ಕೌಲಾಲಂಪುರ್ ನಲ್ಲಿ ಮಾವಳ್ಳಿ ಟಿಫಿನ್ಸ್ ರೂಂ ಹೋಟೆಲ್ ಆರಂಭ !
ಕೌಲಾಲಂಪುರ, ಡಿಸೆಂಬರ್ 08 : ಬೆಂಗಳೂರಿನ ಅಚ್ಚುಮೆಚ್ಚಿನ ತಿಂಡಿಯಾದ ಇಡ್ಲಿ-ದೋಸೆ ಹಾಗೂ ಸಿಹಿ ತಿಂಡಿಗಳು ಇನ್ನುಮುಂದೆ ದೂರದ ಮಲೇಷ್ಯಾದ ಕೌಲಾಲಂಪುರ್ ನಲ್ಲೂ ಸಿಗಲಿದೆ.
ದಕ್ಷಿಣ ಭಾರತದ ತಿಂಡಿ-ತಿನಿಸುಗಳು, ಊಟಕ್ಕೆ ಹೆಸರಾದ ಎಂಟಿಆರ್ ತನ್ನ ಶಾಖೆಯನ್ನು ಕೌಲಾಲಂಪುರದಲ್ಲಿ ಡಿಸೆಂಬರ್ 10 ರಂದು ಆರಂಭಿಸಲಿದೆ.
ಎಂಟಿಆರ್ ಅಂದರೆ ಯಾರಿಗೆ ಗೊತ್ತಿಲ್ಲ? ಅದು ಬೆಂಗಳೂರಿನ ಒಂದು ಪ್ರಸಿದ್ಧ ಹೋಟೆಲ್. ಬೆಂಗಳೂರಿನ ಪ್ರತಿ ಪ್ರದೇಶದಲ್ಲೂ ಒಂದಲ್ಲ ಒಂದು ಪ್ರಸಿದ್ಧ ಹೋಟೆಲ್ ಇದೆ. ಅವೆಲ್ಲ ಎಂಟಿಆರ್ ಆಗಿಲ್ಲ. ಹಾಗೆ ನೋಡಿದರೆ ಎಂಟಿಆರ್ ಕೇವಲ ಒಂದು ಹೋಟೆಲ್ ಎನ್ನುವ ಕಾರಣಕ್ಕೆ ಪ್ರಸಿದ್ಧವೂ ಆಗಿಲ್ಲ. ಅದೊಂದು ಅನ್ನಸಂಸ್ಕೃತಿಯ ಕೇಂದ್ರ .

ಹೌದು ದಕ್ಷಿಣ ಭಾರತದ ತಿಂಡಿ-ತಿನಿಸುಗಳು, ಊಟಕ್ಕೆ ಹೆಸರಾದ ಎಂಟಿಆರ್ ತನ್ನ ಶಾಖೆಯನ್ನು ಕೌಲಾಲಂಪುರದಲ್ಲಿ ಡಿಸೆಂಬರ್ 10 ರಂದು ಆರಂಭಿಸಲಿದೆ. ಇದೇ ಭಾನುವಾರ ಕೌಲಾಲಂಪುರದ ಜಲಾನ್ ತಂಬಿಪಿಳ್ಳೆ ಬ್ರಿಕ್ ಫೀಲ್ಡ್ ನಲ್ಲಿ ಎಂಟಿಆರ್ ತನ್ನ ಸೇವೆ ಆರಂಭಿಸಲಿದೆ. ಕನ್ನಡಿಗರು ಎಲ್ಲಾ ಭಾರತೀಯರು ದಕ್ಷಿಣ ಭಾರತದ ತಿನಿಸುಗಳನ್ನು ಸವಿಯಬಹುದು.
ಸ್ವತಂತ್ರ ಭಾರತಕ್ಕೂ ಮುನ್ನ ಬ್ರಿಟಿಷರ ಆಡಳಿತ ಅವಧಿಯಲ್ಲೇ 1924 ರಲ್ಲಿ ಇಬ್ಬರು ಸಹೋದರರು ಸೇರಿಕೊಂಡು ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿ ಬ್ರಾಹ್ಮಣರ ಕಾಫಿ ಕ್ಲಬ್ ಆರಂಭಿಸಿ, ಇಡ್ಲಿ ಹಾಗೂ ಕಾಫಿ ಮಾರಾಟ ಮಾಡುತ್ತಿದ್ದರು.
ಸ್ವಚ್ಛ, ಶುಭ್ರ ಹಾಗೂ ರುಚಿಯಾದ ತಿಂಡಿ ತಿನಿಸುಗಳಿಗೆ ಹೆಸರಾದ ಇಬ್ಬರು ಸಹೋದರರು ಆರಂಭಿಸಿದ ಹೋಟೆಲ್ ಭಾರಿ ಪ್ರಸಿದ್ಧಿ ಹೊಂದಲಾರಂಭಿಸಿತು. ನಂತರ ರೆಸ್ಟೋರೆಂಟ್ ಸ್ವರೂಪ ಪಡೆದುಕೊಂಡು ಮಾವಳ್ಳಿ ಟಿಫನ್ ರೂಮ್ ಎಂದು ಪುನರ್ ನಾಮಕರಣಗೊಂಡಿತು.
1960 ರ ಹೊತ್ತಿಗೆ ಎಂಟಿಆರ್ ಎಂದೇ ಫೇಮಸ್ ಆದ ಹೋಟೆಲ್, ಈಗಿರುವ ಲಾಲ್ ಬಾಗ್ ರಸ್ತೆಗೆ ಸ್ಥಳಾಂತರಗೊಂಡಿತು. ಇಂದು ಹರಿಶ್ಚಂದ್ರ ಮಯ್ಯ ಅವರ ಮಕ್ಕಳಾದ ಹೇಮಾ ಮಾಲಿನಿ, ವಿಕ್ರಂ ಹಾಗೂ ಅರವಿಂದ ಮಲ್ಯ ಮುಂದಾಳತ್ವದಲ್ಲಿ ಸೇವೆ ಮುಂದುವರೆಸಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications