ಪ್ರಳಯಕ್ಕೆ ಹೊಸ ದಿನಾಂಕ ನಿಗದಿ, ನವೆಂಬರ್ 19!
Recommended Video

ಬೆಂಗಳೂರು, ಅಕ್ಟೋಬರ್ 28 : ನವೆಂಬರ್ 19, ಭಾನುವಾರ! ಇದು ಹಲವರ ಪಾಲಿಗೆ ಕ್ಯಾಲೆಂಡರ್ ಮೇಲಿರುವ ಒಂದು ಸಾಮಾನ್ಯ ಸಂಖ್ಯೆ, ಒಂದು ದಿನಾಂಕ ಮಾತ್ರ. ಜೋರಾಗಿ ಗಾಳಿಬೀಸಿ ಪಟಪಟ ಹಾರಿದರೆ ಆ ಒಂದು ದಿನದ ಪಟವೂ ಹಾರಿಹೋಗಲು ಎಷ್ಟು ಸಮಯ ಬೇಕು?
ಆದರೆ, ಈ ದಿನ ಪ್ರಳಯದ ಮೇಲೆ ಅಪಾರ ನಂಬಿಕೆ ಇಟ್ಟವರಿಗೆ ಸಾಮಾನ್ಯ ದಿನವಾಗಿರಲಾರದು. ಏಕೆಂದರೆ, ಸೆಪ್ಟೆಂಬರ್ 23ರಂದು ಇಡೀ ವಿಶ್ವವೇ ಮುಳುಗಿಹೋಗುತ್ತದೆ ಎಂದು ಷರಾ ಬರೆದಿದ್ದ ಡೇವಿಡ್ ಮೇಡೆ ಎಂಬಾತ ಈಬಾರಿ ಪ್ರಳಯಕ್ಕೆ ಮತ್ತೊಂದು ದಿನಾಂಕವನ್ನು ನಿಗದಿ ಪಡಿಸಿದ್ದಾರೆ. ಅದೇ ನವೆಂಬರ್ 19.
ನವೆಂಬರ್ 19ರಂದು ಭಾರೀ ಭೂಕಂಪಗಳಾಗಿಬಿಡುತ್ತವೆ, ಸುನಾಮಿಗಳೆದ್ದುಬಿಡುತ್ತವೆ, ಅಗ್ನಿಪರ್ವತ ಸಿಡಿಯುತ್ತದೆ, ಎಂದೂ ಕಂಡಿರದಂಥ ಅಗ್ನಿ ಅವಘಡ ಸಂಭವಿಸಿಬಿಡುತ್ತದೆ, ಬಿರುಗಾಳಿಯೆದ್ದು ರಾತ್ರೋರಾತ್ರಿ ಎಲ್ಲ ಸರ್ವನಾಶವಾಗಿಬಿಡುತ್ತದೆ ಎಂಬಿತ್ಯಾದಿಗಳನ್ನೇನೂ ಆತ ಹೇಳಿಲ್ಲ. ಆತ ಕೊಟ್ಟಿರುವುದು ಆ ದಿನಾಂಕ ಮಾತ್ರ.
ಅಷ್ಟರಲ್ಲಿ, ದೇವರು ದಿಂಡರುಗಳಲ್ಲಿ ಅಪಾರ ನಂಬಿಕೆಯಿಟ್ಟಿರುವ ಹಲವಾರು ಪ್ರಳಯವಾದಿಗಳು, ಚಕಚಕನೆ ಟೆಲಿಸ್ಕೋರ್ ಹಿಡಿದು ವಿಜ್ಞಾನಿಗಳು ಬಿಟ್ಟಸ್ಥಳ ತುಂಬಲು ಆರಂಭಿಸಿದ್ದಾರೆ. ಭಯಂಕರ ಭೂಕಂಪಗಳು ಭೂಮಿಯನ್ನು ತಲ್ಲಣಿಸುವಂತೆ ಮಾಡುತ್ತವೆ ಎಂದು ಭವಿಷ್ಯ ನುಡಿಯಲು ಆರಂಭಿಸಲಾಗಿದೆ.

ಕಪ್ಪು ನಕ್ಷತ್ರವೆಂದೇ ಖ್ಯಾತಿ ಗಳಿಸಿರುವ ನಿಬಿರು
ಕಪ್ಪು ನಕ್ಷತ್ರವೆಂದೇ ಖ್ಯಾತಿ ಗಳಿಸಿರುವ ನಿಬಿರು ಎಂಬ ಆಕಾಶಕಾಯ ನವೆಂಬರ್ 19ರ ಆಸುಪಾಸಿನಲ್ಲಿ ನಮ್ಮ ಸೌರಮಂಡಳದ ಬಳಿಯಿಂದ ಹಾದುಹೋಗಲಿದ್ದು, ಇದರಿಂದ ಭೂಮಿಯ ಹಲವಾರು ಭಾಗಗಳಲ್ಲಿ ಭೂಮಿ ಅದುರುತ್ತದೆ, ಸುನಾಮಿಗಳೇಳುತ್ತವೆ ಎಂಬ ಸುದ್ದಿಗಳು ಹರಿದಾಡಲು ಆರಂಭಿಸುತ್ತಿವೆ.

ಭೂಕಂಪನದಂಥ ಅವಘಡ ಸಂಭವಿಸುವ ಸಾಧ್ಯತೆ
ಈ ಬಾರಿ ನಿಬಿರು ಎಂಬ ಆಕಾಶಕಾಯ ಭೂಮಿಗೇನೂ ಅಪ್ಪಳಿಸುವುದಿಲ್ಲ. ಆದರೆ, ಅದು ಭೂಮಿ ಮತ್ತು ಸೂರ್ಯನೊಂದಿಗೆ ನೇರವಾದ ರೇಖೆಯಲ್ಲಿ ಇರುವುದರಿಂದ ಭೂಕಂಪನದಂಥ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಮೇಡೆ ಸುದ್ದಿಯನ್ನು ಅಪ್ಪಳಿಸಿದ್ದಾನೆ.

ಕಲ್ಪನಾಲೋಕದ ಫೇರಿಟೇಲ್ ಕಥೆಗಳಿದ್ದ ಹಾಗೆ
ವಿಜ್ಞಾನಿಗಳು ಹೇಳುವುದೇ ಬೇರೆ. ಈ ನಿಬಿರು ಸುತ್ತ ಹೆಣೆಯಲಾಗಿರುವ ಕಥೆಗಳೆಲ್ಲ ಕಲ್ಪನಾಲೋಕದ ಫೇರಿಟೇಲ್ ಕಥೆಗಳಿದ್ದ ಹಾಗೆ. ಇದಕ್ಕೆ ತಲೆಬುಡ ಬಾಲಗಳೇ ಇರುವುದಿಲ್ಲ. ಯಾವಾಗಲೂ ಭ್ರಮಾಲೋಕದಲ್ಲಿ ಪರಿಭ್ರಮಣ ಮಾಡುವವರಿಗೆ ಈ ಥಿಯರಿಯಿಂದ ಒಂದು ಹೊಸ ಕಥೆ ಸಿಕ್ಕಂತಾಗಿದೆಯಷ್ಟೆ.

ಅಮೆರಿಕ, ಕೆನಡಾಗಳಲ್ಲಿ ಚಂಡಮಾರುತ
ಕ್ರಾಫ್ಟ್ ಎಂಬಾತ ಈ ಪ್ರಳಯಕ್ಕೆ ಸಂಬಂಧಿಸಿದಂತೆ ಬರೆದ ಲೇಖನದಲ್ಲಿ, ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ಅದರುತ್ತಿರುವುದು, ಚಂಡಮಾರುತಗಳು ಅಪ್ಪಳಿಸುತ್ತಿರುವುದು, ಹೆಚ್ಚಾಗಿ ಅಮೆರಿಕ, ಕೆನಡಾ ಪ್ರದೇಶಗಳಲ್ಲಿ ಸಂಭವಿಸುತ್ತಿರುವುದು ಮುಂಬರುವ ಪ್ರಳಯದ ಮುನ್ಸೂಚನೆಯಾಗಿದೆ ಎಂದು ವಿವರಿಸಲಾಗಿದೆ.

ಪ್ರಳಯದ ಬಗ್ಗೆ ಚರ್ಚೆ ಇದು ಮೊದಲೇನಲ್ಲ
ಇಂಥಹ ಪ್ರಳಯದ ಬಗ್ಗೆ ಚರ್ಚೆ ನಡೆಯುತ್ತಿರುವುದು ಇದು ಮೊದಲೇನಲ್ಲ. 2003ರಲ್ಲಿಯೇ ಪ್ರಳಯದ ಸುದ್ದಿ ಬಿರುಗಾಳಿ ಎಬ್ಬಿಸಿ, ಜನರ ಹೃದಯ ಬಡಿತ ಹೆಚ್ಚಿಸಿ ನಂತರ ತಣ್ಣಗಾಗಿತ್ತು. ಸೆಪ್ಟೆಂಬರ್ 23ರ ಪ್ರಳಯ ದಿನವೂ ಕೂಡ ಯಾವುದೇ ಮುನ್ಸೂಚನೆ ನೀಡದಂತೆ ಇತಿಹಾಸದ ಪುಟಗಳನ್ನು ಸೇರಿದೆ.

ಬಜ್ಜಿ ಬೋಂಡಾ ರೆಡಿಯಾಗಿಟ್ಟುಕೊಳ್ಳಿ
ನವೆಂಬರ್ 19 ಹತ್ತಿರ ಬರುತ್ತಿದ್ದಂತೆ, ನಮ್ಮ ಟಿವಿ ವಾಹಿನಿಗಳಲ್ಲಿ ಮಾತ್ರ ರಸವತ್ತಾದ ವ್ಯಾಖ್ಯಾನಗಳನ್ನು ನಿರೀಕ್ಷಿಸಬಹುದು. ಚಳಿಗಾಲ ಕೂಡ ಆರಂಭವಾಗಿರುವುದರಿಂದ ಬಜ್ಜಿ, ಬೋಂಡಾಗಳನ್ನು ರೆಡಿಯಾಗಿಟ್ಟುಕೊಂಡು ಕಾಫಿ ಚಹಾ ಹೀರುತ್ತ ಇವುಗಳ ಕುರಿತ ಚರ್ಚೆಯನ್ನು ಮನಸೋಇಚ್ಛೆ ಕೇಳಿ ಆನಂದಿಸಬಹುದು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications