ಡೆನಿಸ್ ಮುಕ್ವೇಜ್, ನಾದಿಯಾ ಮುರದ್ ಗೆ ನೊಬೆಲ್ ಶಾಂತಿ ಪುರಸ್ಕಾರ
ಡೆನಿಸ್ ಮುಕ್ವೇಜ್, ನಾದಿಯಾ ಮುರದ್ 2018ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು 115 ಸಂಸ್ಥೆಗಳಿಂದ ಬಂದಿದ್ದ 216 ಹೆಸರುಗಳ ಪೈಕಿ ಸಾಮಾಜಿಕ ಪಿಡುಗೆಗೆ ಸವಾಲೊಡ್ಡಿದ್ದ ಡೆನಿಸ್ ಹಾಗೂ ನಾದಿಯಾ ಅವರನ್ನು ನೋಬೆಲ್ ಸಮಿತಿ ಆಯ್ಕೆ ಮಾಡಿದೆ.

ಲೈಂಗಿಕ ದೌರ್ಜನ್ಯದ ವಿರುದ್ಧ ಸಮರ ಸಾರಿದ ಕಾರಣಕ್ಕೆ ಡೆನಿಸ್ ಹಾಗೂ ನಾದಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗುತ್ತಿದೆ. ನಾದಿಯಾ ಮುರದ್ 23 ವರ್ಷದ ಸುಂದರ ಯುವತಿ, ಐಸಿಸ್ ಉಗ್ರರ ಹಿಂಸೆಗೆ ನಲುಗಿದ್ದ ಮುಗ್ದೆ, ಈಗ ವಿಶ್ವ ಸಂಸ್ಥೆಯ ಸದ್ಭಾವನಾ ರಾಯಭಾರಿ.
ವಿಶ್ವಸಂಸ್ಥೆಯ ಡ್ರಗ್ ಮತ್ತು ಕ್ರೈಂ ವಿಭಾಗದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾನವ ಕಳ್ಳಸಾಗಣೆಯಲ್ಲಿ ಬಚಾವಾದವರ ಗೌರವ ಕಾಪಾಡುವ ಜವಾಬ್ದಾರಿ ನಾದಿಯಾ ಮೇಲಿದೆ. ಐಸಿಸ್ ಪಾತಕಿಗಳ ಕೈಯ್ಯಿಂದ ತಪ್ಪಿಸಿಕೊಂಡು ಬಂದಿದ್ದ ನಾದಿಯಾ ಈ ವರ್ಷ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಡೆನಿಸ್ ಮುಕ್ವೇಜ್ ಅವರು ಸ್ತ್ರೀರೋಗ ತಜ್ಞರಾಗಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಸಂತ್ರಸ್ತರಿಗೆ ಇವರು ಚಿಕಿತ್ಸೆ ನೀಡಿದ್ದಾರೆ. ಯುದ್ಧ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾಗುತ್ತಿದ್ದ ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿದ್ದರು. ಎರಡನೇ ಕಾಂಗೋ ಯುದ್ಧ ಸಂದರ್ಭದಲ್ಲಿ ಸಾವಿರಾರು ಸಂತ್ರಸ್ತರಿಗೆ ಇವರು ನೆರವಾಗಿದ್ದರು.
ನಾದಿಯಾ ಮುರದ್ ಇರಾಕ್ ನ ಉತ್ತರ ಭಾಗದಲ್ಲಿರುವ ಕೋಚಾ ಎಂಬ ಗ್ರಾಮದಲ್ಲಿ ವಾಸವಿದ್ದರು. ಮೊದಲು ಐಸಿಸ್ ಉಗ್ರರ ಹಿಂಸಾಕೃತ್ಯದ ಬಗ್ಗೆ ಅವರಿಗೆ ಅರಿವಿರಲಿಲ್ಲ. ಒಮ್ಮೆ ನಾದಿಯಾ ವಾಸವಿದ್ದ ಹಳ್ಳಿಗೆ ನುಗ್ಗಿದ್ದ ಐಸಿಸ್ ಉಗ್ರರು ಎಲ್ಲರಿಗೂ ಶಾಲೆಯೊಳಗೆ ಹೋಗುವಂತೆ ಸೂಚಿಸುತ್ತಾರೆ.
ಗುಂಪಿನಲ್ಲಿದ್ದ ಮಹಿಳೆಯರು ಮತ್ತು ಪುರುಷರನ್ನು ಬೇರ್ಪಡಿಸುತ್ತಾರೆ. ನಂತರ 314 ಪುರುಷರನ್ನು ಕೊಂದು ಹಾಕುತ್ತಾರೆ. ನಾದಿಯಾಳ 6 ಸಹೋದರರು ಕೂಡ ಬಲಿಯಾಗುತ್ತಾರೆ.
2018ರ ನೊಬೆಲ್ ಶಾಂತಿ ಪ್ರಶಸ್ತಿಯು 9 ಮಿಲಿಯನ್ ಸ್ವೀಡಿಶ್ ಕ್ರಾನರ್ ಅಂದರೆ 7,49,31,900 ಕೋಟಿ ರೂಗಳ ಮೊತ್ತವನ್ನು ಒಳಗೊಂಡಿದೆ. 2009ರಲ್ಲಿ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಲಭಿಸಿತ್ತು. ಬುಧವಾರ ರಸಾಯನಶಾಸ್ತ್ರದಲ್ಲಿ ಅಮೆರಿಕಾ, ಕೆನಡಾ ಮತ್ತು ಫ್ರಾನ್ಸ್ ನ ಮೂವರು ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications