ಭೂಮಿ ತಬ್ಬಲಿಯಲ್ಲ, 10 ಅವಳಿ ಸೋದರಿಯರು ಪತ್ತೆ!
ಭೂಮಿಯನ್ನೇ ಹೋಲುವ ಗ್ರಹವೊಂದನ್ನು ಪತ್ತೆ ಹಚ್ಚಿರುವುದಾಗಿ ನಾಸಾ ಪ್ರಕಟಿಸಿದೆ. ನಾಸಾದ ಹಳೆ ಟೆಲಿಸ್ಕೋಪ್ ಕೆಪ್ಲೆರ್ ಅವಿಷ್ಕಾರದ ಮಾಹಿತಿಯಂತೆ ಒಂದಲ್ಲ 10 ಗ್ರಹಗಳು ಪತ್ತೆಯಾಗಿವೆ.
ನ್ಯೂಯಾರ್ಕ್, ಜೂನ್ 20: ಭೂಮಿಯನ್ನೇ ಹೋಲುವ ಗ್ರಹವೊಂದನ್ನು ಪತ್ತೆ ಹಚ್ಚಿರುವುದಾಗಿ ನಾಸಾ ಪ್ರಕಟಿಸಿದೆ. ನಾಸಾದ ಹಳೆ ಟೆಲಿಸ್ಕೋಪ್ ಕೆಪ್ಲೆರ್ ಅವಿಷ್ಕಾರದ ಮಾಹಿತಿಯಂತೆ ಒಂದಲ್ಲ 10 ಗ್ರಹಗಳು ಪತ್ತೆಯಾಗಿವೆ.
ಹೊಸ ಗ್ರಹಗಳು ಭೂ ಗ್ರಹವನ್ನು ಎಲ್ಲಾ ರೀತಿಯಲ್ಲಿ ಹೋಲುತ್ತಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮಹತ್ತರವಾದ ಆವಿಷ್ಕಾರವನ್ನು ಸಾಧಿಸಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ನಮ್ಮ ಸೌರಮಂಡಲದ ಆಚೆಗೆ ಮತ್ತೊಂದು ಸೌರಮಂಡಲವನ್ನು ಗುರುತಿಸಿರುವುದಾಗಿ ಘೋಷಿಸಿತ್ತು.
ಇದಾದ ಬಳಿಕ ಈಗ ಭೂಮಿಯನ್ನು ಹೋಲುವ ಗ್ರಹಗಳ ಸಮೂಹವನ್ನು ಪತ್ತೆ ಹಚ್ಚಿದೆ. ಕಲ್ಲು ಪದರ, ಹವಾಮಾನ ವಿವರಗಳು ಲಭ್ಯವಾಗಿದ್ದು, ಗಾತ್ರ ಭೂಮಿಗಿಂತ 1.75 ಹೆಚ್ಚಾಗಿದೆ, ಆದರೆ, ಜೀವಜಲ ಲಭ್ಯತೆ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ.
ಫೆಬ್ರವರಿಯ ಸಂಶೋಧನೆಯಂತೆ ಭೂಮಿಯಷ್ಟೇ ಗಾತ್ರವುಳ್ಳ ಏಳು ಹೊಸ ಗ್ರಹಗಳನ್ನು ಪತ್ತೆ ಹಚ್ಚಲಾಗಿತ್ತು, ಕುಬ್ಜ ನಕ್ಷತ್ರ(ನಮ್ಮ ಸೂರ್ಯನಂತೆ ಇರುವ)ವನ್ನು ಈ ಎಲ್ಲಾ ಗ್ರಹಗಳು ಸುತ್ತುತ್ತಲಿವೆ. ಈ ಹೊಸ ಸೌರವ್ಯೂಹ ಸರಿ ಸುಮಾರು 39 ಜ್ಯೋತಿರ್ ವರ್ಷ ದೂರದಲ್ಲಿದೆ ಎಂದು ನಾಸಾ(NASA) ಪ್ರಕಟಿಸಿತ್ತು. ಈಗ ಈ ಸಂಖ್ಯೆ ಇನ್ನಷ್ಟು ಹೆಚ್ಚಿದೆ.
1995ರಲ್ಲಿ ನಾಸಾದ ಕೆಪ್ಲರ್ ಟೆಲಿಸ್ಕೋಪ್ ಮೊಟ್ಟ ಮೊದಲ ಬಾರಿಗೆ ಮತ್ತೊಂದು ಸೌರ ಮಂಡಲ ಇರುವ ಬಗ್ಗೆ ಸುಳಿವು ನೀಡಿತ್ತು. ಕೆಪ್ಲರ್ 10 ಬಿ ಸಮಾರು 540 ಜ್ಯೋತಿರ್ ವರ್ಷಗಳ ದೂರದಲ್ಲಿದೆ ಎಂದು ಹೇಳಲಾಯಿತು. ಇದಾದ ಬಳಿಕ ಅನೇಕ ಸಂಶೋಧನೆಗಳು ನಡೆದರೂ ಈಗ ಮಹತ್ವದ ಫಲಿತಾಂಶ ಸಿಕ್ಕಿದೆ.
ಟೆಲಿಸ್ಕೋಪ್ ಗಳು: ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್, ಯುರೋಪಿಯನ ಇಎಸ್ ಒ ಟೆಲಿಸ್ಕೋಪ್, ಇಎಸ್ಎ/ ಸಿಎಸ್ ಎ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇನ್ಮುಂದೆ ಹೊಸ ಸೌರ ಮಂಡಲದಲ್ಲಿ ನೀರಿನ ಮೂಲ , ಪ್ರಮಾಣ, ಜೀವ ರಾಶಿ ನೆಲೆಸಲು ಸಾಧ್ಯವೇ? ಈಗಾಗಲೆ ಜೀವಿಗಳು ನೆಲೆಸಿದ್ದಾರೆಯೆ? ಎಂಬುದರ ಸಂಶೋಧನೆಯಲಿ ತೊಡಗಲಿವೆ. ಇದು ಅಂತ್ಯವಲ್ಲ ಆರಂಭ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications