ಬಾಹ್ಯಾಕಾಶದ ಸುಂದರ ಚಿತ್ರ ಸೆರೆಹಿಡಿದ ನಾಸಾದ 'ಟೆಸ್'
Recommended Video

ವಾಷಿಂಗ್ಟನ್, ಸೆಪ್ಟೆಂಬರ್ 19: ಬಾಹ್ಯಾಕಾಶದಲ್ಲಿ ಹೊಸ ಗ್ರಹಗಳನ್ನು ಪತ್ತೆಹಚ್ಚಲು ನಾಸಾ ಉಡಾಯಿಸಿದ್ದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (ಟೆಸ್) ದಕ್ಷಿಣ ಆಕಾಶದ 'ಫರ್ಸ್ಟ್ ಲೈಟ್' ಚಿತ್ರವನ್ನು ರವಾನಿಸಿದೆ.
ಟೆಸ್ ಕಳುಹಿಸಿದ ಚಿತ್ರವನ್ನು ನಾಸಾ ಹಂಚಿಕೊಂಡಿದೆ. 'ಫರ್ಸ್ಟ್ ಲೈಟ್' ಎಂದರೆ ಬಾಹ್ಯಾಕಾಶ ವಿಜ್ಞಾನ ಭಾಷೆಯಲ್ಲಿ, ಟೆಲಿಸ್ಕೋಪ್ ಒಂದು ರಚನೆಯಾದ ಬಳಿಕ ಮೊದಲ ಬಾರಿಗೆ ಚಿತ್ರಗಳನ್ನು ಪಡೆದುಕೊಳ್ಳುವುದು.

ಟೆಸ್ ಕಳುಹಿಸಿರುವ ಚಿತ್ರದಲ್ಲಿ ಸುಮಾರು 2 ಲಕ್ಷ ನಕ್ಷತ್ರಗಳು ಇವೆ. ಟೆಸ್ ಭೂಮಿಗೆ ಚಿತ್ರ ಕಳುಹಿಸಿರುವುದು ಇದು ಮೊದಲೇನಲ್ಲ. ಪರೀಕ್ಷೆಯ ಹಂತದಲ್ಲಿ ಕೇವಲ ಒಂದು ಕ್ಯಾಮೆರಾ ಬಳಸಿ ಬಾಹ್ಯಾಕಾಶದ ಎರಡು ಸೆಕೆಂಡ್ ಪರೀಕ್ಷಾರ್ಥ ಚಿತ್ರವನ್ನು ಕ್ಲಿಕ್ಕಿಸಿತ್ತು.
ಉಪಗ್ರಹದ ಎಲ್ಲ ನಾಲ್ಕು ಕ್ಯಾಮೆರಾಗಳನ್ನು ಬಳಸಿಕೊಂಡು ಈ ಚಿತ್ರ ತೆಗೆಯಲಾಗಿದೆ. ಇದರಿಂದ ದಕ್ಷಿಣ ಆಕಾಶದ 16 ವಿಭಿನ್ನ ಚಿತ್ರಗಳನ್ನು ಒಂದೆಡೆ ಸೇರಿಸುವ ಪನೋರಮಾ ಚಿತ್ರ ದೊರೆತಿದೆ.
ನಕ್ಷತ್ರಗಳು ಮತ್ತು ಗ್ಯಾಲಕ್ಸಿಗಳು ಇರುವ ಚಿತ್ರ ಸರಣಿಯಲ್ಲಿ ಕ್ಷೀರಪಥ ಗ್ಯಾಲಕ್ಸಿಗೆ ಸಮೀಪವಿರುವ ಬೃಹತ್ ಮತ್ತು ಸಣ್ಣ ಮೋಡಗಳು (ಮ್ಯಾಗೆಲ್ಲಾನಿಕ್ ಕ್ಲೌಡ್), ಕ್ಷೀರಪಥದ ಸುತ್ತ ಸುತ್ತುತ್ತಿರುವ ಎರಡು ಕುಬ್ಜ ಗ್ಯಾಲಕ್ಸಿಗಳು ಮತ್ತು ಬೆಟಾ ಗ್ರುಯಿಸ್ ಮತ್ತು ಆರ್ ಡೊರಾಡಸ್ ಎಂಬ ಎರಡು ಪ್ರಕಾಶಮಾನ ನಕ್ಷತ್ರಗಳು ಸಹ ಸೆರೆಯಾಗಿವೆ.

ಫರ್ಸ್ಟ್ ಲೈಟ್ ಚಿತ್ರವು ಟೆಸ್ ಕ್ಯಾಮೆರಾಗಳ ಸಾಮರ್ಥ್ಯವನ್ನು ತೋರಿಸಿದೆ. ಮತ್ತೊಂದು ಭೂಮಿಯನ್ನು ಹುಡುಕುವ ನಮ್ಮ ಯೋಜನೆಗೆ ನಂಬಲಸಾಧ್ಯವಾದಷ್ಟು ಶಕ್ತಿ ಇದೆ ಎನ್ನುವುದನ್ನು ಇದು ಸಾಬೀತುಪಡಿಸಿದೆ ಎಂದು ನಾಸಾದ ವಿಜ್ಞಾನಿ ಪೌಲ್ ಹೆರ್ಟ್ಜ್ ಹೇಳಿದ್ದಾರೆ.
ಹೊಸ ಗ್ರಹಗಳನ್ನು ಅನ್ವೇಷಣೆ ಮಾಡುವ ಯೋಜನೆಯಲ್ಲಿ ಟೆಸ್ 27 ದಿನಗಳ ಕಾಲ ಬಾಹ್ಯಾಕಾಶದ ಚಿತ್ರಗಳನ್ನು ಸೆರೆಹಿಡಿಯಲಿದೆ. ತನ್ನ ಮೊದಲ ಒಂದು ವರ್ಷ ಅದು ದಕ್ಷಿಣ ಭಾಗದ ಆಕಾಶದತ್ತ ಕೇಂದ್ರೀಕರಿಸಲಿದೆ. ನಂತರದ ವರ್ಷ ಉತ್ತರ ಭಾಗದತ್ತ ಪಥ ಬದಲಿಸಲಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications