಡು 'ರಾಜಕೀಯ ಮಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದರು.

ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, 'ಅನ್ನನೀರಿಲ್ಲದೆ ನೆರವಿಗಾಗಿ ಕಾದು ಕುಳಿತ ಅಸಹಾಯಕ ಜೀವಗಳ ಪರವಾಗಿ ನಾನು ದನಿ ಎತ್ತಿದಾಗ ದೇಶದ ವಿದೇಶಾಂಗ ಸಚಿವರೇ ಇದು ರಾಜಕೀಯ ಎಂದು ಟೀಕಿಸಿ ನನ್ನನ್ನು ಚಕಿತಗೊಳಿಸಿದ್ದರು. ಆ ಸಂದರ್ಭದಲ್ಲಿ ದೇಶಾದ್ಯಂತ ಜನ ನನ್ನ ದನಿಗೆ ದನಿಗೂಡಿಸಿ ಕೇಂದ್ರ ಸರ್ಕಾರದ ಕಿವಿ ಹಿಂಡಿ ಅದರ ಕರ್ತವ್ಯವನ್ನು ನೆನಪಿಸಿದ್ದರು. ಅವರಿಗೆಲ್ಲ ಧನ್ಯವಾದಗಳು. ಮಾನವೀಯತೆಯನ್ನು ಮೀರಿದ್ದು ಯಾವುದೂ ಇಲ್ಲ, ರಾಜಕಾರಣ ಕೂಡಾ' ಎಂದು ಟ್ವೀಟ್ ಮಾಡಿದ್ದಾರೆ.
आईएनएस सुमेधा 278 यात्रियों के साथ जेद्दाह पहुंचा।
— ANI_HindiNews (@AHindinews) April 25, 2023
विदेश मंत्री डॉ.एस जयशंकर ने ट्वीट किया, "मैं सऊदी अरब के विदेश मंत्री फैसल बिन फरहान और सऊदी अरब के अधिकारियों को उनके पूर्ण सहयोग के लिए धन्यवाद देता हूं।" pic.twitter.com/2UWVVNJhoG
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸುಡಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸಂಪರ್ಕಿಸಿ, ಅವರ ಪರಿಸ್ಥಿತಿಯನ್ನು ವಿಚಾರಿಸಿ ಅವರಿಗೆ ಸೂಕ್ತ ಸಲಹೆಯನ್ನು ನೀಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಅಲ್ಲಿನ ಮುಖ್ಯ ಬಂದರನ್ನು ಕೆಲವರು ತಲುಪಿದರೆ ಇನ್ನೂ ಅನೇಕರು ದಾರಿಯಲ್ಲಿದ್ದಾರೆ. ಅವರನ್ನೆಲ್ಲ ಅಲ್ಲಿಂದ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಸುಡಾನ್ನಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಸಂಖ್ಯೆ ಸುಮಾರು 4000 ಎಂದು ಹೇಳಲಾಗಿದೆ. ಸದ್ಯ 500 ಜನರ ರಕ್ಷಣೆ ಮಾಡಲು ಕೇಂದ್ರ ಮುಂದಾಗಿದೆ. ಆದರೆ ಇದು ಉತ್ತಮ ಆರಂಭ ಎಂದು ಹೇಳಲಾಗುತ್ತಿದೆ.
278 ಭಾರತೀಯರಿರುವ ಹಡಗು ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿರುವ ಸುಡಾನ್ ಬಂದರಿನಿಂದ ನಿರ್ಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.
-
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ಮಧ್ಯಪ್ರಾಚ್ಯ ಯುದ್ಧ: ಗ್ಯಾಸ್ ಸಿಲಿಂಡರ್, ಪೆಟ್ರೋಲ್ - ಡಿಸೇಲ್ ಸೇರಿದಂತೆ ಪ್ರಮುಖ ವಸ್ತುಗಳ ಬಗ್ಗೆ ಕೇಂದ್ರದಿಂದ ಮಹತ್ವದ ಆದೇಶ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ












Click it and Unblock the Notifications