ಆಫ್ರಿಕಾದ ರಾಷ್ಟ್ರಕ್ಕೆ ಜಲಭಾಗ್ಯ ಒದಗಿಸಿದ ಮೋದಿ ಸರ್ಕಾರ
ದಾರ್-ಎಸ್-ಸಲಾಮ್ (ತಾಂಜಾನಿಯ), ಜುಲೈ 10 : ಆಫ್ರಿಕಾ ಪ್ರವಾಸ ನಿರತ ಭಾರತದ ಪ್ರಧಾನಿ ಮೋದಿ ಅವರು ಭಾನುವಾರದಂದು ತಾಂಜಾನಿಯಾದಲ್ಲಿ ಭವ್ಯ ಸ್ವಾಗತವನ್ನು ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ತಾಂಜಾನಿಯಾ ಅಧ್ಯಕ್ಷ ಜಾನ್ ಮಗುಫುಲಿ ಅವರ ಸಮ್ಮುಖದಲ್ಲಿ ಐದು ಪ್ರಮುಖ ಒಪ್ಪಂದಗಳಿಗೆ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.
ಭಾರತ ಸರ್ಕಾರದ ಬೆಂಬಲಿತ ಕಾರ್ಯಕ್ರಮದಡಿ ತಮ್ಮ ಹಳ್ಳಿಗಳಲ್ಲಿಯೇ ಮನೆಯ ಸೌರ ವಿದ್ಯುತ್ ದೀಪಗಳನ್ನು ಮತ್ತು ಸೌರಲಾಂದ್ರಗಳ ತಯಾರಿಕೆ, ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿ ಮಾಡುವ ತರಬೇತಿ ಪಡೆದ ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರುಗಳ ಸೋಲಾರ್ ಮಮಾಸ್ ಗುಂಪನ್ನು ನಾನು ಭೇಟಿ ಮಾಡಲಿದ್ದೇನೆ. ನಾನು ಭಾರತೀಯ ಸಮುದಾಯದೊಂದಿಗೂ ಮಾತುಕತೆ ನಡೆಸಲಿದ್ದೇನೆ ಎಂದು ಆಫ್ರಿಕಾ ಭೇಟಿಗೂ ಮುನ್ನ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.[ಚಿತ್ರಗಳಲ್ಲಿ : ಆಫ್ರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ]
ಜಲ ಪೂರೈಕೆ ಮಹತ್ವದ ಒಪ್ಪಂದ : ಭಾರತದಿಂದ ತಾಂಜಾನಿಯಾದ ಝುಂಝಿಬಾರ್ನಲ್ಲಿ ನೀರು ಸರಬರಾಜು ವ್ಯವಸ್ಥೆಗೆ 920 ಲಕ್ಷ ಡಾಲರ್ ನೆರವು ನೀಡಿಕೆ ಪ್ರಮುಖ ಒಪ್ಪಂದವಾಗಿದೆ. [ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್ ನಲ್ಲಿ ಮೋದಿ ಸುತ್ತಾಟ]
A close and friendly partner. PM and President witness the exchange of 5 agreements across various sectors pic.twitter.com/2bfUsA3PcH
— Vikas Swarup (@MEAIndia) July 10, 2016
ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಕ್ಷೇತ್ರಗಳಲ್ಲಿನ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರ ಸಮ್ಮುಖದಲ್ಲಿ ಮಹತ್ವದ ಒಪ್ಪಂದ ಪ್ರತಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
'ನಾನು ಮತ್ತು ಅಧ್ಯಕ್ಷ ಮಗುಫುಲಿ ಅವರು ಮುಖ್ಯವಾಗಿ ಸಾಗರಯಾನ ಕ್ಷೇತ್ರದಲ್ಲಿ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಒಪ್ಪಿದ್ದೇವೆ. ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ಮತ್ತು ಪರಿಸರ ಬದಲಾವಣೆ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ನಿಕಟವಾಗಿ ದುಡಿಯಲು ನಾವು ಒಪ್ಪಿದ್ದೇವೆ' ಎಂದು ಹೇಳಿದರು.

ಉಭಯ ದೇಶಗಳ ನಡುವೆ ಪ್ರಮುಖ ಒಪ್ಪಂದಗಳು
* ಝಾಂಝಿಬಾರ್ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ 92 ಮಿಲಿಯನ್ ಡಾಲರ್ ಸಾಲ ರೂಪದ ನೆರವು
* ಸಂಪನ್ಮೂಲ ನಿರ್ವಹಣೆ ಹಾಗೂ ಅಭಿವೃದ್ಧಿ
* ಸಾರ್ವಜನಿಕ ಆರೋಗ್ಯ ರಕ್ಷಣೆ, ಔಷಧ ಮತ್ತು ಔಷಧೋಪಕರಣ ಪೂರೈಕೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಆದ್ಯತೆ

ಸಣ್ಣ ಕೈಗಾರಿಕೆ ಕಾರ್ಪೊರೇಷನ್ ಸ್ಥಾಪನೆ
* ಸಣ್ಣ ಕೈಗಾರಿಕೆ ಕಾರ್ಪೊರೇಷನ್ ಸ್ಥಾಪನೆ
* ವೀಸಾ ನಿಯಮ ಸಡಿಲಿಕೆ, ಮುಖ್ಯವಾಗಿ ರಾಯಭಾರಿ, ಕಚೇರಿ ವ್ಯವಹಾರ ಸಿಬ್ಬಂದಿಗಳಿಗೆ ಅನ್ವಯ.
ತಾಂಜಾನಿಯಾದ 17 ನಗರಗಳಿಗೆ ನೀರು ಪೂರೈಕೆ ಕಾರ್ಯಗಳಲ್ಲೂ ನೆರವಾಗುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಇದಕ್ಕಾಗಿ ರಿಯಾಯ್ತಿ ದರದಲ್ಲಿ 5000 ಲಕ್ಷ ಡಾಲರ್ ಹೆಚ್ಚುವರಿ ಸಾಲ ಒದಗಿಸುವ ಬಗ್ಗೆ ಪರಿಶೀಲಿಸಲೂ ಭಾರತ ಬಯಸಿದೆ.

ಸೋಲಾರ್ ಮಮಾಸ್ ಭೇಟಿ
ಅಧ್ಯಕ್ಷ ಮಗುಫುಲಿ ಅವರನ್ನು ಭಾರತಕ್ಕೆ ಬರಮಾಡಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ಮೋದಿ ಹೇಳಿದರು.

ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರು
ಭಾರತ ಸರ್ಕಾರದ ಬೆಂಬಲಿತ ಕಾರ್ಯಕ್ರಮದಡಿ ತಮ್ಮ ಹಳ್ಳಿಗಳಲ್ಲಿಯೇ ಮನೆಯ ಸೌರ ವಿದ್ಯುತ್ ದೀಪಗಳನ್ನು ಮತ್ತು ಸೌರಲಾಂದ್ರಗಳ ತಯಾರಿಕೆ, ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿ ಮಾಡುವ ತರಬೇತಿ ಪಡೆದ ಆಫ್ರಿಕಾದ ಗ್ರಾಮೀಣ ಮಹಿಳಾ ಎಂಜಿನಿಯರುಗಳ ಸೋಲಾರ್ ಮಮಾಸ್ ಗುಂಪನ್ನು ಭೇಟಿ ಮಾಡಿದ ಮೋದಿ
-
ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಎದುರಾಗುವ ನೀರಿನ ಸಮಸ್ಯೆ ತಡೆಯಲು ಸಚಿವ ಪ್ರಿಯಾಂಕ್ ಖರ್ಗೆ ಮಾಸ್ಟರ್ ಪ್ಲಾನ್ -
Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್












Click it and Unblock the Notifications