ಟೈಮ್: ಜನಮನ ಗೆದ್ದ ಮೋದಿ ರೇಸಿನಿಂದ ಹೊರಕ್ಕೆ
ವಾಷಿಂಗ್ಟನ್, ಡಿ.9: ಟೈಮ್ ಮ್ಯಾಗಜೀನ್ ವರ್ಷದ ವ್ಯಕ್ತಿ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜನಮನ ಗೆದ್ದರೂ ಸ್ಪರ್ಧೆ ಹೊರಬಿದ್ದಿದ್ದಾರೆ. ಸಾರ್ವಜನಿಕರ ಮತದಾನದಲ್ಲಿ ಮೋದಿ ಅವರೇ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆದರೆ, ಟೈಮ್ ಅಧಿಕೃತ ಅಂತಿಮ ಪಟ್ಟಿಯಲ್ಲಿ ಮೋದಿ ಅವರ ಹೆಸರು ಕಾಣಿಸಿಕೊಂಡಿಲ್ಲ.
ಡಿಸೆಂಬರ್ 6ರಂದು ಆನ್ ಲೈನ್ ಮತದಾನ ಕೊನೆಗೊಂಡಿದೆ. ಸಮೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 8 ರಂದು ಘೋಷಿಸಲಾಗಿದೆ. ಈ ಪ್ರಕಾರ ಆನ್ ಲೈನ್ ಮತಗಳ ಆಧಾರದ ಮೇಲೆ ಫರ್ಗುಸನ್ ಹೋರಾಟಗಾರರನ್ನು ಹಿಂದಿಕ್ಕಿ ವರ್ಷದ ವ್ಯಕ್ತಿ ಎಂದು ಜನರಿಂದ ಕರೆಸಿಕೊಂಡಿದ್ದಾರೆ. ಅದರೆ, ಅಧಿಕೃತವಾಗಿ ಟೈಮ್ ವರ್ಷದ ವ್ಯಕ್ತಿ ವಿಜೇತರ ಹೆಸರನ್ನು ಡಿಸೆಂಬರ್ 10 ರಂದು ಪ್ರಕಟಿಸಲಾಗುತ್ತದೆ.

ಟೈಮ್ ಸಂಪಾದಕರ ಆಯ್ಕೆ ಮಾಡಿರುವ 50 ಜಾಗತಿಕ ನಾಯಕರು, ಸಿಇಒಗಳು ಹಾಗೂ 8 ಇನ್ನಿತರ ನಾಯಕರ ಪಟ್ಟಿಯಲ್ಲಿ ಮೋದಿ ಅವರ ಹೆಸರು ಕಾಣಿಸಿಕೊಂಡಿಲ್ಲ. [ಮೋದಿ ಏಷ್ಯಾದ ವರ್ಷದ ವ್ಯಕ್ತಿ-2014]
Indian Prime Minister Narendra Modi is the winner of this year’s reader poll for TIME Person of the Year http://t.co/4bQML0Xp9U
— TIME.com (@TIME) December 9, 2014 ಅಂತಿಮ 8 ಜನರ ಪಟ್ಟಿಯಲ್ಲಿ ಅಲಿಬಾಬಾ ಸಮೂಹ ಜಾಕ್ ಮಾ, ಎಬೋಲಾ ಕೇರ್ ಟೇಕರ್ಸ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಆಪಲ್ ಸಿಇಒ ಟಿಮ್ ಕುಕ್, ಫರ್ಗುಸನ್ ಪ್ರತಿಭಟನಾಕಾರರು, ಟೇಲರ್ ಸ್ವಿಫ್ಟ್, ಎನ್ ಎಫ್ ಎಲ್ ಆಯುಕ್ತ ರೋಜರ್ ಸ್ಟೋಕಿ ಗೂಡ್ ಎಲ್ ಹಾಗೂ ಕುರ್ದೀಶ್ ರಾಜಕಾರಣಿ ಮಸೌದ್ ಬರ್ಜಾನಿ ಇದ್ದಾರೆ. [ಒಬಾಮಾ ನಂತರ ಮೋದಿಯೇ ಜನಪ್ರಿಯ ವ್ಯಕ್ತಿ!]
ಆನ್ ಲೈನ್ ಸಮೀಕ್ಷೆ ವಿಜೇತರು ಹಾಗೂ ವರ್ಷದ ವ್ಯಕ್ತಿ ಯಾರು ಎಂಬುದನ್ನು ಟೈಮ್ ಡಿ.10ರಂದು ಅಧಿಕೃತವಾಗಿ ಪ್ರಕಟಿಸಲಿದೆ. 1927ರಿಂದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಟೈಮ್ ಮ್ಯಾಗಜೀನ್ ನೀಡುತ್ತಾ ಬಂದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications