ಬೆಂಗಳೂರು ಸ್ಟ್ರೀಟ್ ನಿಂದ ಪ್ರಚಾರ ಆರಂಭಿಸಿದ ಪಾಟೀಲ
ಲಂಡನ್, ಮೇ 22 : ಕನ್ನಡಿಗ, ಅನಿವಾಸಿ ಭಾರತೀಯ ಡಾ ನೀರಜ್ ಪಾಟೀಲ ಅವರು ಸಂಸತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಪ್ರಚಾರವನ್ನು 'ಬೆಂಗಳೂರು ಸ್ಟ್ರೀಟ್'ನಿಂದ ಸೋಮವಾರ ಆರಂಭಿಸಿದರು.
ಕಲಬುರಗಿ ಮೂಲದವರಾಗಿರುವ ಡಾ. ನೀರಜ್ ಪಾಟೀಲ ಅವರು, ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಪುಟ್ನಿ ಕ್ಷೇತ್ರದಿಂದ ಚುನಾವಣೆಗೆ ಧುಮುಕಿದ್ದಾರೆ. ನೀರಜ್ ಅವರು ಲ್ಯಾಂಬೆತ್ ಮೇಯರ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.[ಬಸವಣ್ಣ ಪ್ರತಿಮೆ ಅನಾವರಣ ಆಹ್ವಾನ ಸ್ವೀಕರಿಸಿದ ಮೋದಿ]

ಈ ಬೆಂಗಳೂರು ಸ್ಟ್ರೀಟ್ ಇರುವುದು ಲಂಡನ್ ನ ಬರೋ ಆಫ್ ವಾಂಡ್ಸ್ ವರ್ತ್ ನಲ್ಲಿ. ಇಲ್ಲಿ ಪುಟ್ನಿ, ಬಟ್ಟರ್ಸಿಯಾ ಮತ್ತು ಟೂಟಿಂಗ್ ಎಂಬ ಮೂರು ಸಂಸತ್ ಕ್ಷೇತ್ರಗಳು ಬರುತ್ತವೆ. ಲಂಡನ್ ನಲ್ಲಿರುವ ಬೆಂಗಳೂರು ಸ್ಟ್ರೀಟ್ ನ ಪೋಸ್ಟ್ ಕೋಡ್ SW15 1QE.
ಹತ್ತೊಂಬತ್ತನೇ ಸೆಂಚುರಿಯಲ್ಲಿ ಬ್ಯಾಂಗಲೋರ್ ರೆಜಿಮೆಂಟ್ ಇಲ್ಲಿ ಇದ್ದಿದ್ದರಿಂದ ಈ ಓಣಿಯನ್ನು ಬೆಂಗಳೂರು ಸ್ಟ್ರೀಟ್ ಎಂದು ಕರೆಯಲಾಗುತ್ತಿದೆ. ಇಲ್ಲಿಂದಲೇ ಸಂಸದ ಕ್ರಾಯ್ಡನ್ ನಾರ್ತ್ ಮತ್ತು ಸ್ಥಳೀಯ ಸಚಿವ ಸ್ಟೀವ್ ರೀಡ್ ಅವರು ನೀರಜ್ ಪರವಾಗಿ ಪ್ರಚಾರಕ್ಕೆ ಚಾಲನೆ ನೀಡಿದರು.[ಎನ್ನಾರೈ ನೀರಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ]

2017ರ ಜೂನ್ 8ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ 30 ಬಿಲಿಯನ್ ಪೌಂಡ್ ವ್ಯಯಿಸುತ್ತಿರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಲೇಬರ್ ಪಕ್ಷ ಘೋಷಿಸಿದೆ.

ಡಾ. ನೀರಜ್ ಪಾಟೀಲ ಅವರು ಕನ್ಸರ್ವೇಟೀವ್ ಪಕ್ಷದ ಬ್ರಿಟನ್ ನ ಶಿಕ್ಷಣ ಸಚಿವ ಜಸ್ಟಿನ್ ಗ್ರೀಟಿಂಗ್ ವಿರುದ್ಧ ಸೆಣಸುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ನೀರಜ್ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ಲೇಬರ್ ಪಕ್ಷದ ಹುರಿಯಾಳುವನ್ನಾಗಿ ಆರಿಸಲಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications