ಕೊರೊನಾ ಜೊತೆ ಮತ್ತೆ ವಕ್ಕರಿಸಿದ ಎಬೋಲಾ: ಆಫ್ರಿಕಾದಲ್ಲಿ ಚಿಂತಾಜನಕ ಸ್ಥಿತಿ
ಪ್ಯಾರಿಸ್, ಜೂನ್ 2: ಅತ್ಯಂತ ಭೀಕರ ಎಬೋಲಾ ವೈರಸ್ ನಿರ್ಮೂಲನೆಗಾಗಿ ಕಳೆದ 20 ತಿಂಗಳಿನಿಂದ ನಡೆಯುತ್ತಿದ್ದ ಸತತ ಹೋರಾಟ ವಿಫಲವಾಗಿದೆ.
ಆಫ್ರಿಕಾ ಖಂಡ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ಸಿ) ಕಾಂಗೋ ದೇಶದ ಉತ್ತರ ಭಾಗದಲ್ಲಿ ಮತ್ತೆ ಕಿಲ್ಲರ್ ಎಬೋಲಾ ವೈರಸ್ ಪತ್ತೆಯಾಗಿದೆ.
2018ರಲ್ಲಿ 2243 ಮಂದಿ ಎಬೋಲಾಗೆ ಬಲಿಯಾಗಿದ್ದರು. ಕೇವಲ ಕೊವಿಡ್ 19ನಿಂದ ಮಾತ್ರ ಜನರ ಉಸಿರಿಗೆ ಕುತ್ತಲ್ಲ ಎಬೋಲಾದಿಂದಲೂ ಜನರು ಮೃತಪಡುತ್ತಾರೆ ಎನ್ನುವುದು ಸಾಬೀತಾಗಿದೆ. 1976ರಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು.

ಮತ್ತೆ ಎಬೋಲಾ ದಾಳಿಯ ಆತಂಕ
ಇದರಿಂದ ಈ ಖಂಡದಲ್ಲಿ ಮತ್ತೆ ಎಬೋಲಾ ವೈರಸ್ ದಾಳಿಯ ಆತಂಕ ಸೃಷ್ಟಿಯಾಗಿದ್ದು, ಆಫ್ರಿಕನ್ನರು ಭಯಭೀತರಾಗಿದ್ದಾರೆ. ಎಬೋಲಾದಿಂದ ಆಫ್ರಿಕಾ ಸಂಪೂರ್ಣ ಮುಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲೇ ಮತ್ತೆ ಎಬೋಲಾ ವೈರಸ್ ಪ್ರಕರಣ ಪತ್ತೆಯಾಗಿರುವುದು ವಿಶ್ವಕ್ಕೂ ಕಳವಳಕಾರಿಯಾಗಿದೆ.

ಎಬೋಲಾ ಮಹಾಮಾರಿ ಮುಕ್ತವಾಗಿದೆ ಎಂದಿದ್ದ ಆರೋಗ್ಯ ಸಂಸ್ಥೆ
ಇಂದು ಈ ಕುರಿತು ಪ್ಯಾರಿಸ್ನಲ್ಲಿ ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅಧಾನೋಮಿ ಘೆಬ್ರಿಯಾಸೊಸ್ ಮತ್ತೆ ಎಬೋಲಾ ಸೋಂಕು ಪತ್ತೆಯಾಗಿರುವುದರಿಂದ ಈ ಮಹಾಮಾರಿ ಸಂಪೂರ್ಣ ಮುಕ್ತವಾಗಿದೆ ಎಂದು ಘೋಷಿಸಲು ಸಾಧ್ಯವಾಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಆತಂಕದಿಂದ ನುಡಿದಿದ್ದಾರೆ.

1976ರಲ್ಲಿ ಕಂಡು ಬಂದಿದ್ದ ಸೋಂಕು
1976ರಲ್ಲಿ ಕಾಂಗೋದ ಉತ್ತರ ಭಾಗದಲ್ಲಿ ಪ್ರಥಮ ಎಬೋಲಾ ಸೋಂಕು ಕಂಡು ಬಂದಿತು. ಇದನ್ನು ಆರಂಭದಲ್ಲಿ ಝೈರೇ ಎಂದು ಕರೆಯಲಾಗುತ್ತಿತ್ತು. ಎಬೋಲಾ ನದಿ ದಂಡೆ ಪಕ್ಕದ ವಸತಿ ಪ್ರದೇಶದಲ್ಲಿ ಮೊದಲ ಬಾರಿಗೆ ಈ ಸೋಂಕು ಪತ್ತೆಯಾದ ಕಾರಣ ಇದಕ್ಕೆ ಎಬೋಲಾ ಎಂದು ಹೆಸರಿಡಲಾಯಿತು.

ಇದು ಬಾವುಲಿಗಳಿಂದ ಹರುಡುವ ಸೋಂಕು
ಇದು ಬಾವಲಿಗಳಿಂದ ಹರಡುವ ಡೆಡ್ಲಿ ವೈರಸ್ ಸೋಂಕು. ಈ ಸೋಂಕು ತಗುಲಿರುವ ಬಾವಲಿಗಳಿಗೆ ಯಾವುದೇ ಅಪಾಯವಿಲ್ಲ. ಬದಲಿಗೆ ಸಾಂಕ್ರಾಮಿಕ ರೋಗವನ್ನು ಹಬ್ಬಿಸುತ್ತವೆ.ಬಾವಲಿಗಳು, ಕಾಡು ಪ್ರಾಣಿಗಳಾದ ಚಿಂಪಾಂಜಿ, ಗೋರಿಲ್ಲಾ, ಮಂಗ, ಜಿಂಕೆ, ಮುಳ್ಳಂದಿ, ಕಾಡು ಹಂದಿ ಇತರ ಪ್ರಾಣಿಗಳಿಗೆ ಕಚ್ಚಿದಾಗ ರೋಗ ವ್ಯಾಪಿಸುತ್ತದೆ.
ಆಫ್ರಿಕನ್ನರು ಇಂತಹ ವನ್ಯಜೀವಿಗಳನ್ನು ಭೇಟೆಯಾಡಿ ಭಕ್ಷಿಸುವುದರಿಂದ ಸೋಂಕು ಹಬ್ಬುತ್ತದೆ. ಆರಂಭದಲ್ಲಿ ಜ್ವರ ಕಾಣಿಸಿಕೊಂಡು ದೇಹವು ಅತ್ಯಂತ ಕುರೂಪ ರೀತಿಯಲ್ಲಿ ವಿಕಾರಗೊಂಡು ರೋಗಿಗಳನ್ನು ನೋಡಲು ಭಯವಾಗುವಂತಹ ಅತ್ಯಂತ ಕ್ರೂರ ಸೋಂಕು ಇದಾಗಿದೆ.
ಆಫ್ರಿಕಾದಲ್ಲಿ ಅದರಲ್ಲೂ ಕಾಂಗೋದಲ್ಲಿ ಅನೇಕರು ಈ ಹಿಂದೆ ಡೆಡ್ಲಿ ಎಬೋಲಾಗೆ ಬಲಿಯಾಗಿದ್ದಾರೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications