ಕೇವಲ ಒಂದು ಸೆಕೆಂಡಿನಲ್ಲಿ ಲೇಖನ ಬರೆದ ರೋಬೋ ಪತ್ರಕರ್ತ!
ಚೀನಾದ ಪ್ರಸಿದ್ಧ ಸ್ಪ್ರಿಂಗ್ ಫೆಸ್ಟಿವಲ್ ಬಗ್ಗೆ ಪುಟ್ಟ ಲೇಖನ ಬರೆಯಲು ಕೇವಲ 1 ಸೆಕೆಂಡ್ ಕಾಲಾವಕಾಶ ತೆಗೆದುಕೊಂಡ ಈ ಯಂತ್ರ ಮಾನವ
ಬೀಜಿಂಗ್, ಜನವರಿ 19: ಇಲ್ಲಿನ ಅಲಿಬಾಬಾ ಎಂಬ ಪತ್ರಿಕಾ ಕಛೇರಿಯಲ್ಲಿ ನೂತನವಾಗಿ ರೋಬೋ ಜರ್ನಲಿಸ್ಟ್ ನ (ಯಂತ್ರ ಮಾನವ) ಪ್ರಾಯೋಗಿಕ ನೇಮಕವಾಗಿದ್ದು, ಆತನ ಕಾರ್ಯವೈಖರಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈತನಿಗೆ ಕ್ಸಿಯಾನೊ ನಾನ್ ಎಂದು ಹೆಸರಿಡಲಾಗಿದ್ದು, ಈ ರೋಬೋದ ಆರಂಭಿಕ ದಿನವಾದ ಮಂಗಳವಾರ ಈತನಿಗೆ ಚೀನಾದ ನಾಡಹಬ್ಬವಾದ ಸ್ಪ್ರಿಂಗ್ ಫೆಸ್ಟಿವಲ್ ನ ಪ್ರವಾಸಗಳ ಬಗ್ಗೆ ಬರೆಯಲು ಸೂಚಿಸಲಾಗಿತ್ತು. ಇದರ ಬಗ್ಗೆ 300 ಬೈಟ್ಸ್ ಗಳ ಪುಟ್ಟ ಲೇಖನವನ್ನು ಸಿದ್ಧಗೊಳಿಸಿದ ಆ ರೋಬೋ ತೆಗೆದುಕೊಂಡ ಸಮಯವೆಷ್ಟು ಗೊತ್ತೇ? ಕೇವಲ ಒಂದು ಸೆಕೆಂಡ್ ! ಹೌದು, ಒಂದೇ ಸೆಕೆಂಡಿನಲ್ಲಿ ಲೇಖನ ಬರೆದು ಇದನ್ನು ತಯಾರಿಸಿದ ವಿಜ್ಞಾನಿಗಳನ್ನೇ ಬೆಚ್ಚಿಬೀಳಿಸಿದ್ದಾನೆ ಈತ.

ಅಷ್ಟೇ ಅಲ್ಲ, ಈತ ಪುಟ್ಟ ಲೇಖನಗಳ ಜತೆಗೆ, ಇಡೀ ಪುಟಕ್ಕಾಗುವಷ್ಟು ದೊಡ್ಡ ಲೇಖನಗಳು, ಪ್ರವಾಸ ಕಥನಗಳು, ಕಥೆ, ಹಾಸ್ಯ, ಸಿನಿಮಾ, ಪದ್ಯ, ಗದ್ಯ.... ಹೀಗೆ ಎಲ್ಲವನ್ನೂ ಸ್ಪಷ್ಟವಾಗಿ, ಸವಿವರವಾಗಿ ಬರೆಯಬಲ್ಲ. ಅಲ್ಲದೆ, ವಿವಿಧ ಕ್ಷೇತ್ರಗಳ ಇತ್ತೀಚೆಗಿನ ಬೆಳವಣಿಗೆಯ ಬಗ್ಗೆ ವಿಶ್ಲೇಷಣೆಯನ್ನೂ ಮಾಡಬಲ್ಲವನಾಗಿದ್ದಾನೆ ಎಂದು ಪತ್ರಿಕಾ ಕಚೇರಿ ಹೆಮ್ಮೆಯಿಂದ ಹೇಳಿಕೊಂಡಿದೆ.
ಆದರೆ, ಇದರ ಜತೆಯಲ್ಲೇ ಮತ್ತೊಂದು ಮಾತನ್ನೂ ಹೇಳಿರುವ ಪತ್ರಿಕೆ, ''ಕ್ಸಿಯಾನೊ ನಾನ್ ನ ಈ ಪರಿಯ ಕೆಲಸದಿಂದ ಮುಂಬರುವ ದಿನಗಳಲ್ಲಿ ಪತ್ರಿಕಾ ಕಚೇರಿಗಳಲ್ಲಿ ಪತ್ರಕರ್ತರ ಸ್ಥಾನಗಳನ್ನು ರೋಬೋಗಳೇ ಆಕ್ರಮಿಸುತ್ತವೆ ಎಂದು ಹೇಳುವ ಹಾಗಿಲ್ಲ'' ಎಂದಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications