50 ಪ್ರಯಾಣಿಕರು ಇದ್ದ ವಿಮಾನ ದಿಢೀರ್ ನಾಪತ್ತೆ, ಭೀಕರ ಅಪಾಘಾತ ಶಂಕೆ... Passenger Plane
ವಿಮಾನ ಅಪಘಾತಗಳು ಪದೇ ಪದೇ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿವೆ. ಇಡೀ ಜಗತ್ತಿನಲ್ಲಿ ಸಾಲು ಸಾಲು ವಿಮಾನ ಅಪಘಾತಗಳು ಸಂಭವಿಸಿ ಚಿಂತೆ ಹೆಚ್ಚಿಸಿದೆ. ಅದರಲ್ಲೂ ಕಳೆದ ತಿಂಗಳು ಅಂದ್ರೆ 2025 ಜೂನ್ ತಿಂಗಳಲ್ಲಿ ಭಾರತದಲ್ಲಿ ಏರ್ ಇಂಡಿಯಾ ವಿಮಾನ ಭೀಕರ ಅಪಘಾತಕ್ಕೆ ತುತ್ತಾಗಿ, 260 ಜನರ ಸಾವಿಗೆ ಈ ಘಟನೆ ಕಾರಣವಾಗಿತ್ತು. ಹೀಗಿದ್ದಾಗಲೇ ದಿಢೀರ್, 50 ಪ್ರಯಾಣಿಕರು ಇದ್ದ ವಿಮಾನ ದಿಢೀರ್ ನಾಪತ್ತೆ ಆಗಿದ್ದು ಭೀಕರ ಅಪಾಘಾತ ಶಂಕೆ...
ಒಂದು ಕಾಲದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವುದು ಹೆಮ್ಮೆಯ ವಿಚಾರ ಆಗಿತ್ತು, ಆದರೆ ಇತ್ತೀಚಿನ ಘಟನೆಗಳು ಭಯ ಹುಟ್ಟುಹಾಕಿದ್ದು ವಿಮಾನ ಪ್ರಯಾಣ ಅಂದ್ರೆನೇ ಜನರು ಹೆದರುವ ಸ್ಥಿತಿ ನಿರ್ಮಾಣ ಆಗಿದೆ. ವಿಮಾನ ಪ್ರಯಾಣ ಅಪಾಯಕಾರಿ ಅನ್ನೋ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇರುತ್ತದೆ. ಆದರೆ ಅತೀ ವೇಗವಾಗಿ ಮತ್ತು ಬೇಗ ಊರಿಗೆ ಹಾಗೂ ತಮಗೆ ಬೇಕಾದ ಸ್ಥಳಕ್ಕೆ ಹೋಗಲು ವಿಮಾನ ಪ್ರಯಾಣವನ್ನ ಜನ ಬಳಕೆ ಮಾಡುತ್ತಾರೆ. ಅದರಲ್ಲೂ ಶ್ರೀಮಂತರು ವಿಮಾನ ಪ್ರಯಾಣಕ್ಕೆ ಒತ್ತು ನೀಡುತ್ತಾರೆ. ಹೀಗಿದ್ದಾಗ ಪದೇ ಪದೇ ವಿಮಾನ ಅಪಘಾತ ಸಂಭವಿಸಿ ಜನರಲ್ಲೂ ಭಯದ ವಾತಾವರಣ ಸೃಷ್ಟಿ ಆಗುತ್ತಿದೆ. ಇದೀಗ ದಿಢೀರ್ 50 ಪ್ರಯಾಣಿಕರು ಇದ್ದ ವಿಮಾನಕ್ಕೆ ಏನಾಯ್ತು?

50 ಪ್ರಯಾಣಿಕರು ಇದ್ದ ವಿಮಾನ...
ಹೌದು, 2025 ಜೂನ್ 12 ಭಾರತೀಯರಿಗೆ ಎಂದೂ ಮರೆಯಲು ಆಗಲ್ಲ. ಯಾಕಂದ್ರೆ ಗುಜರಾತ್ ರಾಜ್ಯದ ಅಹಮದಾಬಾದ್ ನಗರದಿಂದ ಲಂಡನ್ ಕಡೆಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನ ಭೀಕರವಾಗಿ ಅಪಘಾತಕ್ಕೆ ತುತ್ತಾಗಿ, 260 ಜನರ ಜೀವ ಹೋಗಿತ್ತು. ಈ ಘಟನೆ ಮಾಸುವ ಮೊದಲೇ ಇದೀಗ ಮತ್ತೊಂದು ವಿಮಾನ ದುರಂತದ ಸುದ್ದಿ ಕೇಳಿ ಬರುತ್ತಿದ್ದು, ಹೀಗಾಗಿ ಭಯ ಮತ್ತಷ್ಟು ಹೆಚ್ಚಾಗಿದೆ. ಹಾಗಾದ್ರೆ ಇದೀಗ 50 ಪ್ರಯಾಣಿಕರು ಇದ್ದ ವಿಮಾನಕ್ಕೆ ಏನಾಯ್ತು?
ದಿಢೀರ್ ವಿಮಾನ ಭೀಕರ ಅಪಘಾತ?
ಅಂದಹಾಗೆ ಇಂದು ಚೀನಾ ಗಡಿ ಭಾಗದಲ್ಲಿ ರಷ್ಯಾದ ವಿಮಾನ ದಿಢೀರ್ ನಾಪತ್ತೆ ಆಗಿದ್ದು, ಸುಮಾರು 50 ಪ್ರಯಾಣಿಕರು ಈ ವಿಮಾನದಲ್ಲಿ ಇದ್ದರು ಎನ್ನಲಾಗಿದೆ. ಇನ್ನು ವಾಯು ಸಂಚಾರ ನಿಯಂತ್ರಣ ಕೊಠಡಿ ಜೊತೆಗೆ ಸಂಪರ್ಕ ಕಳೆದುಕೊಂಡ ನಂತರ ರಷ್ಯಾದ ಪ್ರಯಾಣಿಕ ವಿಮಾನ ದಿಢೀರ್ ನಾಪತ್ತೆ ಆಗಿದೆ, ಈಗ ವಿಮಾನ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂಬ ಮಾಹಿತಿ ಹಬ್ಬಿದೆ. ಇದೀಗ ನಾಪತ್ತೆ ಆಗಿರುವ ಈ ಆನ್ -24 ವಿಮಾನದಲ್ಲಿ ಸುಮಾರು 50 ಪ್ರಯಾಣಿಕರು ಇದ್ದರು ಅಂತಾ ಹೇಳಲಾಗುತ್ತಿದೆ. ಹೀಗಾಗಿಯೇ ಈಗ ಭಾರಿ ಆತಂಕ ಮನೆ ಮಾಡಿ, ವಿಮಾನ ಪತ್ತೆ ಮಾಡಲು ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಅಂಗಾರ ಏರ್ಲೈನ್ಸ್ ನಿರ್ವಹಿಸುವ ನಾಪತ್ತೆ ಆಗಿರುವ ಈ ವಿಮಾನ, ಅಮುರ್ನ ಟಿಂಡಾ ಸಿಟಿ ಕಡೆಗೆ ಹೋಗುತ್ತಾ ಇತ್ತು ಅಂತಾ ಹೇಳಲಾಗಿದೆ. ಹೀಗಾಗಿ ಭೀಕರ ಅಪಘಾತ ಆಗಿದೆಯಾ? ಅಥವಾ ಎಲ್ಲಾದರೂ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದೆಯಾ? ಎಂಬ ಅನುಮಾನ ದಟ್ಟವಾಗಿದೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications