ಪ್ರಳಯಕ್ಕೆ ಹೊಸ ದಿನಾಂಕ ನಿಗದಿ, ನವೆಂಬರ್ 19!
Recommended Video

ಬೆಂಗಳೂರು, ಅಕ್ಟೋಬರ್ 28 : ನವೆಂಬರ್ 19, ಭಾನುವಾರ! ಇದು ಹಲವರ ಪಾಲಿಗೆ ಕ್ಯಾಲೆಂಡರ್ ಮೇಲಿರುವ ಒಂದು ಸಾಮಾನ್ಯ ಸಂಖ್ಯೆ, ಒಂದು ದಿನಾಂಕ ಮಾತ್ರ. ಜೋರಾಗಿ ಗಾಳಿಬೀಸಿ ಪಟಪಟ ಹಾರಿದರೆ ಆ ಒಂದು ದಿನದ ಪಟವೂ ಹಾರಿಹೋಗಲು ಎಷ್ಟು ಸಮಯ ಬೇಕು?
ಆದರೆ, ಈ ದಿನ ಪ್ರಳಯದ ಮೇಲೆ ಅಪಾರ ನಂಬಿಕೆ ಇಟ್ಟವರಿಗೆ ಸಾಮಾನ್ಯ ದಿನವಾಗಿರಲಾರದು. ಏಕೆಂದರೆ, ಸೆಪ್ಟೆಂಬರ್ 23ರಂದು ಇಡೀ ವಿಶ್ವವೇ ಮುಳುಗಿಹೋಗುತ್ತದೆ ಎಂದು ಷರಾ ಬರೆದಿದ್ದ ಡೇವಿಡ್ ಮೇಡೆ ಎಂಬಾತ ಈಬಾರಿ ಪ್ರಳಯಕ್ಕೆ ಮತ್ತೊಂದು ದಿನಾಂಕವನ್ನು ನಿಗದಿ ಪಡಿಸಿದ್ದಾರೆ. ಅದೇ ನವೆಂಬರ್ 19.
ನವೆಂಬರ್ 19ರಂದು ಭಾರೀ ಭೂಕಂಪಗಳಾಗಿಬಿಡುತ್ತವೆ, ಸುನಾಮಿಗಳೆದ್ದುಬಿಡುತ್ತವೆ, ಅಗ್ನಿಪರ್ವತ ಸಿಡಿಯುತ್ತದೆ, ಎಂದೂ ಕಂಡಿರದಂಥ ಅಗ್ನಿ ಅವಘಡ ಸಂಭವಿಸಿಬಿಡುತ್ತದೆ, ಬಿರುಗಾಳಿಯೆದ್ದು ರಾತ್ರೋರಾತ್ರಿ ಎಲ್ಲ ಸರ್ವನಾಶವಾಗಿಬಿಡುತ್ತದೆ ಎಂಬಿತ್ಯಾದಿಗಳನ್ನೇನೂ ಆತ ಹೇಳಿಲ್ಲ. ಆತ ಕೊಟ್ಟಿರುವುದು ಆ ದಿನಾಂಕ ಮಾತ್ರ.
ಅಷ್ಟರಲ್ಲಿ, ದೇವರು ದಿಂಡರುಗಳಲ್ಲಿ ಅಪಾರ ನಂಬಿಕೆಯಿಟ್ಟಿರುವ ಹಲವಾರು ಪ್ರಳಯವಾದಿಗಳು, ಚಕಚಕನೆ ಟೆಲಿಸ್ಕೋರ್ ಹಿಡಿದು ವಿಜ್ಞಾನಿಗಳು ಬಿಟ್ಟಸ್ಥಳ ತುಂಬಲು ಆರಂಭಿಸಿದ್ದಾರೆ. ಭಯಂಕರ ಭೂಕಂಪಗಳು ಭೂಮಿಯನ್ನು ತಲ್ಲಣಿಸುವಂತೆ ಮಾಡುತ್ತವೆ ಎಂದು ಭವಿಷ್ಯ ನುಡಿಯಲು ಆರಂಭಿಸಲಾಗಿದೆ.

ಕಪ್ಪು ನಕ್ಷತ್ರವೆಂದೇ ಖ್ಯಾತಿ ಗಳಿಸಿರುವ ನಿಬಿರು
ಕಪ್ಪು ನಕ್ಷತ್ರವೆಂದೇ ಖ್ಯಾತಿ ಗಳಿಸಿರುವ ನಿಬಿರು ಎಂಬ ಆಕಾಶಕಾಯ ನವೆಂಬರ್ 19ರ ಆಸುಪಾಸಿನಲ್ಲಿ ನಮ್ಮ ಸೌರಮಂಡಳದ ಬಳಿಯಿಂದ ಹಾದುಹೋಗಲಿದ್ದು, ಇದರಿಂದ ಭೂಮಿಯ ಹಲವಾರು ಭಾಗಗಳಲ್ಲಿ ಭೂಮಿ ಅದುರುತ್ತದೆ, ಸುನಾಮಿಗಳೇಳುತ್ತವೆ ಎಂಬ ಸುದ್ದಿಗಳು ಹರಿದಾಡಲು ಆರಂಭಿಸುತ್ತಿವೆ.

ಭೂಕಂಪನದಂಥ ಅವಘಡ ಸಂಭವಿಸುವ ಸಾಧ್ಯತೆ
ಈ ಬಾರಿ ನಿಬಿರು ಎಂಬ ಆಕಾಶಕಾಯ ಭೂಮಿಗೇನೂ ಅಪ್ಪಳಿಸುವುದಿಲ್ಲ. ಆದರೆ, ಅದು ಭೂಮಿ ಮತ್ತು ಸೂರ್ಯನೊಂದಿಗೆ ನೇರವಾದ ರೇಖೆಯಲ್ಲಿ ಇರುವುದರಿಂದ ಭೂಕಂಪನದಂಥ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಮೇಡೆ ಸುದ್ದಿಯನ್ನು ಅಪ್ಪಳಿಸಿದ್ದಾನೆ.

ಕಲ್ಪನಾಲೋಕದ ಫೇರಿಟೇಲ್ ಕಥೆಗಳಿದ್ದ ಹಾಗೆ
ವಿಜ್ಞಾನಿಗಳು ಹೇಳುವುದೇ ಬೇರೆ. ಈ ನಿಬಿರು ಸುತ್ತ ಹೆಣೆಯಲಾಗಿರುವ ಕಥೆಗಳೆಲ್ಲ ಕಲ್ಪನಾಲೋಕದ ಫೇರಿಟೇಲ್ ಕಥೆಗಳಿದ್ದ ಹಾಗೆ. ಇದಕ್ಕೆ ತಲೆಬುಡ ಬಾಲಗಳೇ ಇರುವುದಿಲ್ಲ. ಯಾವಾಗಲೂ ಭ್ರಮಾಲೋಕದಲ್ಲಿ ಪರಿಭ್ರಮಣ ಮಾಡುವವರಿಗೆ ಈ ಥಿಯರಿಯಿಂದ ಒಂದು ಹೊಸ ಕಥೆ ಸಿಕ್ಕಂತಾಗಿದೆಯಷ್ಟೆ.

ಅಮೆರಿಕ, ಕೆನಡಾಗಳಲ್ಲಿ ಚಂಡಮಾರುತ
ಕ್ರಾಫ್ಟ್ ಎಂಬಾತ ಈ ಪ್ರಳಯಕ್ಕೆ ಸಂಬಂಧಿಸಿದಂತೆ ಬರೆದ ಲೇಖನದಲ್ಲಿ, ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ಅದರುತ್ತಿರುವುದು, ಚಂಡಮಾರುತಗಳು ಅಪ್ಪಳಿಸುತ್ತಿರುವುದು, ಹೆಚ್ಚಾಗಿ ಅಮೆರಿಕ, ಕೆನಡಾ ಪ್ರದೇಶಗಳಲ್ಲಿ ಸಂಭವಿಸುತ್ತಿರುವುದು ಮುಂಬರುವ ಪ್ರಳಯದ ಮುನ್ಸೂಚನೆಯಾಗಿದೆ ಎಂದು ವಿವರಿಸಲಾಗಿದೆ.

ಪ್ರಳಯದ ಬಗ್ಗೆ ಚರ್ಚೆ ಇದು ಮೊದಲೇನಲ್ಲ
ಇಂಥಹ ಪ್ರಳಯದ ಬಗ್ಗೆ ಚರ್ಚೆ ನಡೆಯುತ್ತಿರುವುದು ಇದು ಮೊದಲೇನಲ್ಲ. 2003ರಲ್ಲಿಯೇ ಪ್ರಳಯದ ಸುದ್ದಿ ಬಿರುಗಾಳಿ ಎಬ್ಬಿಸಿ, ಜನರ ಹೃದಯ ಬಡಿತ ಹೆಚ್ಚಿಸಿ ನಂತರ ತಣ್ಣಗಾಗಿತ್ತು. ಸೆಪ್ಟೆಂಬರ್ 23ರ ಪ್ರಳಯ ದಿನವೂ ಕೂಡ ಯಾವುದೇ ಮುನ್ಸೂಚನೆ ನೀಡದಂತೆ ಇತಿಹಾಸದ ಪುಟಗಳನ್ನು ಸೇರಿದೆ.

ಬಜ್ಜಿ ಬೋಂಡಾ ರೆಡಿಯಾಗಿಟ್ಟುಕೊಳ್ಳಿ
ನವೆಂಬರ್ 19 ಹತ್ತಿರ ಬರುತ್ತಿದ್ದಂತೆ, ನಮ್ಮ ಟಿವಿ ವಾಹಿನಿಗಳಲ್ಲಿ ಮಾತ್ರ ರಸವತ್ತಾದ ವ್ಯಾಖ್ಯಾನಗಳನ್ನು ನಿರೀಕ್ಷಿಸಬಹುದು. ಚಳಿಗಾಲ ಕೂಡ ಆರಂಭವಾಗಿರುವುದರಿಂದ ಬಜ್ಜಿ, ಬೋಂಡಾಗಳನ್ನು ರೆಡಿಯಾಗಿಟ್ಟುಕೊಂಡು ಕಾಫಿ ಚಹಾ ಹೀರುತ್ತ ಇವುಗಳ ಕುರಿತ ಚರ್ಚೆಯನ್ನು ಮನಸೋಇಚ್ಛೆ ಕೇಳಿ ಆನಂದಿಸಬಹುದು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications