Kim Jong Un: ಸರ್ವಾಧಿಕಾರಿ ಕಿಮ್ ನಾಡಲ್ಲಿ ಜಡೆ ಜಗಳ ಬಲು ಜೋರು!
ಕಿಮ್ ಜಾಂಗ್ ಉನ್ ಅಂದ್ರೆ ಸರ್ವಾಧಿಕಾರಿ, ಕ್ರೂರತ್ವಕ್ಕೆ ಮತ್ತೊಂದು ಹೆಸರೇ ಈ ಕಿಮ್ಮಣ್ಣ ಅನ್ನೋ ಆರೋಪ ಇದೆ. ಅದರಲ್ಲೂ ತನ್ನ ಮಾತು ಕೇಳದ ಪ್ರತಿಯೊಬ್ಬರನ್ನೂ ಕೊಲೆ ಮಾಡಿ ಬಿಸಾಕುವುದು, ಮೊಸಳೆ & ನಾಯಿಗಳಿಗೆ ಆಹಾರವಾಗಿ ನೀಡುವುದು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ಗೆ ಕಾಯಿಲೆ ಆಗಿದೆ. ಆದರೆ ಇಂತಿಪ್ಪ ಕಿಮ್ ಜಾಂಗ್ ಉನ್ಗೆ ಕೂಡ ಜಡೆ ಜಗಳ ದೊಡ್ಡ ಸಮಸ್ಯೆ ತಂದಿಟ್ಟಿದೆ ಅಂದ್ರೆ ನೀವು ಕೂಡ ನಂಬಲೇಬೇಕು!
ಅಂದಹಾಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ತನವನ್ನು ಮುಂದುವರಿಸಿಕೊಂಡು ಬಂದಿರುವ ಕಿಮ್ ಜಾಂಗ್ ಉನ್, ಇಡೀ ಜಗತ್ತಿನಲ್ಲಿ ಪರಮಾಣು ಯುದ್ಧದ ಭಯ ಹುಟ್ಟು ಹಾಕಿದ್ದಾನೆ. ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಹಲವು ದೇಶಗಳನ್ನು ಎದುರು ಹಾಕಿಕೊಂಡಿರುವ ಕಿಮ್ ಪದೇ ಪದೇ ಜಗತ್ತಿನ ಗಮನ ಸೆಳೆಯುತ್ತಿರುತ್ತಾನೆ. ಇಂತಿಪ್ಪ ಕಿಮ್ ಜಾಂಗ್ ಉನ್ಗೆ ಒಬ್ಬಳು ತಂಗಿ ಕೂಡ ಇದ್ದು, ಆಕೆಯ ಹೆಸರು ಕಿಮ್ ಯೋ ಜಾಂಗ್. ಇವಳೇ ಮುಂದೆ ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. ಆದರೆ ಆಕೆಯನ್ನು ಮೂಲೆಗುಂಪು ಮಾಡಿದ್ದು ಯಾವ ಕಾರಣಕ್ಕೆ ಗೊತ್ತಾ?

ಸರ್ವಾಧಿಕಾರಿಗೆ ಜಡೆ ಜಗಳದ ಕಾಟ!
ಹೌದು, ಯಾವ ಸರ್ವಾಧಿಕಾರಿ ಆಗಿದ್ದರೇನು & ಅದೆಷ್ಟು ಕ್ರೂರತನ ಇದ್ದರೇನು. ಹೆಂಡತಿಯ ಎದುರು ತಲೆ ತಗ್ಗಿಸಿ ನಡೆಯಬೇಕು ಎಂಬುದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿಚಾರದಲ್ಲಿ ನಿಜವಾಗಿದೆ. ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಎಂದು ಯಾವಾಗ ಜಗತ್ತು ಆತನ ತಂಗಿಯನ್ನ ಬಿಂಬಿಸಲು ಶುರು ಮಾಡಿತ್ತೋ, ಆ ನಂತರ ದೊಡ್ಡ ಗಲಾಟೆಯೇ ಕಿಮ್ ಕುಟುಂಬದಲ್ಲಿ ನಡೆದಿದೆ. ಅಲ್ಲದೆ ತಂಗಿಯ ಬದಲಾಗಿ ಮಗಳನ್ನು ಬೆಳೆಸಬೇಕು ಎಂಬ ಆಜ್ಞೆ ಕಿಮ್ ಜಾಂಗ್ ಉನ್ ಹೆಂಡತಿಯ ಕಡೆಯಿಂದ ಬಂದಿದೆಯಂತೆ.
ಹೀಗಾಗಿ ಕೊನೆಗೆ ಕಿಮ್ ಜಾಂಗ್ ಉನ್ ತಂಗಿ ಕಿಮ್ ಯೋ ಜಾಂಗ್ನ ಮೂಲೆಗೆ ತಳ್ಳಿ ಪದೇ ಪದೇ ತನ್ನ ಜೊತೆಯಲ್ಲಿ ಮಗಳನ್ನು ಸುತ್ತಾಡಿಸಿ, ಇಡೀ ಜಗತ್ತಿಗೆ ತನ್ನ ಮಗಳನ್ನು ಕಿಂಗ್ ಜಾಂಗ್ ಉನ್ ಪರಿಚಯ ಮಾಡಿಕೊಟ್ಟಿದ್ದಾನೆ ಎನ್ನಲಾಗಿದೆ. ಮತ್ತೊಂದು ಕಡೆ ಈ ವಿಚಾರದಲ್ಲಿ ಅಂದ್ರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಕುಟುಂಬದಲ್ಲಿ ದೊಡ್ಡ ಬಿರುಕು ಮೂಡಿದೆ ಎಂದು ಆರೋಪ ಮಾಡಲಾಗಿದೆ. ಇದು ಶತ್ರು ದೇಶಗಳಿಗೆ ಸಹಾಯವನ್ನ ಮಾಡುವ ನಿರೀಕ್ಷೆ ಇದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications