Get Updates
Get notified of breaking news, exclusive insights, and must-see stories!

Sudan Operation Kaveri : ಅಂದೇ ಈ ಬಗ್ಗೆ ಧ್ವನಿ ಎತ್ತಿದ್ದೆ, ಆದರೆ..? ಸಿದ್ದರಾಮಯ್ಯ

ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಅಂತಿಮವಾಗಿ ಸೋಮವಾರ ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತು. 131 ಭಾರತೀಯರ ಮೂರನೇ ಬ್ಯಾಚ್ ಆಪರೇಷನ್ ಕಾವೇರಿ ಅಡಿಯಲ್ಲಿ ಯುದ್ಧ ಪೀಡಿತ ಸುಡಾನ್ ಅನ್ನು ತೊರೆದಿದೆ. ಈ ಘಟನೆ ಸದ್ಯ ರಾಜಕೀಯ ಕೆಸರೆರೆಚಾಟಕ್ಕೆ ಸಾಕ್ಷಿಯಾಗಿದೆ.

ಅಧಿಕಾರವನ್ನು ಪಡೆಯಲು ಎರಡು ಮಿಲಿಟರಿ ಬಣಗಳ ನಡುವಿನ ಹಿಂಸಾಚಾರ ಅಲ್ಲಿರುವ ಭಾರತೀಯರ ಬಗ್ಗೆ ಆತಂಕವನ್ನು ಸೃಷ್ಟಿ ಮಾಡಿದೆ. ಭಾರತ ಸರ್ಕಾರವು ಅಲ್ಲಿನ ಭಾರತೀಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನಗಳಲ್ಲಿದೆ. ಪರಿಸ್ಥಿತಿಯು ತುಂಬಾ ಸೂಕ್ಷ್ಮವಾಗಿದೆ.

Sudan Operation Kaveri : Siddaramaiah tweeted

ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಸರ್ಕಾರದ ಸಹಾಯಕ್ಕಾಗಿ ದನಿ ಎತ್ತಿದಾಗ ವಿದೇಶಾಂಗ ಸಚಿವರು ನನ್ನ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಸುಡಾನ್ ಬಿಕ್ಕಟ್ಟು ರಾಜಕೀಯ ಗದ್ದಲವನ್ನು ಸೃಷ್ಟಿ ಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹಲವಾರು ಜೀವಗಳನ್ನು ಅಪಾಯದಲ್ಲಿಟ್ಟುಕೊಂಡು 'ರಾಜಕೀಯ ಮಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದರು.

Sudan Operation Kaveri : Siddaramaiah tweeted

ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, 'ಅನ್ನನೀರಿಲ್ಲದೆ ನೆರವಿಗಾಗಿ ಕಾದು ಕುಳಿತ ಅಸಹಾಯಕ ಜೀವಗಳ ಪರವಾಗಿ ನಾನು ದನಿ ಎತ್ತಿದಾಗ ದೇಶದ ವಿದೇಶಾಂಗ ಸಚಿವರೇ ಇದು ರಾಜಕೀಯ ಎಂದು ಟೀಕಿಸಿ ನನ್ನನ್ನು ಚಕಿತಗೊಳಿಸಿದ್ದರು. ಆ ಸಂದರ್ಭದಲ್ಲಿ ದೇಶಾದ್ಯಂತ ಜನ ನನ್ನ ದನಿಗೆ ದನಿಗೂಡಿಸಿ ಕೇಂದ್ರ ಸರ್ಕಾರದ ಕಿವಿ ಹಿಂಡಿ ಅದರ ಕರ್ತವ್ಯವನ್ನು ನೆನಪಿಸಿದ್ದರು. ಅವರಿಗೆಲ್ಲ ಧನ್ಯವಾದಗಳು. ಮಾನವೀಯತೆಯನ್ನು ಮೀರಿದ್ದು ಯಾವುದೂ ಇಲ್ಲ, ರಾಜಕಾರಣ ಕೂಡಾ' ಎಂದು ಟ್ವೀಟ್ ಮಾಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸಂಪರ್ಕಿಸಿ, ಅವರ ಪರಿಸ್ಥಿತಿಯನ್ನು ವಿಚಾರಿಸಿ ಅವರಿಗೆ ಸೂಕ್ತ ಸಲಹೆಯನ್ನು ನೀಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಅಲ್ಲಿನ ಮುಖ್ಯ ಬಂದರನ್ನು ಕೆಲವರು ತಲುಪಿದರೆ ಇನ್ನೂ ಅನೇಕರು ದಾರಿಯಲ್ಲಿದ್ದಾರೆ. ಅವರನ್ನೆಲ್ಲ ಅಲ್ಲಿಂದ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಸುಡಾನ್‌ನಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಸಂಖ್ಯೆ ಸುಮಾರು 4000 ಎಂದು ಹೇಳಲಾಗಿದೆ. ಸದ್ಯ 500 ಜನರ ರಕ್ಷಣೆ ಮಾಡಲು ಕೇಂದ್ರ ಮುಂದಾಗಿದೆ. ಆದರೆ ಇದು ಉತ್ತಮ ಆರಂಭ ಎಂದು ಹೇಳಲಾಗುತ್ತಿದೆ.

278 ಭಾರತೀಯರಿರುವ ಹಡಗು ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿರುವ ಸುಡಾನ್ ಬಂದರಿನಿಂದ ನಿರ್ಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+